ಆ್ಯಪ್ನಗರ

ಗಂದಿಗವಾಡ- ಚನ್ನಮ್ಮ ಕಿತ್ತೂರು ದುರಸ್ತಿಗೆ ಆಗ್ರಹ

ಇಟಗಿ: ಗಂದಿಗವಾಡ ಹಾಗೂ ಚ...

Vijaya Karnataka 10 Nov 2019, 5:00 am
ಇಟಗಿ: ಗಂದಿಗವಾಡ ಹಾಗೂ ಚ. ಕಿತ್ತೂರನ್ನು ಸಂಪರ್ಕಿಸುವ ರಸ್ತೆಯಲ್ಲಿತಟ್ಟಿಹಳ್ಳದ ಬಳಿ ಬೃಹತ್‌ ತಗ್ಗುಬಿದ್ದಿ್ದದ್ದು ಅದನ್ನು ಮುಚ್ಚಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಡಿನಾಡು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
Vijaya Karnataka Web 9 ITAGI 1_53
ಗಂದಿಗವಾಡ ಹಾಗೂ ಚನ್ನಮ್ಮ ಕಿತ್ತೂರನ್ನು ಸಂಪರ್ಕಿಸುವ ರಸ್ತೆಯಲ್ಲಿತಟ್ಟಿಹಳ್ಳದ ಬಳಿ ಬೃಹತ್‌ ಗುಂಡಿ ಬಿದ್ದಿರುವುದು.


ಆಗಸ್ಟ್‌ ತಿಂಗಳಲ್ಲಿಸುರಿದ ಭಾರೀ ಮಳೆಯಿಂದಾಗಿ ದೊಡ್ಡ ಕೆರೆಯ ನೀರು ರಸ್ತೆಗೆ ಅಳವಡಿಸಿರುವ ಪೈಪುಗಳ ಮೂಲಕ ರಭಸದಿಂದ ಹರಿಯುವಾಗ ತಗ್ಗು ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಿತ್ಯ ಗಂದಿಗವಾಡ ಗ್ರಾಮದ ರೈತರು ಇದೇ ರಸ್ತೆ ಮೂಲಕ ತಮ್ಮ ಜಮೀನುಗಳಿಗೆ ಸಂಚರಿಸಬೇಕು. ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕಬ್ಬು ಕಟಾವು ಆರಂಭಗೊಂಡಿದ್ದು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಹೇಗೆ ಸಾಗಿಸುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಗಂದಿಗವಾಡ-ಅಂಗ್ರೋಳ್ಳಿ ಮಧ್ಯದಲ್ಲಿರುವ ಬಂಕಿ ಹಳ್ಳದ ಸೇತುವೆ ಶಿಥಿಲಾಸ್ಥೆಯಲ್ಲಿದೆ. ಇದರ ಪಕ್ಕದ ರಸ್ತೆ ಕುಸಿಯುತ್ತಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಸೇತುವೆ ಕುಸಿಯುವ ಸಾಧ್ಯತೆಯಿದೆ. ಕಾರಣ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಗಡಿನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಭಂಗಿ, ಎಂ.ಎಂ. ರಾಜಿಭಾಯಿ, ಮಲ್ಲಪ್ಪಾ ಗಾಳಿ, ಮಹಾವೀರ ಹೂಲಿಕವಿ, ಕಲ್ಲಪ್ಪ ಮಂಡೆದ, ಮಹಾದೇವ ಪಂಡಿ, ಭೀಮಪ್ಪ ಇಟಪ್ಪನವರ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ