ಆ್ಯಪ್ನಗರ

ಬಂಗಾರ ಕಳ್ಳತನ: ಮತ್ತೋರ್ವ ಆರೋಪಿ ಸೆರೆ

ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಬಂಗಾರದ ಅಂಗಡಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕಿತ್ತೂರು ಠಾಣೆಯ ಪೊಲೀಸರು ಮತ್ತೊರ್ವ ...

Vijaya Karnataka 4 Jun 2019, 5:00 am
ಬೆಳಗಾವಿ : ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಬಂಗಾರದ ಅಂಗಡಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕಿತ್ತೂರು ಠಾಣೆಯ ಪೊಲೀಸರು ಮತ್ತೊರ್ವ ಕಳ್ಳನನ್ನು ಬಂಧಿಸಿದ್ದಾರೆ.
Vijaya Karnataka Web BEL-3 LBS 12


ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸುನೀಲ್‌ ರಾಮು (26) ಬಂಧಿತ ಆರೋಪಿ. ಈತನಿಂದ 21.18 ಲಕ್ಷ ರೂ. ಮೌಲ್ಯದ 775 ಗ್ರಾಂ ಚಿನ್ನಾಭರಣ, 16,200 ರೂ. ನಗದು, 50 ಸಾವಿರ ರೂ. ಮೌಲ್ಯದ ಬೈಕ್‌ ವಶಪಡಿಸಿಕೊಂಡಿದ್ದಾರೆ.

2018ರ ಸೆ.29ರಂದು ಕಿತ್ತೂರಿನ ವಿನಾಯಕ ಜ್ಯುವೆಲರ್ಸ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ತನಿಖೆ ನಡೆಸಿದ ಕಿತ್ತೂರು ಠಾಣೆಯ ಪೊಲೀಸರು 2019ರ ಫೆ.26 ರಂದು ಬಳ್ಳಾರಿಯ ರಾಮು ವೆಂಕಟೇಶ (20), ಭದ್ರಾವತಿಯ ರಾಮು ಫಕೀರಪ್ಪ (52) ಹಾಗೂ ಕೆ.ಮಂಜುನಾಥ (40) ಎಂಬುವವರನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ