ಆ್ಯಪ್ನಗರ

ವಿಘ್ನವಿನಾಶಕನಿಗೆ ವಿದಾಯ; ಮೂರ್ತಿ ವಿಸರ್ಜನೆಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ...

Vijaya Karnataka 2 Sep 2020, 5:00 am
ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಚತುರ್ಥಿಯ 11ನೇ ದಿನವಾದ ಮಂಗಳವಾರ ವಿಸರ್ಜನೆ ಮಾಡಲಾಯಿತು.
Vijaya Karnataka Web 1LBS1_53
ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿಗಣೇಶ ಮೂರ್ತಿಗಳ ವಿಸರ್ಜನೆಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.


ನಗರದ ಸಮಾದೇವಿ ಗಲ್ಲಿಯಲ್ಲಿಗಣೇಶ ವಿಸರ್ಜನೆಗೆ ಶಾಸಕ ಅನಿಲ ಬೆನಕೆ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಗರದಲ್ಲಿ900ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಎಲ್ಲಗಣೇಶ ಮೂರ್ತಿಗಳನ್ನು ನಗರದ ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡ, ಕಪಿಲತೀರ್ಥ, ಮಾರ್ಕಂಡೇಯ ನದಿಯಲ್ಲಿವಿಸರ್ಜನೆ ಮಾಡಲಾಯಿತು. ಜತೆಗೆ ನಗರದ 21 ಕಡೆ ವ್ಯವಸ್ಥೆ ಮಾಡಿದ್ದ ಸಂಚಾರಿ ಹೊಂಡಗಳಲ್ಲೂವಿಸರ್ಜನೆ ನಡೆಯಿತು. ಮೂರ್ತಿಗಳ ವಿಸರ್ಜನೆಗೆ 15 ತಂಡಗಳನ್ನು ನಿಯೋಜಿಸಲಾಗಿತ್ತು.

ಅದ್ಧೂರಿ ಆಚರಣೆ ಇಲ್ಲ
ಬೆಳಗಾವಿ ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಿತ್ತು. ಜತೆಗೆ ಅನೇಕ ನಿಯಮಗಳನ್ನು ವಿಧಿಸಿತ್ತು. ಅದರಂತೆ ಮೆರವಣಿಗೆ ಇಲ್ಲದೆ ಸರಳವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಪ್ರತಿ ವರ್ಷ ಡಿಜೆ ಮತ್ತು ನೃತ್ಯಗಳ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿತ್ತು. ಮುಂಬಯಿ, ಪುಣೆ ನಂತರ ಚೌತಿ ಹಬ್ಬದ ಆಚರಣೆಗೆ ಹೆಸರುವಾಸಿಯಾದ ಬೆಳಗಾವಿಯಲ್ಲಿವಿಸರ್ಜನೆ ಮೆರವಣಿಗೆಯೂ ವಿಶೇಷವಾಗಿ ನಡೆಯುವುದರಿಂದ ಲಕ್ಷಾಂತರ ಜನ ಸೇರುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ