ಆ್ಯಪ್ನಗರ

ಗ್ಯಾಸ್‌ ಸಿಲಿಂಡರ್‌ ಸ್ಫೋಟ: 16 ಲಕ್ಷ ಹಾನಿ

ಪಾಲಬಾವಿ: ಗ್ರಾಮದ ವಾರ್ಡ್‌ ನಂ...

Vijaya Karnataka 19 Apr 2019, 5:00 am
ಪಾಲಬಾವಿ : ಗ್ರಾಮದ ವಾರ್ಡ್‌ ನಂ.3ರ ಶಾರದಾ ರಾಜೇಸಾಬ ನದಾಫ್‌ ಅವರಿಗೆ ಸೇರಿದ ಪತ್ರಾಸ್‌ ಶೆಡ್‌ನಲ್ಲಿನ ಗ್ಯಾಸ್‌ ಸಿಲಿಂಡರ್‌ ಗುರುವಾರ ಸ್ಫೋಟಗೊಂಡು ಅಂದಾಜು 16 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ.
Vijaya Karnataka Web BEL-18PALABAVI1, PHOTO


ಸ್ಫೋಟದಿಂದ ಪಕ್ಕದ ಒಂದು ಗುಡಿಸಲು ಹಾಗೂ ಹಂಚಿನ ಮನೆ ಬೆಂಕಿಗಾಹುತಿಯಾಗಿದೆ. ಅವಘಡಕ್ಕೆ ಬೆಚ್ಚಿದ ಜನ ಸ್ಥಳಕ್ಕೆ ತಕ್ಷಣ ಧಾವಿಸಿ ಹೆಚ್ಚಿನ ಪ್ರಮಾಣದ ಹಾನಿ ತಪ್ಪಿಸಿದ್ದಾರೆ. ಕೊನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

ಅವಘಡದಲ್ಲಿ ಶಿವಗೊಂಡ ಗುರುಪಾದ ಬಾಗೋಜಿಯವರಿಗೆ ಸೇರಿದ ಹಂಚಿನ ಮನೆ, ಶೆಡ್‌ ಸೇರಿ 10 ಕ್ವಿಂಟಲ್‌ ಗೋವಿನ ಜೋಳ, 2 ಚೀಲ ಗೋಧಿ, 3 ಕ್ವಿಂಟಲ್‌ ಅಕ್ಕಿ, 8 ತೊಲೆ ಬಂಗಾರ, 2 ಲಕ್ಷ ರೂ. ನಗದು ಬೆಂಕಿಗಾಹುತಿಯಾಗಿದೆ.

ಅವಘಡ ಸಂಭವಿಸಿದ ಶಾರದಾ ರಾಜೇಸಾಬ ನದಾಫ್‌ ಪತ್ರಾಸ್‌ ಶೆಡ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಶೆಡ್‌ನಲ್ಲಿದ್ದ ಒಂದು ಚೀಲ ಅಕ್ಕಿ, 2 ಚೀಲ ಜೋಳ, ದಿನಬಳಕೆ ವಸ್ತುಗಳು, 30 ಸಾವಿರ ರೂ. ನಗದು, 4 ತೊಲೆ ಬಂಗಾರ, ಬಟ್ಟೆ ಬರೆಯೆಲ್ಲ ಸುಟ್ಟು ಹೋಗಿವೆ. ಹೀಗೆ ಬುರಾಸಾಬ್‌ ಗುಲಾಬಸಾಬ್‌ ನದಾಫ್‌ರಿಗೆ ಸೇರಿದ ಗುಡಿಸಲ್ಲಿನಲ್ಲಿದ್ದ 8 ಚೀಲ ಗೋವಿನಜೋಳ, 15 ಸಾವಿರ ರೂ. ಮೌಲ್ಯದ ಡ್ರಿಪ್‌ ಪೈಪ್‌ಗಳು, ಸೈಕಲ್‌, 30 ಸಾವಿರ ರೂ. ನಗದು ಹಾನಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ