ಆ್ಯಪ್ನಗರ

ಗೋವಾ ಉದ್ಯಮಿ ಅಪಹರಣ, ಶಿರಸಿಯಲ್ಲಿಆರೋಪಿಗಳ ಬಂಧನ

ಪಣಜಿ: ಗೋವಾದ ನುವೆಮ್‌ನಿಂದ ಎ.ಎನ್‌.ಗ್ಯಾಸ್‌ ಕಂಪನಿಯ ...

Vijaya Karnataka 27 Sep 2019, 5:00 am
ಪಣಜಿ: ಗೋವಾದ ನುವೆಮ್‌ನಿಂದ ಎ.ಎನ್‌.ಗ್ಯಾಸ್‌ ಕಂಪನಿಯ ವ್ಯವಸ್ಥಾಪಕ ಅಂಬರೀಶ್‌ ಪ್ರಕಾಶ್‌ ಸಿಂಗ್‌ ಅವರನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಗೋವಾ ಪೊಲೀಸರು ಕರ್ನಾಟಕದ ಶಿರಸಿಯಲ್ಲಿಬಂಧಿಸಿದ್ದಾರೆ.
Vijaya Karnataka Web 26GOA6_53


ಮೊಹಮ್ಮದ್‌ ಮುಸ್ತಫಾ, ಮೊಹಮ್ಮದ್‌ ಜಾಹೀದ್‌, ಮೊಹಮ್ಮದ್‌ ಹಂಸ, ಶೇಖ್‌ ಸುಲೇಮಾನ್‌, ನವಾಜ್‌ ಬಾವಾ ಆರೋಪಿಗಳು. ಬಂಧಿತರನ್ನು ಗೋವಾಕ್ಕೆ ಕರೆತರಲಾಗಿದೆ. ಸೆ.24ರಂದು ಅಪಹರಣ ನಡೆದಿತ್ತು.

ಕರ್ನಾಟಕ ನೋಂದಣಿಯ ಕಾರಿನಲ್ಲಿಅಪಹರಿಸಿದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದರು. ಅಪಹರಣಕಾರರು ಅಂಬರೀಶ್‌ ಅವರನ್ನು ವಾಹನದಲ್ಲಿಕೂರಿಸಿಕೊಂಡು ಶಿರಸಿ ಮಾರ್ಕೆಟ್‌ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿಪೊಲೀಸರು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ