ಬೆಳಗಾವಿ: ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸತತ 26 ಗಂಟೆಗಳ ಕಾಲ ನಡೆದು ದಾಖಲೆ ಸೃಷ್ಟಿಸಿತು.
ಗುರುವಾರ ಸಂಜೆ 5.15ಕ್ಕೆ ಹುತಾತ್ಮ ಚೌಕ್ನಿಂದ ಚಾಲನೆ ಪಡೆದಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ 7.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಪಾಲಿಕೆಯ ಗಣೇಶ ಮೂರ್ತಿ ವಿಸರ್ಜನೆಯೊಂದಿಗೆ ಕೊನೆಗೊಂಡಿತು. ಪಾಲಿಕೆ ಗಣೇಶ ಮೂರ್ತಿಯೊಂದಿಗೆ ಖಡಕ್ಗಲ್ಲಿಮತ್ತು ಅನಗೋಳದ ಗಣೇಶ ಮೂರ್ತಿಗಳೂ ವಿಸರ್ಜನೆಗೊಂಡವು.
ಕಳೆದ ವರ್ಷ ಸಂಜೆ 6.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಕೊನೆಯ ಮೂರ್ತಿ ವಿಸರ್ಜನೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಒಂದು ಗಂಟೆ ಹೆಚ್ಚಿನ ಸಮಯವಾಯಿತು. ಮುಖ್ಯ ಮೆರವಣಿಗೆಯಲ್ಲಿಆಗಮಿಸಿದ್ದ ಅನೇಕ ಗಣೇಶ ಮಂಡಳದವರು ಕಪಿಲೇಶ್ವರ ಹೊಂಡದಲ್ಲಿದಟ್ಟಣೆ ಇರುವುದರಿಂದ ಶುಕ್ರವಾರ ಮಧ್ಯಾಹ್ನದ ಬಳಿಕ ಮೆರವಣಿಗೆಯಿಂದ ಬೇರ್ಪಟ್ಟು ಜಕ್ಕಿನ ಹೊಂಡಕ್ಕೆ ತೆರಳಿ ಅಲ್ಲಿಮೂರ್ತಿಗಳನ್ನು ವಿಸರ್ಜಿಸಿದರು.
ಗುರುವಾರ ಸಂಜೆ 5.15ಕ್ಕೆ ಹುತಾತ್ಮ ಚೌಕ್ನಿಂದ ಚಾಲನೆ ಪಡೆದಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ 7.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಪಾಲಿಕೆಯ ಗಣೇಶ ಮೂರ್ತಿ ವಿಸರ್ಜನೆಯೊಂದಿಗೆ ಕೊನೆಗೊಂಡಿತು. ಪಾಲಿಕೆ ಗಣೇಶ ಮೂರ್ತಿಯೊಂದಿಗೆ ಖಡಕ್ಗಲ್ಲಿಮತ್ತು ಅನಗೋಳದ ಗಣೇಶ ಮೂರ್ತಿಗಳೂ ವಿಸರ್ಜನೆಗೊಂಡವು.
ಕಳೆದ ವರ್ಷ ಸಂಜೆ 6.15ಕ್ಕೆ ಕಪಿಲೇಶ್ವರ ಹೊಂಡದಲ್ಲಿಕೊನೆಯ ಮೂರ್ತಿ ವಿಸರ್ಜನೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಒಂದು ಗಂಟೆ ಹೆಚ್ಚಿನ ಸಮಯವಾಯಿತು. ಮುಖ್ಯ ಮೆರವಣಿಗೆಯಲ್ಲಿಆಗಮಿಸಿದ್ದ ಅನೇಕ ಗಣೇಶ ಮಂಡಳದವರು ಕಪಿಲೇಶ್ವರ ಹೊಂಡದಲ್ಲಿದಟ್ಟಣೆ ಇರುವುದರಿಂದ ಶುಕ್ರವಾರ ಮಧ್ಯಾಹ್ನದ ಬಳಿಕ ಮೆರವಣಿಗೆಯಿಂದ ಬೇರ್ಪಟ್ಟು ಜಕ್ಕಿನ ಹೊಂಡಕ್ಕೆ ತೆರಳಿ ಅಲ್ಲಿಮೂರ್ತಿಗಳನ್ನು ವಿಸರ್ಜಿಸಿದರು.