ಗೋಕಾಕ: ಮಲೇಶಿಯಾದ ಜೋಹರ್ನಲ್ಲಿನಡೆದ 2ನೇ ಸ್ಟೂಡೆಂಟ್ಸ್ ಒಲಿಂಪಿಕ್ ಏಶಿಯನ್ ಗೇಮ್ಸ್ನಲ್ಲಿಪಾಕಿಸ್ತಾನದ ವಿರುದ್ಧ ಕಬಡ್ಡಿ ಪ್ರದರ್ಶನ ನೀಡಿದ ಭಾರತೀಯ ಕಬಡ್ಡಿ ತಂಡದಲ್ಲಿಪಟ್ಟಣದ ಜೆಎಸ್ಎಸ್ ಪದವಿ ಮಹಾವಿದ್ಯಾಲಯದ ಬಿಎ 3ನೇ ಸೆಮಿಸ್ಟರ್ ವಿದ್ಯಾರ್ಥಿ, ತಾಲೂಕಿನ ನಲ್ಲಾನಟ್ಟಿ ಗ್ರಾಮದ ದುಂಡಪ್ಪ ಮಲ್ಲಪ್ಪಾ ನಾಯಿಕ ಅವರು ಕರ್ನಾಟಕದಿಂದ ಭಾಗವಹಿಸಿ ಭಾರತೀಯ ಕಬಡ್ಡಿ ತಂಡಕ್ಕೆ ಚಿನ್ನದ ಪದಕ ತರುವಲ್ಲಿಯಶಸ್ವಿಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರಾದ ವಿ.ಆರ್. ಕುಳ್ಳೂರು, ಎಂ.ಎಸ್. ವಾಲಿ ತರಬೇತಿ ನೀಡಿದ್ದಾರೆ.
ಭಾರತ ತಂಡಕ್ಕೆ ಚಿನ್ನದ ಪದಕ
ಭಾರತ ತಂಡಕ್ಕೆ ಚಿನ್ನದ ಪದಕ ಗೋಕಾಕ: ಮಲೇಶಿಯಾದ ಜೋಹರ್ನಲ್ಲಿನಡೆದ 2ನೇ ...
Vijaya Karnataka 10 Jan 2020, 5:00 am