Please enable javascript.ನಾಲ್ವರು ಮುಖ್ಯಾಧ್ಯಾಪಕರ ಅಮಾನತು - headmaster suspend in belagavi - Vijay Karnataka

ನಾಲ್ವರು ಮುಖ್ಯಾಧ್ಯಾಪಕರ ಅಮಾನತು

ವಿಕ ಸುದ್ದಿಲೋಕ 31 Aug 2016, 9:00 am
Subscribe

headmaster suspend in belagavi
ನಾಲ್ವರು ಮುಖ್ಯಾಧ್ಯಾಪಕರ ಅಮಾನತು

ಬೆಳಗಾವಿ: ಟೆಂಡರ್‌ ಕರೆಯದೇ ಶೂ ಮತ್ತು ಸಾಕ್ಸ್‌ ಖರೀದಿ ಪ್ರಕರಣಕ್ಕೆ ಸಂಬಂಧಿಧಿಸಿದಂತೆ ನಾಲ್ವರು ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿ ಬೆಳಗಾವಿ ಡಿಡಿಪಿಐ ಎಸ್‌ವೈ ಹಳಿಂಗಳಿ ಆದೇಶ ಹೊರಡಿಸಿದ್ದಾರೆ. ಬೈಲಹೊಂಗಲ ತಾಲೂಕಿನ ನಯಾನಗರ ಎಚ್‌ಪಿಎಸ್‌ನ ಮುಖ್ಯಾಧ್ಯಾಪಕಿ ಎಸ್‌ಡಿ ಗಣಾಚಾರಿ, ಯಕ್ಕುಂಡಿ ಎಚ್‌ಪಿಎಸ್‌ನ ಪ್ರಭಾರ ಮುಖ್ಯಾಧ್ಯಾಪಕ ಪಿಎಸ್‌ ಮಾದರ, ಮುರಗೋಡ ಕೆಬಿಎಸ್‌ನ ಮುಖ್ಯೋಪಾಧ್ಯಾಯ ಡಿ.ವೈ.ಹೊಂಗಲ, ಚಚಡಿ ಕೆಬಿಎಸ್‌ನ ಮುಖ್ಯೋಪಾಧ್ಯಾಯ ಪುಂಡಲೀಕ ಬಾಗಲೆ ಅಮಾನತುಗೊಂಡವರು.

ಜಿಲ್ಲೆಯ ಶಾಲಾ ಮಕ್ಕಳಿಗೆ ಉಚಿತವಾಗಿ ಪೂರೈಸಬೇಕಿರುವ ಶೂ ಮತ್ತು ಸಾಕ್ಸ್‌ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸದಸ್ಯ ಶಂಕರ ಮಾಡಲಗಿ ಆ. 8ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದರು. ಸಿಇಒ ಡಾ. ಗೌತಮ ಬಗಾದಿಯವರು ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಡಿಡಿಪಿಐ ಎಸ್‌ವೈ ಹಳಿಂಗಳಿ ಅವರಿಗೆ ನಿರ್ದೇಶನ ನೀಡಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ