ಆ್ಯಪ್ನಗರ

ಜಾಗತಿಕ ಶಾಂತಿಗೆ ಸಾವಳಗಿ ಪರಂಪರೆಯ ತತ್ವ ಪಾಲನೆ ಅಗತ್ಯ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ...

Vijaya Karnataka 29 Apr 2019, 5:00 am
ಗೋಕಾಕ : ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆ, ಜನಾಂಗೀಯ ಸಂಘರ್ಷಗಳಿಗೆ ಅಂತ್ಯ ಹಾಡುವಲ್ಲಿ ಸಾವಳಗಿ ಜಗದ್ಗುರುಗಳ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ದಿನ್‌-ಹರ ತತ್ವ ಪ್ರಸ್ತುತವೆನಿಸಿವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
Vijaya Karnataka Web BLG-2804-2-52-28 GOKAK


ಅವರು ಭಾನುವಾರ ಸಾವಳಗಿ ಜಾತ್ರಾ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಲವಾರು ವರ್ಷಗಳ ಹಿಂದೆಯೇ ಸಾವಳಗಿ ಶ್ರೀಗಳು ದಿನ್‌-ಹರ ತತ್ವದ ಮೂಲಕ ಜಗತ್ತಿಗೆ ಶಾಂತಿ ಸಾರಿದ್ದರು. ಆದರೆ ಇನ್ನೂ ಅದು ಜನರಿಗೆ ಪರಿಚಿತವಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಸಾವಳಗಿ ಪರಂಪರೆಯ ಮಹತ್ವ ಅರಿತು ನಡೆದರೆ ಜಾಗತಿಕ ಶಾಂತಿ ಸ್ಥಾಪನೆ ಸಾಧ್ಯ ಎಂದರು.

ತಾವು ಎಷ್ಟೇ ಉನ್ನತ ಮಟ್ಟಕ್ಕೆ ಹೋದರೂ ಇಲ್ಲಿನ ಪರಿಸರ, ಇಲ್ಲಿ ಪಡೆದ ಶಿಕ್ಷಣ, ಸಂಸ್ಕಾರ ಮರೆತಿಲ್ಲ ಎಂದ ಪ್ರತಿ ವರ್ಷ ಇಲ್ಲಿ ಆಗಮಿಸಿ ದರ್ಶನ ಪಡೆಯುವುದಾಗಿ ತಿಳಿಸಿದರು.

ಸಾವಳಗಿ ಶ್ರೀ ಶಿವಲಿಂಗಶ್ವರ ಕುಮಾರೇಂದ್ರ ಜಗದ್ಗುರುಗಳು ಮಾತನಾಡಿ, ಭಕ್ತಿಯಿಂದ ದೇವರಿಗೆ ನಡೆದರೆ ಉನ್ನತ ಸ್ಥಾನ ಪ್ರಾಪ್ತಿಯಾಗುತ್ತದೆ. ಭಕ್ತಿಯೇ ಎಲ್ಲಕ್ಕೂ ಮೂಲ. ಇದಕ್ಕೆ ಚಂದ್ರಶೇಖರ ಕಂಬಾರರೇ ಜ್ವಲಂತ ಉದಾಹರಣೆ ಎಂದರು.

ಈ ಸಂದರ್ಭದಲ್ಲಿ ಶ್ರೀಗಳು ಡಾ. ಚಂದ್ರಶೇಖರ ಕಂಬಾರ ಅವರನ್ನು ಸತ್ಕರಿಸಿದರು. ಡಾ. ದಿನೇಶ ಕೌಶಿಕ್‌, ಡಾ. ತೇಜಾ ಹೊಸಮನಿ, ದಿಲೀಪ ಮಜಲಿಕರ ಮತ್ತಿತರರು ವೇದಿಕೆಯಲ್ಲಿದ್ದರು.

ಸುಶಿಕ್ಷಿತರಿಂದ ಪ್ರಜಾಪ್ರಭುತ್ವ ದುರ್ಬಲ :
ಸಭಾ ಕಾರ್ಯಕ್ರಮದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಡಾ. ಚಂದ್ರಶೇಕರ ಕಂಬಾರ, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಬೆಂಗಳೂರಿನಲ್ಲಿ ಸುಶಿಕ್ಷಿತ ಮತದಾರರಿದ್ದರೂ ಮತದಾನವಾಗದಿರುವುದು ಅಸಡ್ಡೆ, ನಿರ್ಲಕ್ಷ್ಯ, ಬೇಜವಾಬ್ದಾರಿತನದ ಪ್ರದರ್ಶನ ಎಂದರು.

ಇದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ. ಮತದಾನ ಜಾಗೃತಿ ಗ್ರಾಮೀಣ ಜನರಲ್ಲಿ ಮೂಡಿಸಬಹುದು. ಆದರೆ ಸುಶಿಕ್ಷಿತರಿಗೆ ತಿಳಿಹೇಳಬೇಕಾಗಿ ಬಂದಿರುವುದು ದುರ್ದೈವ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ