ಆ್ಯಪ್ನಗರ

ದ್ರಾಕ್ಷಿ ಬೆಳೆ ಹಾನಿ; 17 ಕೋಟಿ ವಿಮೆ ಪರಿಹಾರ

ಅಥಣಿ: ಅಕಾಲಿಕ ಮಳೆಯಿಂದ ನಷ್ಟವಾದ ದ್ರಾಕ್ಷಿ ಬೆಳೆಗೆ ...

Vijaya Karnataka 11 Nov 2019, 5:00 am
ಅಥಣಿ: ಅಕಾಲಿಕ ಮಳೆಯಿಂದ ನಷ್ಟವಾದ ದ್ರಾಕ್ಷಿ ಬೆಳೆಗೆ ಹವಾಮಾನ ಆಧಾರಿತ ದ್ರಾಕ್ಷಿ ಬೆಳೆ ವಿಮೆ ಯೋಜನೆ ಅಡಿ ಜಿಲ್ಲೆಯ 1,105 ರೈತರಿಗೆ 17.7 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಅಥಣಿ ತಾಲೂಕಿನ 955 ದ್ರಾಕ್ಷಿ ಬೆಳೆಗಾರರಿಗೆ 16.29 ಕೋಟಿ ರೂ. ವಿಮೆ ಪರಿಹಾರ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
Vijaya Karnataka Web grape crop damage 17 crores insurance compensation
ದ್ರಾಕ್ಷಿ ಬೆಳೆ ಹಾನಿ; 17 ಕೋಟಿ ವಿಮೆ ಪರಿಹಾರ


ಭಾನುವಾರ ಪಟ್ಟಣದಲ್ಲಿಸುದ್ದಿಗಾರರ ಜತೆ ಮಾತನಾಡಿದ ಅವರು, ಅಥಣಿ ತಾಲೂಕಿನಲ್ಲಿಒಟ್ಟು 4,500 ಹೆಕ್ಟೇರ್‌ ಪ್ರದೇಶದಲ್ಲಿದ್ರಾಕ್ಷಿ ಬೆಳೆ ಇದ್ದು, ಈ ಪೈಕಿ 2,500 ಹೆಕ್ಟೇರ್‌ ಪ್ರದೇಶದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಅಥಣಿ ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕಿನ 150 ರೈತರಿಗೆ 78 ಲಕ್ಷ ರೂ. ವಿಮೆ ಪರಿಹಾರ ಸಿಕ್ಕಿದೆ ಎಂದು ತಿಳಿಸಿದರು.

2019-20ನೇ ಸಾಲಿನ ಹವಾಮಾನ ಆಧಾರಿತ ದ್ರಾಕ್ಷಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನ. ಈವರೆಗೆ ಜಿಲ್ಲೆಯ 216 ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ. ಹೆಚ್ಚಿನ ರೈತರು ವಿಮೆಯ ಸೌಲಭ್ಯ ಪಡೆಯಬೇಕು ಎಂದು ಅವರು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ