ಆ್ಯಪ್ನಗರ

ಹ್ಯಾಕರ್ಸ್‌ ಕೈಚಳಕ; ಲಕ್ಷಾಂತರ ರೂ. ಕಳವು

ಬೆಳಗಾವಿ: ಹುಕ್ಕೇರಿ ಪಟ್ಟಣದಲ್ಲಿ ಇಬ್ಬರು ಯೋಧರದ್ದೂ ಸೇರಿದಂತೆ 8 ಜನರ ಬ್ಯಾಂಕ್‌ ಅಕೌಂಟ್‌ ...

Vijaya Karnataka 28 Oct 2018, 5:00 am
ಬೆಳಗಾವಿ : ಹುಕ್ಕೇರಿ ಪಟ್ಟಣದಲ್ಲಿ ಇಬ್ಬರು ಯೋಧರದ್ದೂ ಸೇರಿದಂತೆ 8 ಜನರ ಬ್ಯಾಂಕ್‌ ಅಕೌಂಟ್‌ ಹ್ಯಾಕ್‌ ಮಾಡಿ ಲಕ್ಷಾಂತರ ರೂಪಾಯಿ ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web hackers finesse millions of rupees stolen
ಹ್ಯಾಕರ್ಸ್‌ ಕೈಚಳಕ; ಲಕ್ಷಾಂತರ ರೂ. ಕಳವು


ಹ್ಯಾಕರ್‌ಗಳು ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ಒಟ್ಟು 3.46 ಲಕ್ಷ ರೂ. ಕಳೆದುಕೊಂಡಿರುವುದಾಗಿ ಮೋಸ ಹೋದ ಗ್ರಾಹಕರು ದೂರಿದ್ದಾರೆ.

ವಂಚನೆಗೆ ಒಳಗಾದ ಎಲ್ಲರೂ ಹುಕ್ಕೇರಿ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆ ಪೈಕಿ ಸೇನೆಯ ಕರ್ತವ್ಯದಲ್ಲಿದ್ದ ವೇಳೆ ಗಂಭೀರ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾಗಿರುವ ಬಿಎಸ್‌ಎಫ್‌ ಯೋಧ ಶಿವಾನಂದ ಮುರಗಿ ಅವರ ಎರಡು ತಿಂಗಳ ವೇತನ ಸೇರಿದಂತೆ ಖಾತೆಯಲ್ಲಿದ್ದ ಒಟ್ಟು 80 ಸಾವಿರ ರೂ.ಗಳನ್ನು ಹ್ಯಾಕ್‌ ಮಾಡಿ ಡ್ರಾ ಮಾಡಿಕೊಳ್ಳಲಾಗಿದೆ. ಅದೇ ರೀತಿ, ಯೋಧ ಮಾರುತಿ ನಾಶಿಪುಡಿ ಅವರು ತಾಯಿಯ ಚಿಕಿತ್ಸೆಗಾಗಿ ಸಂಗ್ರಹಿಸಿಟ್ಟಿದ್ದ 50 ಸಾವಿರ ರೂ. ಕೂಡ ಹ್ಯಾಕರ್‌ ಕೈಚಳದಿಂದ ಕಾಣೆಯಾಗಿದೆ. ಬಸ್ತವಾಡ ಗ್ರಾಮದ ಶಿವಲಿಂಗ ವಂಟಮೂರಿ 55 ಸಾವಿರ ರೂ. ಕಳೆದುಕೊಂಡಿದ್ದಾರೆ.

ಅ.13 ರಿಂದ 17ರ ಅವಧಿಯಲ್ಲಿ ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಮತ್ತು ಬೇರೆ ಬೇರೆ ಪಟ್ಟಣಗಳಲ್ಲಿನ ಎಟಿಎಂಗಳಿಂದ ಹಣ ಡ್ರಾ ಆಗಿದ್ದು, ಮೊಬೈಲ್‌ಗೆ ಸಂದೇಶ ಬಂದಾಗಲೇ ಗ್ರಾಹಕರು ಹಾಗೂ ಬ್ಯಾಂಕ್‌ ಅಧಿಕಾರಿಗಳಿಗೆ ಖದೀಮರ ಕೈಚಳಕ ಗೊತ್ತಾಗಿದೆ. ''ಆರಂಭದಲ್ಲಿ ಈ ಕುರಿತು ಬ್ಯಾಂಕ್‌ ಮತ್ತು ಪೊಲೀಸ್‌ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಲಿಲ್ಲ. ಇದೇ ಕಾರಣಕ್ಕೆ ಹಣ ಡ್ರಾ ಆದ ಮಹಾರಾಷ್ಟ್ರದ ಕೊಲ್ಲಾಪುರ ಪೊಲೀಸ್‌ ಠಾಣೆಗೂ ಹೋಗಿ ದೂರು ನೀಡುವ ಪ್ರಯತ್ನ ಮಾಡಲಾಗಿತ್ತು. ಕೊನೆಗೆ ಮಹಾರಾಷ್ಟ್ರ ಪೊಲೀಸರ ಸೂಚನೆಯಂತೆ ಮತ್ತೆ ಹುಕ್ಕೇರಿಗೆ ಬಂದು ದೂರು ದಾಖಲಿಸಿದ್ದೇವೆ'', ಎಂದು ಶಿವಲಿಂಗ ವಂಟಮೂರಿ 'ವಿಕ'ಗೆ ತಿಳಿಸಿದರು.

ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ವಂಚನೆ ಮಾಡಿರುವ ಕುರಿತು ದೂರು ದಾಖಲಾಗಿವೆ. ಸಂಬಂಧಿಸಿದವರ ವಿಚಾರಣೆ ಮೂಲಕ ತನಿಖೆ ಕೈಗೊಳ್ಳಲಾಗಿದೆ.
-ಹುಂದ್ರೇಶ ಹೊಳೆನ್ನವರ. ಸಿಪಿಐ, ಹುಕ್ಕೇರಿ.

ಈ ಘಟನೆಗೆ ಸಂಬಂಧಿಸಿದ ಬ್ಯಾಂಕ್‌ನವರೇ ಜವಾಬ್ದಾರರು. ಆದಷ್ಟು ಬೇಗ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಬೇಕು.
- ಶಿವಲಿಂಗ ವಂಟಮೂರಿ. ವಂಚನೆಗೆ ಒಳಗಾದ ಬ್ಯಾಂಕ್‌ ಗ್ರಾಹಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ