ಬೆಳಗಾವಿ: ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿಅಪಹರಿಸಿ ಬಂಧನದಲ್ಲಿಟ್ಟು ಆಸ್ತಿ, ಹಣ ಲಪಟಾಯಿಸಲು ಯತ್ನಿಸಿದ ಗ್ಯಾಂಗ್ನ ಒಂಬತ್ತು ಆರೋಪಿಗಳನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ಬಾಂದೂರ ಗಲ್ಲಿಯ ನಿವಾಸಿ ಅಣ್ಣಾಸಾಹೇಬ ಚೌಗಲೆ ಬ್ರಹ್ಮಚಾರಿ ಅವರನ್ನು ರಕ್ಷಿಸಲಾಗಿದೆ.
ಬೆಳಗಾವಿ ಮಹಾದ್ವಾರ ರಸ್ತೆಯ ನಿವಾಸಿ ವಿನಾಯಕ ಶಂಕರ ಪ್ರಧಾನ, ಹೊಸ ಗಾಂಧಿನಗರದ ಶಿವನಾಥ ಉಫ್ರ್ ಪಿಂಟು ರಾನಬಾ ರೇಡೇಕರ, ಪುಲಬಾಗ ಗಲ್ಲಿಯ ಅಮೀತ ಯಲ್ಲಪ ಮಜಗಾಂವಿ, ಗಾಂಧಿನಗರದ ಮುರಾರಿ ಬಾಬಾಜಾನ ಖಾನಾಪುರಿ, ಅನಗೋಳ ಗ್ರಾಮದ ಸಂಜಯ ಪ್ರಕಾಶ ಕೌಜಲಗಿ ಉಫ್ರ್ ಭಜಂತ್ರಿ, ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ರೈತ ಗಲ್ಲಿಯ ಅಮೀತ ಪರಶುರಾಮ ಧಾಮಣೇಕರ, ಬೆಳವಟ್ಟಿ ಗ್ರಾಮದ ಚೇತನ ನಾರಾಯಣ ಪಾಟೀಲ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕು ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ ಬಂಧಿತ ಆರೋಪಿಗಳು. ಇವರಿಂದ ಅಪಹರಣಕ್ಕೆ ಬಳಸಿದ್ದ ಕಾರು, ಬೈಕ್ ಹಾಗೂ ಮೊಬೈಲ್ ಪೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಣ್ಣಾಸಾಹೇಬ್ ಅವರು ಕಾಣೆಯಾಗಿದ್ದಾರೆ ಎಂದು ಫೆ.2ರಂದು ಮಾರ್ಕೆಟ್ ಠಾಣೆಯಲ್ಲಿದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕಡಲಗೆಯಲ್ಲಿಆರೋಪಿಗಳನ್ನು ಬಂಧಿಸಿದ್ದಾರೆ.
ಏನಾಗಿತ್ತು?: ಅಣ್ಣಾಸಾಹೇಬ್ ಅವರ ತಂದೆ, ತಾಯಿ, ಸಹೋದರಿಯರು ಮೃತಪಟ್ಟಿದ್ದರು. ಅವರಿಗೆ ಬೆಳಗಾವಿ ಸಾಂಬ್ರಾ ರಸ್ತೆ ಪಕ್ಕದಲ್ಲಿಕೋಟ್ಯಂತರ ರೂ. ಬೆಲೆಬಾಳುವ 2.23 ಎಕರೆ ಜಮೀನು ಇತ್ತು. ಮೂರು ತಿಂಗಳ ಹಿಂದೆ ಬೆಳಗಾವಿ ನಗರದಿಂದ ಅಣ್ಣಾಸಾಹೇಬರನ್ನು ಅಪಹರಿಸಿದ ಆರೋಪಿಗಳು ಹಿಂಡಲಗಾ, ಉಚಗಾಂವ್ ಮಾರ್ಗವಾಗಿ ಮಹಾರಾಷ್ಟ್ರದ ಕಡಲಗ ಗ್ರಾಮಕ್ಕೆ ಕರೆದೊಯ್ದು, ಬಳಿಕ ಬೆಳಗಾವಿಯ ಬೆಳವಟ್ಟಿ ಗ್ರಾಮದ ಚೇತನ ಪಾಟೀಲ್ ಅವರ ತೋಟದ ಮನೆಯಲ್ಲಿ40 ದಿನ ಬಂಧಿಸಿಟ್ಟಿದ್ದರು. ನಂತರ ಕಡಲಗ ಗ್ರಾಮದಲ್ಲಿಒಂದು ತಿಂಗಳು ಬಂಧಿಸಿಟ್ಟಿದ್ದರು.
ಆರೋಪಿಗಳು ಅಣ್ಣಾಸಾಹೇಬ ಅವರನ್ನು ಹೆದರಿಸಿ, ಜಿಪಿ ಬರೆಸಿಕೊಂಡು ರಿಜಿಸ್ಟರ್ ಕಚೇರಿಗೆ ಹೋಗಬೇಕೆನ್ನುವಷ್ಟರಲ್ಲಿಲಾಕ್ಡೌನ್ ಶುರುವಾಗಿತ್ತು. ಇದರಿಂದ ಅಪಹರಣಕಾರರ ಪ್ಲ್ಯಾನ್ ಫೇಲ್ ಆಗಿತ್ತು. ಲಾಕ್ಡೌನ್ ಮುಗಿದ ನಂತರ ಅಣ್ಣಾಸಾಹೇಬ ಅವರ ಖಾತೆಯಲ್ಲಿರುವ ಹಣ ಪಡೆಯಲು, ಅವರನ್ನು ಬ್ಯಾಂಕ್ಗೆ ಕರೆದುಕೊಂಡು ಬಂದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮಹಾದ್ವಾರ ರಸ್ತೆಯ ನಿವಾಸಿ ವಿನಾಯಕ ಶಂಕರ ಪ್ರಧಾನ, ಹೊಸ ಗಾಂಧಿನಗರದ ಶಿವನಾಥ ಉಫ್ರ್ ಪಿಂಟು ರಾನಬಾ ರೇಡೇಕರ, ಪುಲಬಾಗ ಗಲ್ಲಿಯ ಅಮೀತ ಯಲ್ಲಪ ಮಜಗಾಂವಿ, ಗಾಂಧಿನಗರದ ಮುರಾರಿ ಬಾಬಾಜಾನ ಖಾನಾಪುರಿ, ಅನಗೋಳ ಗ್ರಾಮದ ಸಂಜಯ ಪ್ರಕಾಶ ಕೌಜಲಗಿ ಉಫ್ರ್ ಭಜಂತ್ರಿ, ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ರೈತ ಗಲ್ಲಿಯ ಅಮೀತ ಪರಶುರಾಮ ಧಾಮಣೇಕರ, ಬೆಳವಟ್ಟಿ ಗ್ರಾಮದ ಚೇತನ ನಾರಾಯಣ ಪಾಟೀಲ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕು ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ ಬಂಧಿತ ಆರೋಪಿಗಳು. ಇವರಿಂದ ಅಪಹರಣಕ್ಕೆ ಬಳಸಿದ್ದ ಕಾರು, ಬೈಕ್ ಹಾಗೂ ಮೊಬೈಲ್ ಪೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಣ್ಣಾಸಾಹೇಬ್ ಅವರು ಕಾಣೆಯಾಗಿದ್ದಾರೆ ಎಂದು ಫೆ.2ರಂದು ಮಾರ್ಕೆಟ್ ಠಾಣೆಯಲ್ಲಿದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕಡಲಗೆಯಲ್ಲಿಆರೋಪಿಗಳನ್ನು ಬಂಧಿಸಿದ್ದಾರೆ.
ಏನಾಗಿತ್ತು?: ಅಣ್ಣಾಸಾಹೇಬ್ ಅವರ ತಂದೆ, ತಾಯಿ, ಸಹೋದರಿಯರು ಮೃತಪಟ್ಟಿದ್ದರು. ಅವರಿಗೆ ಬೆಳಗಾವಿ ಸಾಂಬ್ರಾ ರಸ್ತೆ ಪಕ್ಕದಲ್ಲಿಕೋಟ್ಯಂತರ ರೂ. ಬೆಲೆಬಾಳುವ 2.23 ಎಕರೆ ಜಮೀನು ಇತ್ತು. ಮೂರು ತಿಂಗಳ ಹಿಂದೆ ಬೆಳಗಾವಿ ನಗರದಿಂದ ಅಣ್ಣಾಸಾಹೇಬರನ್ನು ಅಪಹರಿಸಿದ ಆರೋಪಿಗಳು ಹಿಂಡಲಗಾ, ಉಚಗಾಂವ್ ಮಾರ್ಗವಾಗಿ ಮಹಾರಾಷ್ಟ್ರದ ಕಡಲಗ ಗ್ರಾಮಕ್ಕೆ ಕರೆದೊಯ್ದು, ಬಳಿಕ ಬೆಳಗಾವಿಯ ಬೆಳವಟ್ಟಿ ಗ್ರಾಮದ ಚೇತನ ಪಾಟೀಲ್ ಅವರ ತೋಟದ ಮನೆಯಲ್ಲಿ40 ದಿನ ಬಂಧಿಸಿಟ್ಟಿದ್ದರು. ನಂತರ ಕಡಲಗ ಗ್ರಾಮದಲ್ಲಿಒಂದು ತಿಂಗಳು ಬಂಧಿಸಿಟ್ಟಿದ್ದರು.
ಆರೋಪಿಗಳು ಅಣ್ಣಾಸಾಹೇಬ ಅವರನ್ನು ಹೆದರಿಸಿ, ಜಿಪಿ ಬರೆಸಿಕೊಂಡು ರಿಜಿಸ್ಟರ್ ಕಚೇರಿಗೆ ಹೋಗಬೇಕೆನ್ನುವಷ್ಟರಲ್ಲಿಲಾಕ್ಡೌನ್ ಶುರುವಾಗಿತ್ತು. ಇದರಿಂದ ಅಪಹರಣಕಾರರ ಪ್ಲ್ಯಾನ್ ಫೇಲ್ ಆಗಿತ್ತು. ಲಾಕ್ಡೌನ್ ಮುಗಿದ ನಂತರ ಅಣ್ಣಾಸಾಹೇಬ ಅವರ ಖಾತೆಯಲ್ಲಿರುವ ಹಣ ಪಡೆಯಲು, ಅವರನ್ನು ಬ್ಯಾಂಕ್ಗೆ ಕರೆದುಕೊಂಡು ಬಂದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.