ಆ್ಯಪ್ನಗರ

ಚುನಾವಣೆ ನಂತರ ಮತ್ತಷ್ಟು ಅತೃಪ್ತರ ರಾಜೀನಾಮೆ

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಇನ್ನಷ್ಟು ಅತೃಪ್ತ ಶಾಸಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿ ಹೊರಬರಲಿದ್ದು, ಮೈತ್ರಿ ಸರಕಾರ

Vijaya Karnataka 4 Apr 2019, 5:00 am
ಬೆಳಗಾವಿ: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಇನ್ನಷ್ಟು ಅತೃಪ್ತ ಶಾಸಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿ ಹೊರಬರಲಿದ್ದು, ಮೈತ್ರಿ ಸರಕಾರ ತಾನಾಗಿಯೇ ಬಿದ್ದು ಹೋಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.
Vijaya Karnataka Web BLG-0304-2-52-3 ISHWARAPPA1


ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ''ಉಮೇಶ್‌ ಜಾಧವ್‌ ರಾಜಿನಾಮೆ ಅಂಗೀಕಾರ ಕುರಿತು ಅತೃಪ್ತ ಶಾಸಕರಲ್ಲಿ ಭಯ ಮನೆ ಮಾಡಿತ್ತು. ಆದರೆ, ರಾಜೀನಾಮೆ ಅಂಗೀಕಾರವಾದ್ದರಿಂದ ಅವರಿಗೆಲ್ಲ ಧೈರ್ಯ ಬಂದಿದೆ'', ಎಂದರು.

''ಸಿದ್ದರಾಮಯ್ಯ ಅವರಿಗೆ ಜಾತಿ ಬಿಟ್ಟರೆ ಬೇರೆನೂ ಗೊತ್ತಿಲ್ಲ. ಅವರು ಕುರುಬ ಸಮುದಾಯದ ಎಷ್ಟು ಜನರಿಗೆ ಅನುಕೂಲ ಮಾಡಿದ್ದಾರೆ ?'', ಎಂದು ಪ್ರಶ್ನಿಸಿದ ಈಶ್ವರಪ್ಪ, ''ಎಚ್‌.ವಿಶ್ವನಾಥ್‌ ಮತ್ತು ಜಿ. ಶಂಕರ್‌ ಅವರಿಗೂ ಮೋಸ ಮಾಡಿದ್ದಾರೆ. ಸೋಲುವ ಕ್ಷೇತ್ರಗಳಲ್ಲಿ ಕುರುಬರಿಗೆ ಟಿಕೆಟ್‌ ಕೊಡಿಸಿದ್ದಾರೆ'', ಎಂದು ಹರಿಹಾಯ್ದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಇದ್ದರು.

ನಾನು ರಾಷ್ಟ್ರವಾದಿ, ಸಿದ್ದು ಜಾತಿವಾದಿ
''ನಾನು ಕುರುಬ ನಾಯಕನಲ್ಲ, ರಾಷ್ಟ್ರವಾದಿ. ಸಿದ್ದರಾಮಯ್ಯ ಜಾತಿವಾದಿ. ಈ ವಿಷಯ ಹೇಳಿದರೆ ಸಿದ್ದರಾಮಯ್ಯ ಅವರಿಗೆ ಸಿಟ್ಟು ಬರುತ್ತದೆ. ಕುರುಬರ ಉದ್ಧಾರದ ಹೆಸರಲ್ಲಿ ಸ್ವತಃ ಸಿದ್ದರಾಮಯ್ಯ ಉದ್ಧಾರ ಆಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳ ಕುರಿತು ಇಂದೇ ಶ್ವೇತಪತ್ರ ಹೊರಡಿಸಿದೆ ನಾನು ಅವರು ಹೇಳಿದಂತೆ ಕೇಳುತ್ತೇನೆ'', ಎಂದು ಈಶ್ವರಪ್ಪ ಸವಾಲು ಹಾಕಿದರು.

ರಾಹುಲ್‌ ಗಾಂಧಿಗೆ ಸೋಲಿನ ಭಯ
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ''ರಾಹುಲ್‌ ಗಾಂಧಿ ಅವರನ್ನು ಅಮೇಥಿಯ ಜನರು ಸೋಲಿಸಲು ರೆಡಿಯಾಗಿದ್ದಾರೆ. ಅದಕ್ಕಾಗಿ ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೂಗಳಿಗಿಂತ ಮುಸ್ಲಿಮರು ಜಾಸ್ತಿ ಎನ್ನುವ ಕಾರಣಕ್ಕೆ ಇಲ್ಲಿ ಸ್ಪರ್ಧಿಸುತ್ತಿದ್ದಾರೆ'', ಎಂದು ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ