ಆ್ಯಪ್ನಗರ

ಮಾರಾಮಾರಿ: ಖಾಸಗಿ ಬಸ್‌ ಚಾಲಕನ ಬಂಧನ

ಬೆಳಗಾವಿ: ನಗರದ ಶ್ರೀ ಕೃಷ್ಣದೇವರಾಯ ವೃತ್ತದ ಬಳಿ ಮಾ...

Vijaya Karnataka 26 Mar 2019, 5:00 am
ಬೆಳಗಾವಿ: ನಗರದ ಶ್ರೀ ಕೃಷ್ಣದೇವರಾಯ ವೃತ್ತದ ಬಳಿ ಮಾ.23ರಂದು ತಡರಾತ್ರಿ ನಡೆದಿದ್ದ ಎರಡು ಗುಂಪುಗಳ ಮಧ್ಯದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಖಾಸಗಿ ಬಸ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web group clash private bus driver arrested
ಮಾರಾಮಾರಿ: ಖಾಸಗಿ ಬಸ್‌ ಚಾಲಕನ ಬಂಧನ

ಇಲ್ಲಿನ ನ್ಯೂ ಗಾಂಧಿ ನಗರದ ಗುಲಾಬ್‌ ಷಾ ಗಲ್ಲಿಯ ಅಷ್ಪಾಕ್‌ ಮಸ್ತಾನಸಾಬ್‌ ಅವಟಿ (36) ಬಂಧಿತ. ಈತ ಮಾ.23 ರಂದು ತಡರಾತ್ರಿ ಕರ್ಕಶವಾಗಿ ಹಾರ್ನ್‌ ಬಾರಿಸಿದ್ದ. ಇದರಿಂದ ಕಿರಿಕಿರಿ ಅನುಭವಿಸಿದ್ದ ಕೆಲ ಯುವಕರು ಆತನೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ವಾಗ್ವಾದ ಹೆಚ್ಚಿ ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಗಿತ್ತು.
ಘಟನೆಯಲ್ಲಿ ರಾಮ ನಗರದ ವಡ್ಡರವಾಡಿಯ ಮೂವರು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಮಾಳಮಾರುತಿ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಪರಿಸ್ಥಿತಿ ನಿಯಂತ್ರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ತನಿಖೆಯ ಮುಂದುವರಿದ ಭಾಗವಾಗಿ ಸೋಮವಾರ ಬಸ್‌ ಚಾಲಕನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ