ಆ್ಯಪ್ನಗರ

ವಿದ್ಯುತ್‌ ಕಂಬಕ್ಕೆ ಗೂಡ್ಸ್‌ ವಾಹನ ಡಿಕ್ಕಿ

ಕುಡಚಿ: ಭಿರಡಿ ಗ್ರಾಮದ ಬನಹಟ್ಟಿಗಲ್ಲಿಯ ರಸ್ತೆ ತಿರುವೊಂದರ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ಸಂಜೆ ...

Vijaya Karnataka 5 Jul 2018, 5:00 am
ಕುಡಚಿ: ಭಿರಡಿ ಗ್ರಾಮದ ಬನಹಟ್ಟಿಗಲ್ಲಿಯ ರಸ್ತೆ ತಿರುವೊಂದರ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ಸಂಜೆ ಗೂಡ್ಸ್‌ ಬುಲೆರೋ ವಾಹನವೊಂದು ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿದ್ದು ಸಂಭವನೀಯ ಅನಾಹುತ ತಪ್ಪಿದೆ.
Vijaya Karnataka Web BEL-4KDC1


ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಗಳನ್ನು ಹೊತ್ತಿದ್ದ ಕಂಬ ಅದೃಷ್ಟವಶಾತ್‌ ವಾಹನದ ಟಾಪ್‌ ಮೇಲೆ ಬಿದ್ದಿದ್ದು ನೆಲಕ್ಕುರುಳಿದ್ದರೆ ಅನಾಹುತಕ್ಕೆ ಕಾರಣವಾಗಲಿತ್ತು.

ಜುಗೂಳದ 'ಜಂಗಲ್‌ವಾಲೇ ಬಾಬಾ' ಎಂದೇ ಖ್ಯಾತಿ ಪಡೆದಿರುವ ಜೈನ ಮುನಿಗಳು ತಮ್ಮ ನೂರಾರು ಶಿಷ್ಯರೊಂದಿಗೆ ನಡೆಯುತ್ತ ಈ ಭಾಗದಲ್ಲಿ ಸಂಚರಿಸಿ ಗ್ರಾಮದ ಬಸದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಸಾಹಿತ್ಯ, ಸಾಮಗ್ರಿ ತುಂಬಿದ ವಾಹನ ಕಂಬಕ್ಕೆ ಅಪ್ಪಳಿಸಿದೆ. ಸ್ಥಳೀಯರ ಸಕಾಲಿಕ ತುರ್ತು ಕರೆಗೆ ಹೆಸ್ಕಾಂನವರು ತಕ್ಷ ಣ ವಿದ್ಯುತ್‌ ಸರಬರಾಜು ಕಡಿತಗೊಳಿಸಿದ್ದರಿಂದ ಅವಘಡ ತಪ್ಪಿದೆ. ಗ್ರಾಪಂ ಸದಸ್ಯ ಕಲ್ಮೇಶ ನಿಡವಣಿ, ಮಲ್ಲಿಕಾರ್ಜುನ ಪತ್ರಾವಳಿ, ಕಾಡಯ್ಯಾ ಹಿರೇಮಠ, ಪ್ರಕಾಶ ಬರಗಾಲೆ ಮೊದಲಾದವರು ಸೇರಿ ವಾಹನದ ಮೇಲೆ ಬಿದ್ದಿದ್ದ ಕಂಬ ತೆರವುಗೊಳಿಸಲು ಶ್ರಮಿಸಿದರು. ಸ್ಥಳಕ್ಕೆ ಹೆಸ್ಕಾಂ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿದ್ದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ