ಆ್ಯಪ್ನಗರ

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ಧೂರಿ ತೆರೆ

ಬೆಳಗಾವಿ : ''ಗಾಳಿಪಟ ಉತ್ಸವ ನೋಡಲು ಈ ಮೊದಲು ಉತ್ತರ ಭಾರತದ ಗುಜರಾತ್‌ ರಾಜ್ಯಕ್ಕೆ ಹೋಗಬೇಕಿತ್ತು ...

Vijaya Karnataka 21 Jan 2019, 5:00 am
ಬೆಳಗಾವಿ : ''ಗಾಳಿಪಟ ಉತ್ಸವ ನೋಡಲು ಈ ಮೊದಲು ಉತ್ತರ ಭಾರತದ ಗುಜರಾತ್‌ ರಾಜ್ಯಕ್ಕೆ ಹೋಗಬೇಕಿತ್ತು. ಶಾಸಕ ಅಭಯ ಪಾಟೀಲ ಅವರು ದಕ್ಷಿಣ ಭಾರತದ ಬೆಳಗಾವಿಯಲ್ಲಿ ಇಂಥ ಅವಕಾಶ ಒದಗಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ'' ಎಂದು ಕಂಟೋನ್ಮೆಂಟ್‌ ಸಿಇಒ ದಿವ್ಯಾ ಹೊಸೂರ ಹೇಳಿದರು.
Vijaya Karnataka Web BLG-2001-2-52-20RAJU-21


ನಗರದಲ್ಲಿ ಭಾನುವಾರ ಸಂಜೆ ಸಮಾರೋಪಗೊಂಡ 9ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ''ಗಾಳಿಪಟ ವೈಜ್ಞಾನಿಕ ಕ್ರೀಡೆ. ಪಟ ಮತ್ತು ಅದರ ಸೂತ್ರ ಬದುಕಿನ ಅನೇಕ ಮಗ್ಗಲುಗಳನ್ನು ವಿವರಿಸುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೂ ಪೂರಕವಾಗಿದೆ. ಕಳೆದ 9 ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವ ಈ ಗಾಳಿಪಟ ಉತ್ಸವ ಈ ಭಾಗದ ಜನರಲ್ಲಿ ಕ್ರಿಯಾಶೀಲತೆ ತುಂಬಿದೆ. ಇದನ್ನು ಬರೀ ಮನರಂಜನೆ ಸಾಧನವೆಂದು ತಿಳಿಯದೇ ಯುವ ಜನತೆ ನಾನಾ ಮಗ್ಗಲುಗಳಿಂದ ಬಳಸಿಕೊಳ್ಳಬೇಕು'' ಎಂದು ಕರೆ ನೀಡಿದರು.

ಹೋಟೆಲ್‌ ಉದ್ಯಮಿ ಉಲ್ಲಾಸ ಶಾನಬಾಗ, ಉದ್ಯಮಿ ರೋಹಿತ ದೇಶಪಾಂಡೆ, ಪರಿವರ್ತನ ಪರಿವಾರದ ಸಂತೋಷ ಪಾಟೀಲ, ಚೈತನ್ಯ ಕುಲಕರ್ಣಿ ವೇದಿಕೆ ಮೇಲಿದ್ದರು. ಉತ್ಸವದ ಅಂಗವಾಗಿ ಹಾಗೂ ಇದಕ್ಕೂ ಮೊದಲು ನಡೆಸಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ನೂರಾರು ಸಾಧಕರಿಗೆ ಪ್ರಶಸ್ತಿ, ಸ್ಮರಣಿಕೆ ನೀಡಿ ಹಾಗೂ ಗಾಳಿಪಟ ಪ್ರವೀಣರಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಯಿತು. ಯುವಕ ಯುವತಿಯರಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯಪುರದ ಅನಿಲಕುಮಾರ ಮಾಲಗಾರ ಮತ್ತು ಸ್ಥಳೀಯ ರಾಹುಲ್‌ ಮಹೇಂದ್ರಕರ್‌ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಟ್ಟರು. ಸ್ಥಳೀಯರಿಗಾಗಿ ಗಾಳಿಪಟ ಉತ್ಸವ ಜ.22ರ ವರೆಗೂ ಮುಂದುವರಿಯಲಿದೆ.

ಚಾಕಲೇಟ್‌ ಉತ್ಸವ :
ಉತ್ಸವದ ರೂವಾರಿ ಶಾಸಕ ಅಭಯ ಪಾಟೀಲ ಮಾತನಾಡಿ, ಉತ್ಸವದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಮುಂದಿನ ವರ್ಷ ಹೊಸದಾಗಿ ಚಾಕಲೇಟ್‌ ಉತ್ಸವ ಸಂಘಟಿಸಲಾಗುತ್ತದೆ. ಜತೆಗೆ ಗಾಳಿಪಟ ಉತ್ಸವದ ದಶಮಾನೋತ್ಸವ ಇರುವುದರಿಂದ 10ನೇ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವವನ್ನು ವಿಶಿಷ್ಟ ರೀತಿಯಲ್ಲಿ ಹಾಗೂ ಸ್ಮರಣೀಯವಾಗಿ ಸಂಘಟಿಸುವುದಾಗಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ