ಆ್ಯಪ್ನಗರ

ರಾಜ್ಯಕ್ಕೆ ಅರ್ಧ ಟಿಎಂಸಿ ನೀರು: ರೈತರಲ್ಲಿ ಮೂಡಿದ ಸಂತಸ

ಕಾಗವಾಡ: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ...

Vijaya Karnataka 23 May 2018, 5:00 am
ಕಾಗವಾಡ: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಆರಂಭವಾಗಿರುವ ತಾಕಾರಿ-ಮೈಶಾಳ ಏತ ನೀರಾವರಿ ಯೋಜನೆಯ ಕೆಲ ಪಂಪ್‌ಸೆಟ್‌ಗಳು ಕೆಟ್ಟುಹೋಗಿರುವ ಪರಿಣಾಮ ದೈವ ಇಚ್ಛೆಯೋ ಎಂಬಂತೆ ರಾಜ್ಯಕ್ಕೆ ಅರ್ಧ ಟಿಎಂಸಿ ಕೃಷ್ಣಾ ನದಿ ನೀರು ಹರುದು ಬಂದಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
Vijaya Karnataka Web BEL-22 KAGWAD 1


ಕಳೆದ ವರ್ಷದ ಬೇಸಗೆಯಲ್ಲಿ ಸುಮಾರು 40 ದಿನ ನದಿಯಲ್ಲಿ ನೀರಿಲ್ಲದೆ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ಕಮರಿ ಹೋಗಿ ರೈತರು ಬೆಳೆ ನಾಶ ಅನುಭವಿಸಿದ್ದರು. ಆದರೆ ಪ್ರಸಕ್ತ ವರ್ಷ ಜಿಲ್ಲಾಧಿಕಾರಿಗಳು ಶನಿವಾರ ಮತ್ತು ಭಾನುವಾರ ಕೃಷ್ಣಾ ನದಿ ತೀರದ ಎಲ್ಲ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ ಪರಿಣಾಮ ಮೇ ತಿಂಗಳ ಮಧ್ಯದ ವರೆಗೆ ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನೀರು ಉಳಿದು ನೀರಿನ ಕೊರತೆ ಕಾಣಿಸಿರಲಿಲ್ಲಿ.
ಇದರ ಜತೆಗೆ ಈಗ ಮಹಾರಾಷ್ಟ್ರದಿಂದ ನೀರು ಹರಿದು ಬಂದಿರುವುದರಿಂದ ರೈತರ ಸಂತಸ ಇಮ್ಮಡಿಗೊಂಡಿದೆ.

ಉಗಾರ ಬ್ಯಾರೇಜ್‌ ಬಾಗಿಲುಗಳನ್ನು ತೆಗೆದು ನೀರನ್ನು ಹಿಪ್ಪರಗಿ ಅಣೆಕಟ್ಟಿನ ವರೆಗೆ ಹರಿಸಲಾಗಿದೆ. ಮಹಾರಾಷ್ಟ್ರ ಸರಕಾರ ನೀರು ಹರಿಸದಿದ್ದರೂ ಪಂಪ್‌ಸೆಟ್‌ಗಳ ದುರಸ್ತಿಯಿಂದಾಗಿ ನೀರು ಹರೆದು ಬಂದಿರುವುದರಿಂದ ಜನರ ಸಮಸ್ಯೆ ಕೊಂಚ ಮಟ್ಟಿಗೆ ಇತ್ಯಾರ್ಥವಾಗಿದೆ.
- ಅರುಣ ಯಲಗುದ್ರಿ, ಹಿಪ್ಪರಗಿ ಅಣೆಕಟ್ಟಿನ ಸಹಾಯಕ ಕಾರ್ಯಪಾಲಕ ಅಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ