ಬಿದ್ದ ಮನೆಗಳ ಮಣ್ಣು ತೆರವು ಮಾಡಲು ಅಧಿಕ ಹಣ ಪಾವತಿ ಆರೋಪ
ಗೋಕಾಕ: ನೆರೆಯಿಂದ ನಗರದಲ್ಲಿಬಿದ್ದ ಮನೆ, ಕಟ್ಟಡಗಳ ಮಣ್ಣು ಹಾಗೂ ತ್ಯಾಜ್ಯ ವಿಲೇವಾರಿಗೆ ಅಧಿಕ ಹಣ ...
Vijaya Karnataka 27 Sep 2019, 5:00 am
ಗೋಕಾಕ: ನೆರೆಯಿಂದ ನಗರದಲ್ಲಿಬಿದ್ದ ಮನೆ, ಕಟ್ಟಡಗಳ ಮಣ್ಣು ಹಾಗೂ ತ್ಯಾಜ್ಯ ವಿಲೇವಾರಿಗೆ ಅಧಿಕ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿಶಾಸಕ ಸತೀಶ ಜಾರಕಿಹೊಳಿ ನಗರ ಸಭೆ ಪೌರಾಯುಕ್ತರಿಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ. ಅಲ್ಲದೇ ಈ ಕುರಿತು ನಗರಸಭೆ ಸದಸ್ಯರಲ್ಲೂಪರಸ್ಪರ ಆರೋಪ- ಪ್ರತ್ಯಾರೋಪ ಕೇಳಿ ಬಂದಿದೆ.
ನೆರೆಯಿಂದ ನಗರದ ಹಲವು ಮನೆಗಳು ಜಲಾವೃತಗೊಂಡಿದ್ದವು. ನೆರೆಯಿಂದ ಬಿದ್ದ ಮನೆಗಳ ಮಣ್ಣು- ತ್ಯಾಜ್ಯ ವಿಲೇವಾರಿ ಮಾಡಲಾಗಿತ್ತು. ನಗರಸಭೆ, ಸತೀಶ್ ಶುಗರ್ಸ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಣ್ಣು ವಿಲೇವಾರಿ ಮಾಡಿದ್ದವು. ಸುಮಾರು 50 ಸಾವಿರ ಟ್ರ್ಯಾಕ್ಟರ್ ಟ್ರಿಪ್ನಷ್ಟು ಮಣ್ಣು ತೆರವು ಮಾಡಲಾಗಿತ್ತು. ಸತೀಶ್ ಶುಗರ್ಸ್ ಸಿಬ್ಬಂದಿ ಕೂಡ ಈ ಕಾರ್ಯದಲ್ಲಿಭಾಗಿಯಾಗಿದ್ದರು.
ನಗರಸಭೆ ಮಣ್ಣು ತೆರವು ಮಾಡಲು ಒಂದು ಟ್ರಿಪ್ ಟ್ರ್ಯಾಕ್ಟರ್ ಗೆ ಸಾವಿರ ರೂ. ದರ ನಿಗದಿ ಮಾಡಿದೆ ಎನ್ನಲಾಗಿದೆ. ಇದಕ್ಕಿಂತ ಕಡಿಮೆ ದರಕ್ಕೆ ಹೂಳೆತ್ತಲು ತಯಾರಿರುವ ಗುತ್ತಿಗೆದಾರನಿಗೂ ಸಾವಿರ ರೂ. ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾರಿಗೂ ಹಣ ಪಾವತಿ ಮಾಡಿಲ್ಲ. ಲೋಕೋಪಯೋಗಿ ಇಲಾಖೆ ಮಾರ್ಗದರ್ಶಿಯಂತೆ ದರ ನಿಗದಿ ಮಾಡಲಾಗುವುದು. ಯಾರ ಒತ್ತಡಕ್ಕೂ ಮಣಿಯದೇ ಪಾರದರ್ಶಕವಾಗಿ ನಿಯಮಗಳ ಪ್ರಕಾರ ಹಣ ನೀಡಲಾಗುವುದು.
- ಶಿವಾನಂದ ಹಿರೇಮಠ, ಪೌರಾಯುಕ್ತ
ನೆರೆಯಿಂದ ನಗರದ ಹಲವು ಮನೆಗಳು ಜಲಾವೃತಗೊಂಡಿದ್ದವು. ನೆರೆಯಿಂದ ಬಿದ್ದ ಮನೆಗಳ ಮಣ್ಣು- ತ್ಯಾಜ್ಯ ವಿಲೇವಾರಿ ಮಾಡಲಾಗಿತ್ತು. ನಗರಸಭೆ, ಸತೀಶ್ ಶುಗರ್ಸ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಣ್ಣು ವಿಲೇವಾರಿ ಮಾಡಿದ್ದವು. ಸುಮಾರು 50 ಸಾವಿರ ಟ್ರ್ಯಾಕ್ಟರ್ ಟ್ರಿಪ್ನಷ್ಟು ಮಣ್ಣು ತೆರವು ಮಾಡಲಾಗಿತ್ತು. ಸತೀಶ್ ಶುಗರ್ಸ್ ಸಿಬ್ಬಂದಿ ಕೂಡ ಈ ಕಾರ್ಯದಲ್ಲಿಭಾಗಿಯಾಗಿದ್ದರು.
ನಗರಸಭೆ ಮಣ್ಣು ತೆರವು ಮಾಡಲು ಒಂದು ಟ್ರಿಪ್ ಟ್ರ್ಯಾಕ್ಟರ್ ಗೆ ಸಾವಿರ ರೂ. ದರ ನಿಗದಿ ಮಾಡಿದೆ ಎನ್ನಲಾಗಿದೆ. ಇದಕ್ಕಿಂತ ಕಡಿಮೆ ದರಕ್ಕೆ ಹೂಳೆತ್ತಲು ತಯಾರಿರುವ ಗುತ್ತಿಗೆದಾರನಿಗೂ ಸಾವಿರ ರೂ. ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾರಿಗೂ ಹಣ ಪಾವತಿ ಮಾಡಿಲ್ಲ. ಲೋಕೋಪಯೋಗಿ ಇಲಾಖೆ ಮಾರ್ಗದರ್ಶಿಯಂತೆ ದರ ನಿಗದಿ ಮಾಡಲಾಗುವುದು. ಯಾರ ಒತ್ತಡಕ್ಕೂ ಮಣಿಯದೇ ಪಾರದರ್ಶಕವಾಗಿ ನಿಯಮಗಳ ಪ್ರಕಾರ ಹಣ ನೀಡಲಾಗುವುದು.
- ಶಿವಾನಂದ ಹಿರೇಮಠ, ಪೌರಾಯುಕ್ತ