ಆ್ಯಪ್ನಗರ

ಅಥಣಿ ತಾಲೂಕಿನಲ್ಲಿ ಭೂಸುಧಾರಣೆ ಕಾಯ್ದೆ,ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ನೀಡಿದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಅಥಣಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ...

Vijaya Karnataka 29 Sep 2020, 5:00 am
ಅಥಣಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಭೂಸುಧಾರಣೆ ಕಾಯ್ದೆ,ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳು ಕೈಗೊಂಡಿರುವ ಕರ್ನಾಟಕ ಬಂದ್‌ಗೆ ಅಥಣಿ ತಾಲೂಕಿನಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web 28-ATHANI-2-A_53
ಅಥಣಿಯ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘಟನೆಯಿಂದ ತಹಸೀಲ್ದಾರ್‌ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಲಾಯಿತು.


ಇಲ್ಲಿಯ ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳು ಮತ್ತಿತರ ಕನ್ನಡಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ಗಮನ ಸೆಳೆದವು. ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ರೈತ ಸಂಘಟನೆಗಳ ಪಾದಯಾತ್ರೆಯು ಅಂಬೇಡ್ಕರ ವೃತ್ತದಲ್ಲಿಸಮಾವೇಶಗೊಂಡು ನಂತರ ತಹಸೀಲ್ದಾರ್‌ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿ ಮುಕ್ತಾಯಗೊಳಿಸಿದರು.

ರೈತ ಸಂಘಟನೆಯ ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಹೆಸರಿನಲ್ಲಿಆಡಳಿತಕ್ಕೆ ಬಂದು ಇಂದು ರೈತರ ಬೆನ್ನಲುಬುನ್ನು ಮುರಿಯುವ ಹುನ್ನಾರ ನಡೆಸಿವೆ ರೈತರನ್ನ ಬಂಡವಾಳ ಶಾಹಿಗಳ ಕೈಗೊಂಬೆಯನ್ನಾಗಿಸುವ ನಿಟ್ಟಿನಲ್ಲಿಈ ಕಾಯ್ದೆಗಳ ತಿದ್ದುಪಡಿ ಮಾಡಿ ರೈತರನ್ನು ಭಿಕ್ಷುಕರನ್ನಾಗಿಸಲು ಹೊರಟಿವೆ ಎಂದರು.

ಕನ್ನಡಪರ ಸಂಘಟನೆಯ ಬಸನಗೌಡ ಪಾಟೀಲ,ರವಿ ಪೂಜಾರಿ, ಮಾತನಾಡಿದರು. ರೈತ ಸಂಘಟನೆಯ ಪದಾಧಿಕಾರಿಗಳಾದ ಪಾರೀಶ ಆಜೂರ, ಶಿವಾನಂದ ಖೋತ, ಮಹಾದೇವ ಕುಚನೂರ, ಶಶಿಧರ ಬರ್ಲಿ, ಜಗದೀಶ ಮರೆಗುದ್ದಿ, ನಿಂಗಪ್ಪ ಸವದಿ, ಚನಗೌಡ ಇಮಗೌಡರ, ರಮೇಶ ಮೆಂಡಿಗೇರಿ, ಪಿಂಟು ಕಬಾಡಗಿ, ಲಕ್ಕಪಾ ಪೂಜಾರಿ,ನಿತ್ಯಾನಂದ ಚರಂತಿಮಠ ಸೇರಿದಂತೆ ರೈತ ಮಹಿಳೆಯರು ಮತ್ತಿತರರು ಇದ್ದರು.

ಸಾರಿಗೆ ಬಸ್‌ ಸಂಚಾರ, ಬ್ಯಾಂಕ್‌, ಆಸ್ಪತ್ರೆ, ಔಷಧ ಅಂಗಡಿ ಸೇರಿದಂತೆ ಹಾಲು, ತರಕಾರಿ ಅಂಗಡಿಗಳ ವ್ಯಾಪಾರ ವಹಿವಾಟು ಎಂದಿನಂತಿತ್ತು. ಕೆಲವು ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಬೆಂಬಲ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ