ಆ್ಯಪ್ನಗರ

ಕೃಷ್ಣ ನದಿಗೆ ಹೆಚ್ಚಿನ ನೀರಿನಿಂದ ಪ್ರವಾಹ ಸ್ಥಿತಿ: ಬೆಳಗಾವಿಯ ಬಹುತೇಕ ಮಾರ್ಗಗಳು ಬಂದ್

ಬೆಳಗಾವಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಬಹುತೇಕ ಮಾರ್ಗಗಳು ಬಂದ್ ಆಗಿವೆ.

Vijaya Karnataka Web 6 Aug 2019, 10:52 am
ಬೆಳಗಾವಿ: ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಭಾರಿ ಪ್ರಮಾಣದ ಕೃಷ್ಣಾ ನದಿ ನೀರಿನಿಂದ ಚಿಕ್ಕೋಡಿ, ಅಥಣಿ ಮತ್ತು ರಾಯವಾಗ ತಾಲೂಕಿನ ಗ್ರಾಮಗಳು ಜಲಾವೃತಗೊಂಡ ಬೆನ್ನಲ್ಲೇ ಈಗ ಸಾರಿಗೆ ಸಂಪರ್ಕ ಕಡಿತಗಮಡಿರುವುದರಿಂದ ಇಡೀ ಜಿಲ್ಲೆ ನಡುಗಡ್ಡೆ ಪರಿಸ್ಥಿತಿ ಎದುರಿಸುತ್ತಿದೆ.
Vijaya Karnataka Web male


ಸೋಮವಾರ ರಾತ್ರಿ ಸುರಿದ. ಭಾರಿ ಮಳೆಗೆ ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರಿ ಪ್ರಮಾಣದ ಮಣ್ಣು ಕಲ್ಲು ಹರಿದು ಬಂದಿರುವುದರಿಂದ ಸೋಮವಾರ ರಾತ್ರಿಯಿಂದಲೇ ಬೆಳಗಾವಿಯಿಂದ ಕೊಲ್ಲಾಪುರ ದೆಡೆಗೆ ತೆರಳುವ ದಾರಿಯನ್ನು ಬಂದ್ ಮಾಡಲಾಗಿದೆ.

ಇತ್ತ ಬೆಳಗಾವಿಯಿಂದ ಧಾರವಾಡ ಹೋಗುವ ಮಾರ್ಗ ಮಧ್ಯೆ ಕಿತ್ತೂರು ಬಳಿ ರಾಷ್ಟ್ರೀ ಹೆದ್ದಾರಿಯಲ್ಲೂ ರಸ್ತೆ ಕುಸಿತ ಕಂಡು ಬಂದಿರುವುದರಿಂದ ಅಲ್ಲೂ ಸಂಚಾರ ನಿಷೇಧಿಸಲಾಗಿದೆ. ಗೋವಾ ತೆರಳುವ ಮಾರ್ಗವನ್ನೂ ತಾತ್ಕಾಲಿಕವಾಗಿ ಬಂದ ಮಾಡಲಾಗಿದೆ. ಬಾಗಲಕೋಟೆ ಬಿಟ್ಟರೆ ಬಹುತೇಕ ಮುಖ್ಯ ರಸ್ತೆ ಮಾರ್ಗಗಳು ಬಂದ್ ಮಾಡಲಾಗಿದೆ.

ಇನ್ನು ಬೆಳಗಾವಿಯಿಂದ ಧಾರವಾಡ ಸಾಗುವ ರೈಲು ಮಾರ್ಗದಲ್ಲೂ ಲೊಂಡಾ ಮತ್ತು ತಿನೈಘಾಟ ಬಳಿ ಭೂ ಕುಸಿತ ಕಂಡು ಬಂದಿರುವುದರಿಂದ ರೈಲು ಸಂಚಾರದಲ್ಲೂ ಅಸ್ತವ್ಯಸ್ತೆ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ