ಆ್ಯಪ್ನಗರ

ವಾರಕ್ಕೊಂದು ದಿನ ವಿದ್ಯಾರ್ಥಿಗಳಿಗೆ ವಿಶೇಷ ಆಹಾರ ನೀಡಿ

ಹುಕ್ಕೇರಿ: ಪ್ರತಿಯೊಬ್ಬ ಶಿಕ್ಷಕರೂ ಒಂದು ದಿನದ ಸಂಬಳವನ್ನು ಬಳಸಿ ವಾರದಲ್ಲಿ ಒಂದು ದಿನ ಶಾಲಾ ಮಕ್ಕಳಿಗೆ ವಿಶೇಷ ಆಹಾರ ನೀಡಬೇಕು ಎಂದು ಶಾಸಕ ಉಮೇಶ ಕತ್ತಿ ...

Vijaya Karnataka 18 Jul 2018, 5:00 am
ಹುಕ್ಕೇರಿ: ಪ್ರತಿಯೊಬ್ಬ ಶಿಕ್ಷಕರೂ ಒಂದು ದಿನದ ಸಂಬಳವನ್ನು ಬಳಸಿ ವಾರದಲ್ಲಿ ಒಂದು ದಿನ ಶಾಲಾ ಮಕ್ಕಳಿಗೆ ವಿಶೇಷ ಆಹಾರ ನೀಡಬೇಕು ಎಂದು ಶಾಸಕ ಉಮೇಶ ಕತ್ತಿ ಅಧಿಕಾರಿಗಳಿಗೆ ಸಲಹೆ ನೀಡಿದರು.
Vijaya Karnataka Web give special food to the students once in a week
ವಾರಕ್ಕೊಂದು ದಿನ ವಿದ್ಯಾರ್ಥಿಗಳಿಗೆ ವಿಶೇಷ ಆಹಾರ ನೀಡಿ


ಅವರು ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಬಿಸಿಯೂಟ ಯೋಜನೆ ಅನುಷ್ಠಾನದಲ್ಲಿ ಸ್ವಚ್ಛತೆ, ಸುರಕ್ಷ ತೆ ಹಾಗೂ ಮಿತವ್ಯಯದೊಂದಿಗೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಶಾಲಾ ಅಡುಗೆ ಕೇಂದ್ರಗಳ ಸಿಬ್ಬಂದಿಗಳಿಗೆ ಉತ್ತೇಜನ ಮತ್ತು ಪ್ರೇರಣೆ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿದಿನ ಏಕರೂಪದ ಆಹಾರದಿಂದಾಗಿ ಕೆಲ ಮಕ್ಕಳು ಶಾಲೆಯಲ್ಲಿ ಊಟ ಸೇವಿಸುತ್ತಿಲ್ಲ. ಅದನ್ನು ಸರಿದೂಗಿಸಿ ಮಕ್ಕಳಿಗೆ ರುಚಿಕರ ಆಹಾರ ವಿತರಣೆ ಮಾಡಲು ಧನ ಸಹಾಯಕ್ಕಾಗಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ವಿವಿಧ ಸಹಕಾರಿ ಸಂಘಗಳಿಂದ ಆರ್ಥಿಕ ನೆರವು ನೀಡಲು ಸಿದ್ಧರಿದ್ದೇವೆ. ಶಿಕ್ಷಕರು ಇದನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರದ ಜತೆಗೆ ಗುಣಮಟ್ಟದ ಶಿಕ್ಷಣವನ್ನೂ ನೀಡಬೇಕು ಎಂದರು.

ಅಕ್ಷ ರ ದಾಸೋಹ ಚಿಕ್ಕೋಡಿ ಜಿಲ್ಲಾ ಶಿಕ್ಷ ಣಾಧಿಕಾರಿ ಜಿ.ಬಿ. ಬಳಿಗಾರ ಮಾತನಾಡಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಉಮಾದೇವಿ ಬಸಾಪುರೆ, ಪುರಸಭೆ ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಪರಗೌಡ ಪಾಟೀಲ, ತಹಸೀಲ್ದಾರ್‌ ಎನ್‌.ಬಿ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಡಿ. ನಾಯಿಕ ಹಾಗೂ ಶಿಕ್ಷ ಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅರಿಹಂತ ಬಿರಾದಾರಪಾಟೀಲ ಸ್ವಾಗತಿಸಿ, ಎಸ್‌.ಎಸ್‌. ಕರಿಗಾರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ