ಕುರ್ಚಿಗಂಟಿಕೊಳ್ಳದೆ ಜನರ ಬಳಿಗೆ ತೆರಳಿ
ಬೆಳಗಾವಿ: ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ...
Vijaya Karnataka 8 Mar 2020, 5:00 am
ಬೆಳಗಾವಿ: ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಲ್ಲಿನ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಮತ್ತು ಬುಡಾ ಅಧಿಕಾರಿ ಹಾಗೂ ಸಿಬ್ಬಂದಿಯ ಚಳಿ ಬಿಡಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಇಲ್ಲಿನ ಪಾಲಿಕೆ ಪರಿಷತ್ ಭವನದಲ್ಲಿಶನಿವಾರ ಈ ಮೂರೂ ಸಂಸ್ಥೆಗಳ ಪ್ರಗತಿ ಪರಿಶೀಲಿಸಿದ ಅವರು, ಲೋಪಗಳ ವಿರುದ್ಧ ಕಿಡಿ ಕಾರಿದರು. ಪ್ರತಿ ಸಂಸ್ಥೆಯ ಅನುದಾನ ಸಕಾಲಿಕವಾಗಿ ವೆಚ್ಚವಾಗಿ ಮೂಲಸೌಕರ್ಯ ಸೃಷ್ಟಿಸಬೇಕು. ಸರಕಾರದ ಅನುದಾನ ಮರಳಿ ಹೋಗುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಎಚ್ಚರಿಸಿದರು. ಕಚೇರಿಯಲ್ಲಿಕುಳಿತು ಕೆಲಸ ಮಾಡುವುದನ್ನು ನಿಲ್ಲಿಸಿ, ಕ್ಷೇತ್ರಕ್ಕೆ ಹೋಗಿ ವಾಸ್ತವ ತಿಳಿದು ಜನರಿಗೆ ಸ್ಪಂದಿಸಿ. ಜನರಿಂದ ದೂರುಗಳು ಬರುವಂತೆ ಇರಬಾರದು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ಪಾಲಿಕೆಯಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ನಗರದ ಎಲ್ಲೆಂದರಲ್ಲಿಅಗೆದು ಮಣ್ಣು ರಾಶಿ ಹಾಕಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ''ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ಬಳಸಬೇಕು. ನಮ್ಮ ಕೆಲಸಗಳು ಜನರಿಗೆ ತಾಪತ್ರಯ ತರಬಾರದು. ನಗರ ವಿರೂಪಗೊಳಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ. ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡಿ. ಪೌರಕಾರ್ಮಿಕರ ಯೋಗಕ್ಷೇಮದ ಬಗ್ಗೆ ಗಮನ ಹರಿಸಿ. ತೆರಿಗೆ ಸಂಗ್ರಹ ಸರಿಯಾಗಿ ಆಗಬೇಕು. ಕಾನೂನು ಅಧಿಕಾರಿ ಪಾಲಿಕೆಯ ಸಂಪನ್ಮೂಲ, ಆಸ್ತಿ ಸಂರಕ್ಷಣೆಗೆ ಒತ್ತು ಕೊಡಬೇಕು. ಇದರಲ್ಲಿವಿಳಂಬ ತೋರಬಾರದು. ವಸತಿ ಯೋಜನೆಗಳು ಅನುಷ್ಠಾನವಾಗಬೇಕು. ಆಯಾ ಫಲಾನುಭವಿಗಳಿಗೆ ಸೌಕರ್ಯ ತಲುಪಿಸಬೇಕು'' ಎಂದು ತಿಳಿಸಿದರು.
ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ಅವರು ಪ್ರಾಧಿಕಾರದ ಯೋಜನೆಗಳನ್ನು ವಿವರಿಸಿದರು. ''ಕಣಬರಗಿ ಪ್ರದೇಶದಲ್ಲಿಕೈಗೆತ್ತಿಕೊಂಡಿರುವ ಸ್ಕೀಮ್ ನಂ. 61ನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಲ್ಲಿಎಲ್ಲರೀತಿಯ ಮೂಲಸೌಕರ್ಯ ಇರಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು'' ಎಂದು ಸಚಿವರು ಆದೇಶಿಸಿದರು.
ನಾಲಾ ಸರಿಪಡಿಸಿ: ಶಾಸಕ ಅನಿಲ ಬೆನಕೆ ಮಾತನಾಡಿ, ಮಳೆಗಾಲ ಆಗಮಿಸುತ್ತಿರುವುದರಿಂದ ನಗರದ ನಾಲಾ ವ್ಯವಸ್ಥೆಯನ್ನು ಬೇಗನೇ ಸರಿಪಡಿಸಬೇಕು. ಮಳೆಗಾಲದಲ್ಲಿಮತ್ತೆ ನೆರೆ ಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ನಗರಾಭಿವೃದ್ಧಿ ಸಚಿವರ ಭೇಟಿಗೆ ಆಗಮಿಸಿದ್ದ ಭಾರಿ ನೀರಾವರಿ ಸಚಿವ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಮತ್ತಿತರರು ವೇದಿಕೆ ಮೇಲಿದ್ದರು.
ಕಾಮಗಾರಿ ಕಳಪೆಯಾದರೆ ಬಿಲ್ ನೀಡಬೇಡಿ
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಚಿತ್ರಣ ನೀಡಿದರು. ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದವು. ಸಚಿವರು ಈ ಬಗ್ಗೆ ಅಸಮಾಧಾನ ಸೂಚಿಸಿದರು. ನಿಗಾವಹಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದರು. ''ಗುಣಮಟ್ಟದ ಕೆಲಸ ಮಾಡದಿದ್ದರೆ ಗುತ್ತಿಗೆದಾರರಿಗೆ ಬಿಲ್ ನೀಡಬೇಡಿ. ಹಣ ತೆಗೆದುಕೊಂಡು ಹೋದರೆ ಯಾರನ್ನು ಕೇಳುವುದು? ಆಮೇಲೆ ನೀವೇ ಹೊಣೆಯಾಗಬೇಕಾಗುತ್ತದೆ'' ಎಂದು ಎಚ್ಚರಿಸಿದರು. ''ಸ್ಮಾಟ್ ಸಿಟಿ ಅನುದಾನ ಸಮರ್ಪಕ ಮತ್ತು ಕಾಲಮಿತಿಯಲ್ಲಿವೆಚ್ಚವಾಗಬೇಕು. ಮೂರೂ ಸಂಸ್ಥೆಗಳ ಕೆಲಸಗಳು ಯುದ್ಧೋಪಾದಿಯಲ್ಲಿಆಗಬೇಕು. ಆಡಳಿತಾತ್ಮಕ ಅಡೆತಡೆಗಳನ್ನು ಬಗೆಹರಿಸಿಕೊಡಲಾಗುತ್ತದೆ. ಅನುದಾನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ'' ಎಂದು ಸಚಿವ ಭೈರತಿ ಬಸವರಾಜ್ ಭರವಸೆ ನೀಡಿದರು.
ಸಿಎಂ ಆದೇಶ ಕಡೆಗಣನೆ:
ಶಾಸಕ ಅಭಯ ಪಾಟೀಲ ಮಾತನಾಡಿ, ನಗರಾಭಿವೃದ್ಧಿ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಅನಿವಾರ್ಯದ ಕೆಲಸಗಳನ್ನೂ ಅವರು ಮಾಡುತ್ತಿಲ್ಲ. ಇಲ್ಲಿನ ನಾಲಾ ಕಾಮಗಾರಿಗೆ ಸಂಬಂಧಿಸಿದ 123 ಕೋಟಿ ರೂ.ಗಳ ಮಾರ್ಪಾಟಿತ ಹಾಗೂ ಮುಖ್ಯಮಂತ್ರಿಗಳು ಒಪ್ಪಿಗೆ ಕೊಟ್ಟಿರುವ ಪತ್ರವನ್ನು ಸ್ವತಃ ನಾನೇ ಟೇಬಲ್ನಿಂದ ಟೇಬಲ್ಗೆ ಅಲೆದು ಕೊಟ್ಟು ಬಂದಿದ್ದೇನೆ. ಆದರೂ ಜಾರಿಗೆ ಬಂದಿಲ್ಲ. ಮುಖ್ಯಮಂತ್ರಿಗಳ ಆದೇಶವನ್ನೂ ಧಿಕ್ಕರಿಸಿದ್ದಾರೆ. ಸದನದ ಬಾವಿಗೆ ಇಳಿದು ಧರಣಿ ಕುಳಿತುಕೊಳ್ಳುವುದಷ್ಟೇ ಬಾಕಿ ಉಳಿದಿದೆ ಎಂದು ಕಿಡಿ ಕಾರಿದರು.
ಇಲ್ಲಿನ ಪಾಲಿಕೆ ಪರಿಷತ್ ಭವನದಲ್ಲಿಶನಿವಾರ ಈ ಮೂರೂ ಸಂಸ್ಥೆಗಳ ಪ್ರಗತಿ ಪರಿಶೀಲಿಸಿದ ಅವರು, ಲೋಪಗಳ ವಿರುದ್ಧ ಕಿಡಿ ಕಾರಿದರು. ಪ್ರತಿ ಸಂಸ್ಥೆಯ ಅನುದಾನ ಸಕಾಲಿಕವಾಗಿ ವೆಚ್ಚವಾಗಿ ಮೂಲಸೌಕರ್ಯ ಸೃಷ್ಟಿಸಬೇಕು. ಸರಕಾರದ ಅನುದಾನ ಮರಳಿ ಹೋಗುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಎಚ್ಚರಿಸಿದರು. ಕಚೇರಿಯಲ್ಲಿಕುಳಿತು ಕೆಲಸ ಮಾಡುವುದನ್ನು ನಿಲ್ಲಿಸಿ, ಕ್ಷೇತ್ರಕ್ಕೆ ಹೋಗಿ ವಾಸ್ತವ ತಿಳಿದು ಜನರಿಗೆ ಸ್ಪಂದಿಸಿ. ಜನರಿಂದ ದೂರುಗಳು ಬರುವಂತೆ ಇರಬಾರದು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ಪಾಲಿಕೆಯಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ನಗರದ ಎಲ್ಲೆಂದರಲ್ಲಿಅಗೆದು ಮಣ್ಣು ರಾಶಿ ಹಾಕಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ''ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ಬಳಸಬೇಕು. ನಮ್ಮ ಕೆಲಸಗಳು ಜನರಿಗೆ ತಾಪತ್ರಯ ತರಬಾರದು. ನಗರ ವಿರೂಪಗೊಳಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ. ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡಿ. ಪೌರಕಾರ್ಮಿಕರ ಯೋಗಕ್ಷೇಮದ ಬಗ್ಗೆ ಗಮನ ಹರಿಸಿ. ತೆರಿಗೆ ಸಂಗ್ರಹ ಸರಿಯಾಗಿ ಆಗಬೇಕು. ಕಾನೂನು ಅಧಿಕಾರಿ ಪಾಲಿಕೆಯ ಸಂಪನ್ಮೂಲ, ಆಸ್ತಿ ಸಂರಕ್ಷಣೆಗೆ ಒತ್ತು ಕೊಡಬೇಕು. ಇದರಲ್ಲಿವಿಳಂಬ ತೋರಬಾರದು. ವಸತಿ ಯೋಜನೆಗಳು ಅನುಷ್ಠಾನವಾಗಬೇಕು. ಆಯಾ ಫಲಾನುಭವಿಗಳಿಗೆ ಸೌಕರ್ಯ ತಲುಪಿಸಬೇಕು'' ಎಂದು ತಿಳಿಸಿದರು.
ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ಅವರು ಪ್ರಾಧಿಕಾರದ ಯೋಜನೆಗಳನ್ನು ವಿವರಿಸಿದರು. ''ಕಣಬರಗಿ ಪ್ರದೇಶದಲ್ಲಿಕೈಗೆತ್ತಿಕೊಂಡಿರುವ ಸ್ಕೀಮ್ ನಂ. 61ನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಲ್ಲಿಎಲ್ಲರೀತಿಯ ಮೂಲಸೌಕರ್ಯ ಇರಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು'' ಎಂದು ಸಚಿವರು ಆದೇಶಿಸಿದರು.
ನಾಲಾ ಸರಿಪಡಿಸಿ: ಶಾಸಕ ಅನಿಲ ಬೆನಕೆ ಮಾತನಾಡಿ, ಮಳೆಗಾಲ ಆಗಮಿಸುತ್ತಿರುವುದರಿಂದ ನಗರದ ನಾಲಾ ವ್ಯವಸ್ಥೆಯನ್ನು ಬೇಗನೇ ಸರಿಪಡಿಸಬೇಕು. ಮಳೆಗಾಲದಲ್ಲಿಮತ್ತೆ ನೆರೆ ಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ನಗರಾಭಿವೃದ್ಧಿ ಸಚಿವರ ಭೇಟಿಗೆ ಆಗಮಿಸಿದ್ದ ಭಾರಿ ನೀರಾವರಿ ಸಚಿವ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಮತ್ತಿತರರು ವೇದಿಕೆ ಮೇಲಿದ್ದರು.
ಕಾಮಗಾರಿ ಕಳಪೆಯಾದರೆ ಬಿಲ್ ನೀಡಬೇಡಿ
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಚಿತ್ರಣ ನೀಡಿದರು. ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದವು. ಸಚಿವರು ಈ ಬಗ್ಗೆ ಅಸಮಾಧಾನ ಸೂಚಿಸಿದರು. ನಿಗಾವಹಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದರು. ''ಗುಣಮಟ್ಟದ ಕೆಲಸ ಮಾಡದಿದ್ದರೆ ಗುತ್ತಿಗೆದಾರರಿಗೆ ಬಿಲ್ ನೀಡಬೇಡಿ. ಹಣ ತೆಗೆದುಕೊಂಡು ಹೋದರೆ ಯಾರನ್ನು ಕೇಳುವುದು? ಆಮೇಲೆ ನೀವೇ ಹೊಣೆಯಾಗಬೇಕಾಗುತ್ತದೆ'' ಎಂದು ಎಚ್ಚರಿಸಿದರು. ''ಸ್ಮಾಟ್ ಸಿಟಿ ಅನುದಾನ ಸಮರ್ಪಕ ಮತ್ತು ಕಾಲಮಿತಿಯಲ್ಲಿವೆಚ್ಚವಾಗಬೇಕು. ಮೂರೂ ಸಂಸ್ಥೆಗಳ ಕೆಲಸಗಳು ಯುದ್ಧೋಪಾದಿಯಲ್ಲಿಆಗಬೇಕು. ಆಡಳಿತಾತ್ಮಕ ಅಡೆತಡೆಗಳನ್ನು ಬಗೆಹರಿಸಿಕೊಡಲಾಗುತ್ತದೆ. ಅನುದಾನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ'' ಎಂದು ಸಚಿವ ಭೈರತಿ ಬಸವರಾಜ್ ಭರವಸೆ ನೀಡಿದರು.
ಸಿಎಂ ಆದೇಶ ಕಡೆಗಣನೆ:
ಶಾಸಕ ಅಭಯ ಪಾಟೀಲ ಮಾತನಾಡಿ, ನಗರಾಭಿವೃದ್ಧಿ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಅನಿವಾರ್ಯದ ಕೆಲಸಗಳನ್ನೂ ಅವರು ಮಾಡುತ್ತಿಲ್ಲ. ಇಲ್ಲಿನ ನಾಲಾ ಕಾಮಗಾರಿಗೆ ಸಂಬಂಧಿಸಿದ 123 ಕೋಟಿ ರೂ.ಗಳ ಮಾರ್ಪಾಟಿತ ಹಾಗೂ ಮುಖ್ಯಮಂತ್ರಿಗಳು ಒಪ್ಪಿಗೆ ಕೊಟ್ಟಿರುವ ಪತ್ರವನ್ನು ಸ್ವತಃ ನಾನೇ ಟೇಬಲ್ನಿಂದ ಟೇಬಲ್ಗೆ ಅಲೆದು ಕೊಟ್ಟು ಬಂದಿದ್ದೇನೆ. ಆದರೂ ಜಾರಿಗೆ ಬಂದಿಲ್ಲ. ಮುಖ್ಯಮಂತ್ರಿಗಳ ಆದೇಶವನ್ನೂ ಧಿಕ್ಕರಿಸಿದ್ದಾರೆ. ಸದನದ ಬಾವಿಗೆ ಇಳಿದು ಧರಣಿ ಕುಳಿತುಕೊಳ್ಳುವುದಷ್ಟೇ ಬಾಕಿ ಉಳಿದಿದೆ ಎಂದು ಕಿಡಿ ಕಾರಿದರು.