ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರವೂ ಮುಂದುವರೆದಿರುವ ಮುಂಗಾರುಪೂರ್ವ ಮಳೆ ಅವಾಂತರ ಸೃಷ್ಟಿಸಿದೆ.
ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಯುವಕನೋರ್ವ ಕೊಚ್ಚಿ ಹೋಗಿದ್ದಾನೆ. ಶನಿವಾರ ಸಂಜೆ ಅಮೀರ್ ಮತ್ತು ಇಮ್ರಾನ್ ನದಾಫ್ ಸಹೋದರರು ಬೆಳಗಾವಿ ನಗರದಿಂದ ಭೂತರಾಮನಹಟ್ಟಿ ಗ್ರಾಮ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮೇಲೆ ಹೋರಟಿರುವ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿದ್ದರಿಂದ ಇಬ್ಬರೂ ಹೆದ್ದಾರಿ ಪಕ್ಕದ ಮರದ ನೆರಳಿಗೆ ನಿಂತಿದ್ದರು.
ಈ ಸಂದರ್ಭದಲ್ಲಿ ವಂಟಮೂರಿ ಘಾಟ್ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಾಗ ಇಮ್ರಾನ್ ನಧಾಪ್ (25) ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಮ್ರಾನ್ ರಕ್ಷಣೆಗೆ ಸಹೋದರ ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ನೀರಿನ ಹರಿವು ಹೆಚ್ಚಿದ್ದರಿಂದ ಸ್ವತಃ ಅಮೀರ ನದಾಫ್ ಕೂಡ ಮರದ ಮೇಲೆ ಕುಳಿತು ರಕ್ಷಣೆ ಮಾಡಿಕೊಂಡಿದ್ದಾನೆ. ಕೆಲ ಸಮಯದ ನಂತರ 500 ಅಡಿ ದೂರದಲ್ಲಿ ಬೈಕ್ ಪತ್ತೆಯಾಗಿದೆಯಾದರೂ ಇಮ್ರಾನ ಕುರುಹು ಪತ್ತೆಯಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಕತಿ, ಉಕ್ಕಡ, ಸುತಗಟ್ಟಿ ಘಾಟ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ವಂಟಮೂರಿ ಘಾಟದಿಂದ ಹರಿದು ಬರುತ್ತಿರುವ ನೀರು ಮಿನಿ ಜಲಪಾತಗಳನ್ನು ಸೃಷ್ಟಿಸಿದೆ. ಇತ್ತಿಚೆನ ವರ್ಷಗಳಲ್ಲಿ ಹೆದ್ದಾರಿ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದಿರುವುದನ್ನು ನೋಡಿಲ್ಲ ಎಂದಿದ್ದಾರೆ ಸ್ಥಳೀಯರು.
ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಯುವಕನೋರ್ವ ಕೊಚ್ಚಿ ಹೋಗಿದ್ದಾನೆ. ಶನಿವಾರ ಸಂಜೆ ಅಮೀರ್ ಮತ್ತು ಇಮ್ರಾನ್ ನದಾಫ್ ಸಹೋದರರು ಬೆಳಗಾವಿ ನಗರದಿಂದ ಭೂತರಾಮನಹಟ್ಟಿ ಗ್ರಾಮ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮೇಲೆ ಹೋರಟಿರುವ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿದ್ದರಿಂದ ಇಬ್ಬರೂ ಹೆದ್ದಾರಿ ಪಕ್ಕದ ಮರದ ನೆರಳಿಗೆ ನಿಂತಿದ್ದರು.
ಈ ಸಂದರ್ಭದಲ್ಲಿ ವಂಟಮೂರಿ ಘಾಟ್ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಾಗ ಇಮ್ರಾನ್ ನಧಾಪ್ (25) ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಮ್ರಾನ್ ರಕ್ಷಣೆಗೆ ಸಹೋದರ ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ನೀರಿನ ಹರಿವು ಹೆಚ್ಚಿದ್ದರಿಂದ ಸ್ವತಃ ಅಮೀರ ನದಾಫ್ ಕೂಡ ಮರದ ಮೇಲೆ ಕುಳಿತು ರಕ್ಷಣೆ ಮಾಡಿಕೊಂಡಿದ್ದಾನೆ. ಕೆಲ ಸಮಯದ ನಂತರ 500 ಅಡಿ ದೂರದಲ್ಲಿ ಬೈಕ್ ಪತ್ತೆಯಾಗಿದೆಯಾದರೂ ಇಮ್ರಾನ ಕುರುಹು ಪತ್ತೆಯಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಕತಿ, ಉಕ್ಕಡ, ಸುತಗಟ್ಟಿ ಘಾಟ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ವಂಟಮೂರಿ ಘಾಟದಿಂದ ಹರಿದು ಬರುತ್ತಿರುವ ನೀರು ಮಿನಿ ಜಲಪಾತಗಳನ್ನು ಸೃಷ್ಟಿಸಿದೆ. ಇತ್ತಿಚೆನ ವರ್ಷಗಳಲ್ಲಿ ಹೆದ್ದಾರಿ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದಿರುವುದನ್ನು ನೋಡಿಲ್ಲ ಎಂದಿದ್ದಾರೆ ಸ್ಥಳೀಯರು.