ಆ್ಯಪ್ನಗರ

ಡಾ. ಡಿ.ಎಸ್‌. ಕರ್ಕಿಗೆ ಪಂಪ ಪ್ರಶಸ್ತಿ ನೀಡಿ

ಬೆಳಗಾವಿ: ಡಾ ಡಿಎಸ್‌ ಕರ್ಕಿ ಸರಳ, ವಿರಳ ಮತ್ತು ಪ್ರಕೃತಿ ಸಹಜ ಕವಿಯಾಗಿದ್ದರು...

Vijaya Karnataka 27 Jan 2019, 5:00 am
ಬೆಳಗಾವಿ : ಡಾ. ಡಿ.ಎಸ್‌. ಕರ್ಕಿ ಸರಳ, ವಿರಳ ಮತ್ತು ಪ್ರಕೃತಿ ಸಹಜ ಕವಿಯಾಗಿದ್ದರು. ಆದರೆ ಅವರಿಗೆ ಸಿಗಬೇಕಾದಷ್ಟು ಗೌರವ ಸಿಕ್ಕಿಲ್ಲವೆಂದು ಹಿರಿಯ ಸಾಹಿತಿ ಪ್ರೊ. ಶಾಂತಾರಾಮ ಹೆಗಡೆ ಹೇಳಿದರು.
Vijaya Karnataka Web BLG-2601-2-52-26RAJU-8


ಇಲ್ಲಿನ ಹೊಂಬೆಳಕು ಸಾಹಿತ್ಯ ಪ್ರತಿಷ್ಠಾನ ರಾಮತೀರ್ಥ ನಗರದ ಮಾಯಾ ಕಂಪ್ಯೂಟರ್‌ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರ ಡಾ. ಡಿ.ಎಸ್‌. ಕರ್ಕಿ ಸಾಹಿತ್ಯ ಚಿಂತನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ವಿಸ್ಮಯಕಾರಿ ಕವಿ ಆಗಿದ್ದ ಡಾ. ಡಿ.ಎಸ್‌. ಕರ್ಕಿ ಅವರು ಓದುಗನಿಗೆ ಅದ್ಭುತ ಸಾಹಿತ್ಯ ನೀಡಿದ್ದಾರೆ. ಇವರ ಹಚ್ಚೇವು ಕನ್ನಡದ ದೀಪ ಕವನ ನಾಡಗೀತೆಗೆ ಸಮಾನವಾಗಿದೆ. ಇವರಿಗೆ ಪಂಪ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಕಲ್ಯಾಣರಾವ ಮುಚಳಂಬಿ ಅಧ್ಯಕ್ಷ ತೆ ವಹಿಸಿದ್ದರು. ಸಾಹಿತಿ ಜಲತ್ಕುಮಾರ ಪುಣಜಗೌಡ ಗ್ರಂಥ ಪರಿಚಯ ಮಾಡಿದರು. ಡಾ. ಡಿ.ಎಸ್‌. ಕರ್ಕಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕರ್ಕಿ ಮಾತನಾಡಿದರು.

ಸಾಹಿತಿ ಎಂ.ಎಸ್‌. ಇಂಚಲ, ಬಸವ ಭೀಮ ಸೇನೆ ಅಧ್ಯಕ್ಷ ಆರ್‌.ಎಸ್‌. ದರ್ಗೆ, ಆಶಾ ಯಮಕನಮರಡಿ, ಉಮೇಶ ಹಾರುಗೊಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಶಿಕಲಾ ಪಾವಶೆ ಸ್ವಾಗತಿಸಿದರು. ಸ.ರಾ. ಸುಳಕೂಡೆ ವಂದಿಸಿದರು. ಅಡಿವೆಪ್ಪ ಇಟಗಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ