ಆ್ಯಪ್ನಗರ

ಹಾಡಹಗಲು 10 ತೊಲೆ ಚಿನ್ನಾಭರಣ ಕಳ್ಳತನ

ಕಾಗವಾಡ: ಹಾಡಹಗಲು ಮನೆ ಬೀಗ ಮುರಿದ ಕಳ್ಳರು ಮನೆಯಲ್ಲಿಯ 10 ತೊಲೆ ಚಿನ್ನಾಭರಣ ಕದ್ದಿದ್ದಾರೆ...

Vijaya Karnataka 13 Apr 2019, 5:00 am
ಕಾಗವಾಡ : ಹಾಡಹಗಲು ಮನೆ ಬೀಗ ಮುರಿದ ಕಳ್ಳರು ಮನೆಯಲ್ಲಿಯ 10 ತೊಲೆ ಚಿನ್ನಾಭರಣ ಕದ್ದಿದ್ದಾರೆ.
Vijaya Karnataka Web BEL-12 KAGWAD 1 NEWS PHOTO


ಇಲ್ಲಿನ ಬೆಳಗಾವಿ-ಸಾಂಗಲಿ ರಾಜ್ಯ ಹೆದ್ದಾರಿ ಹತ್ತಿರದ ಮಲಗೌಡ ರಾವಸಾಬ ಪಾಟೀಲ ಎಂಬುವರ ತೋಟದಲ್ಲಿ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ. ಕಬ್ಬಿಣ ರಾಡ್‌ನಿಂದ ಮನೆ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಟ್ರೆಜರಿ ಮುರಿದು ಹಣ, ಚಿನ್ನಾಭರಣಕ್ಕಾಗಿ ತಪಾಸಣೆ ಮಾಡಿದ್ದಾರೆ. ನಂತರ ಪಕ್ಕದಲ್ಲಿದ್ದ ಮಂಚದ ಡ್ರಾವರಿನಲ್ಲಿನ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.

ಮನೆಯಿಂದ ಪಟ್ಟಣದೊಳಗೆ ಹೋಗಿ ಮರಳಿ ಬಂದಾಗ ಮನೆಯವರಿಗೆ ಕಳ್ಳತನವಾಗಿರುವುದು ಗೊತ್ತಾಗಿದ್ದು, ಕೂಡಲೇ ಕಾಗವಾಡ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಪಿಎಸ್‌ಐ ಹನುಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಿವೈಎಸ್‌ಪಿ ಆರ್‌.ಬಿ. ಬಸರ್ಗಿ, ಸಿಪಿಐ ಆಲಿಸಾಬ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಚು ತಪಾಸಣೆ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ