ಆ್ಯಪ್ನಗರ

ನೆಮ್ಮದಿ ಸಿಗುವುದು ಕೇವಲ ಆಧ್ಯಾತ್ಮಿಕ ಮಾರ್ಗದಲ್ಲಿ ಮಾತ್ರ

ಖೇಮಲಾಪುರ: ಇಂದಿನ ಯುವಕರು ಸತ್ಸಂಗದ ಅಭಿರುಚಿ ಹಾಗೂ ಆಧ್ಯಾತ್ಮಿಕ ಪ್ರೇರಣೆ ಹೊಂದಬೇಕು ಎಂದು ಡಾ ಅಭಿನವ ಬ್ರಹ್ಮಾನಂದ ಸ್ವಾಮಿಗಳು ಹೇಳಿದರು...

Vijaya Karnataka 19 Dec 2018, 5:00 am
ಖೇಮಲಾಪುರ : ಇಂದಿನ ಯುವಕರು ಸತ್ಸಂಗದ ಅಭಿರುಚಿ ಹಾಗೂ ಆಧ್ಯಾತ್ಮಿಕ ಪ್ರೇರಣೆ ಹೊಂದಬೇಕು ಎಂದು ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಗಳು ಹೇಳಿದರು.
Vijaya Karnataka Web BLG-1812-2-52-18KHEMALAPUR 2


ಗ್ರಾಮದ ಮಲ್ಲಿಕಾರ್ಜನ ದೇವಾಸ್ಥಾನದಲ್ಲಿ ಮಂಗಳವಾರ ಹನುಮ ಮಾಲಾಧಾರಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದವರು ಈ ಜಗತ್ತಿನಲ್ಲಿ ಎಲ್ಲಾದರೂ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದಾದರೆ ಅದು ಕೇವಲ ಆಧ್ಯಾತ್ಮಕ ಮಾರ್ಗದಲ್ಲಿ ಮಾತ್ರ ಎಮದು ಅವರು ಹೇಳಿದರು.

ಸದಾಕಾಲ ಹನುಮ ಧ್ಯಾನ, ಜಪ , ಆರಾಧನೆಗಳಲ್ಲಿ ನಿರತನಾಗಿದ್ದರೆ, ಅವರ ಕಷ್ಟಗಳೆಲ್ಲಾ ಸುಟ್ಟು ಸುಖ ಪ್ರಾಪ್ತಿಯಾಗಲು ಸಾಧ್ಯ. ಹನುಮಂತನ ನಡೆ, ನುಡಿ, ಸ್ವಾಮಿತ್ವಗುಣ, ತ್ಯಾಗ, ಶ್ರದ್ಧೆ, ಸೇವಾ ಮನೋಭಾವ , ಚಾರಿತ್ರ್ಯ, ಶಕ್ತಿ, ನೀತಿ ಎಲ್ಲವೂ ಅನುಕರಣೀಯ ಎಂದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ದೇಶಪಾಂಡೆ, ಗ್ರಾಮದ ಮುಖಂಡರಾದ ರಾಜುಗೌಡಾ ಪಾಟೀಲ, ಗ್ರಾಪಂ ಸದಸ್ಯ ಅಪ್ಪಣ್ಣಾ ಬೆವನೂರ, ಕುಮಾರ ಹೊನವಾಡೆ, ಭೀಮಣ್ಣಗೌಡ ಗುಡೋಡಗಿ, ಪರಮಾನಂದವಾಡಿ ಗ್ರಾಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ, ಚಿದಾನಂದ ಸಾಲೋಟಿಗಿ, ವಿವೇಕಾನಂದ ಸಂಕೋನಟ್ಟಿ, ವಿದ್ಯಾನಂದ ಬಾನಿ ಮತ್ತಿತರರು ಹಾಜರಿದ್ದರು. ಶಿಕ್ಷ ಕ ಸಿದ್ದು ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ