ಆ್ಯಪ್ನಗರ

ಸ್ವಸ್ಥಾನಕ್ಕೆ ಹಸುಳೆಯ ಹೃದಯ: ಬೆಳಗಾವಿ ಕೆಎಲ್‌ಇ ಆಸ್ಪತ್ರೆ ವೈದ್ಯರ 9 ಗಂಟೆಗಳ ಹರಸಾಹಸ

ಹೃದಯ ಭಾಗದ ಅಂಗಾಂಗಗಳು ಅದಲು-ಬದಲಾಗಿ ಹುಟ್ಟಿದ ಹಸುಳೆಗೆ ಸತತ 9 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವೈದ್ಯರ ತಂಡ ಜೀವದಾನ ನೀಡಿದೆ.

Vijaya Karnataka 30 Sep 2018, 8:09 am
ಬೆಳಗಾವಿ: ಹೃದಯ ಭಾಗದ ಅಂಗಾಂಗಗಳು ಅದಲು-ಬದಲಾಗಿ ಹುಟ್ಟಿದ ಹಸುಳೆಗೆ ಸತತ 9 ಗಂಟೆಗಳ ಯಶಸ್ವಿ ಶಸ್ತ್ರÜಚಿಕಿತ್ಸೆ ಮೂಲಕ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವೈದ್ಯರ ತಂಡ ಜೀವದಾನ ನೀಡಿದೆ.
Vijaya Karnataka Web heart


ಇಂತ ಶಸ್ತ್ರಕ್ರಿಯೆಗೆ ಒಳಗಾದ ವಿಶ್ವದ 6ನೇ ಮಗು ಇದಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಜನಿಸಿದ ಗಂಡು ಮಗುವನ್ನು ಬಾಗಲಕೋಟೆಯ ಶಾಂತಿ ಚಿಕ್ಕಮಕ್ಕಳ ಆಸ್ಪತ್ರೆಯಿಂದ ಕೃತಕ ಉಸಿರಾಟದ ಉಪಕರಣ ಅಳವಡಿಸಿ ಗಂಭೀರ ಸ್ಥಿತಿಯಲ್ಲಿ ತಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕ್ಕಮಕ್ಕಳ ಹೃದಯ ಚಿಕಿತ್ಸಕ ಡಾ. ವೀರೇಶ ಮಾನ್ವಿ ಮತ್ತು ಹೃದಯ ಶಸ್ತ್ರಚಿಕಿತ್ಸಕ ಡಾ. ಪ್ರವೀಣ ತಂಬ್ರಳ್ಳಿಮಠ ಅವರು ಮಗುವಿನ ತಪಾಸಣೆ ನಡೆಸಿದ ಬಳಿಕ ಅಂಗಾಂಗಳು ಅದಲು-ಬದಲಾಗಿರುವುದು ಬೆಳಕಿಗೆ ಬಂದಿದೆ. ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ದೇಹದ ಹೃದಯ, ಲಿವರ್‌, ಶ್ವಾಸಕೋಶವನ್ನು ಬದಲಾವಣೆ ಮಾಡಬೇಕಾಗಿತ್ತು.

ಡಾ. ಪ್ರವೀಣ ತಂಬ್ರಳ್ಳಿಮಠ, ಡಾ. ನಿಕುಂಜ ವ್ಯಾಸ, ಡಾ. ವಿರೇಶ ಮಾನ್ವಿ ಅವರನ್ನು ಒಳಗೊಂಡ ವೈದ್ಯರ ತಂಡ ಸಾವು-ಬದುಕಿ ಮಧ್ಯೆ ಹೋರಾಟ ಮಾಡುತ್ತಿದ್ದ 20 ದಿನದ ಹಸುಳೆಗೆ ಯಶಸ್ವಿ ಶಸ್ತ್ರಕ್ರಿಯೆ ಮೂಲಕ ಉಳಿಸಿದರು. ಶಸ್ತ್ರಚಿಕಿತ್ಸೆಯ ನಂತರ ತುರ್ತು ನಿಗಾ ಘಟಕದಲ್ಲಿ ಚಿಕ್ಕಮಕ್ಕಳ ತಜ್ಞೆ ಡಾ. ನಿಧಿ ಗೋಯಲ್‌ ಮತ್ತು ಡಾ. ವೀರೇಶ ಮಾನ್ವಿ ಅವರು ನಿರಂತರ 15 ದಿನಗಳವರೆಗೆ ಚಿಕಿತ್ಸೆ ನೀಡಿ ಮಗು ಸಂಪೂರ್ಣವಾಗಿ ಗುಣಮುಖವಾಗಿದೆ. ಅರವಳಿಕೆ ತಜ್ಞ ಡಾ. ಆನಂದ ವಾಗರಾಳಿ, ಡಾ. ಶರಣ ಪಾಟೀಲ, ಡಾ. ಅಭಿಜೀತ, ಡಾ. ಸಾಮ್ರಾಟ, ಡಾ. ಜಬ್ಬಾರ ಮತ್ತಿತರ ವೈದ್ಯರು, ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ