ಆ್ಯಪ್ನಗರ

ನಿರಂತರ 26 ಗಂಟೆಗಳ ಕಾಲ ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ

ಬೆಳಗಾವಿ: ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸತತ 26 ಗಂಟೆಗಳ ಕಾಲ ...

Vijaya Karnataka 14 Sep 2019, 5:00 am
ಬೆಳಗಾವಿ: ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸತತ 26 ಗಂಟೆಗಳ ಕಾಲ ನಡೆದು ದಾಖಲೆ ಸೃಷ್ಟಿಸಿತು.
Vijaya Karnataka Web 13GANESHA083416


ಗುರುವಾರ ಸಂಜೆ 5.15ಕ್ಕೆ ಹುತಾತ್ಮ ಚೌಕ್‌ನಿಂದ ಚಾಲನೆ ಪಡೆದಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ 7.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಪಾಲಿಕೆಯ ಗಣೇಶ ಮೂರ್ತಿ ವಿಸರ್ಜನೆಯೊಂದಿಗೆ ಕೊನೆಗೊಂಡಿತು. ಪಾಲಿಕೆ ಗಣೇಶ ಮೂರ್ತಿಯೊಂದಿಗೆ ಖಡಕ್‌ಗಲ್ಲಿಮತ್ತು ಅನಗೋಳದ ಗಣೇಶ ಮೂರ್ತಿಗಳೂ ವಿಸರ್ಜನೆಗೊಂಡವು.

ಕಳೆದ ವರ್ಷ ಸಂಜೆ 6.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಕೊನೆಯ ಮೂರ್ತಿ ವಿಸರ್ಜನೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಒಂದು ಗಂಟೆ ಹೆಚ್ಚಿನ ಸಮಯವಾಯಿತು. ಮುಖ್ಯ ಮೆರವಣಿಗೆಯಲ್ಲಿಆಗಮಿಸಿದ್ದ ಅನೇಕ ಗಣೇಶ ಮಂಡಳದವರು ಕಪಿಲೇಶ್ವರ ಹೊಂಡದಲ್ಲಿದಟ್ಟಣೆ ಇರುವುದರಿಂದ ಶುಕ್ರವಾರ ಮಧ್ಯಾಹ್ನದ ಬಳಿಕ ಮೆರವಣಿಗೆಯಿಂದ ಬೇರ್ಪಟ್ಟು ಜಕ್ಕಿನ ಹೊಂಡಕ್ಕೆ ತೆರಳಿ ಅಲ್ಲಿಮೂರ್ತಿಗಳನ್ನು ವಿಸರ್ಜಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ