ಆ್ಯಪ್ನಗರ

ಮಳೆ ಆರ್ಭಟಕ್ಕೆ ಮತ್ತೆ ಮುಳುಗಿದ ಬೆಳಗಾವಿ : ಊರಿಂದೂರಿಗೆ ಗುಳೆ ಹೊರಟ ಜನ

ಈ ವರ್ಷ ಉತ್ತರ ಕರ್ನಾಟಕಕ್ಕೆ ಎರಡೆರಡು ಬಾರಿ ಸಂಕಷ್ಟ ಎದುರಾಗಿದೆ. ಮುಂಗಾರು ಮಳೆಯ ಪ್ರವಾಹಕ್ಕೆ ಬದುಕು ಕಳೆದುಕೊಂಡು, ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದ ಕಾಲದಲ್ಲೇ ಮತ್ತೆ ದುರ್ಗತಿ ಒದಗಿದೆ. ಹಿಂಗಾರು ಕೂಡ ರೌದ್ರ ರೂಪ ತಾಳಿದ್ದು, ಭಾನುವಾರ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ಬಹುಪಾಲು ಮುಳುಗಿದೆ.

Vijaya Karnataka Web 21 Oct 2019, 1:24 pm
ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತೆ ಜನಸಾಮಾನ್ಯ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮನೆ, ಶಾಲೆ, ಊರು, ರಸ್ತೆಗಳೆಲ್ಲ ನೀರಿನಿಂದ ಆವೃತವಾಗಿದ್ದು, ಜನರು ಊರನ್ನೇ ಬಿಡುವ ಪರಿಸ್ಥಿತಿ ಎದುರಾಗಿದೆ.
Vijaya Karnataka Web flood in belgavi


ಭಾನುವಾರ ರಾತ್ರಿ ಸುರಿದ ಮಳೆಗೆ ಹುದಲಿ ಬಳಿ ರಸ್ತೆ ಕುಸಿದಿದ್ದು, ಕೆ.ಎಸ್.ಆರ್.ಟಿ.ಸಿ. ಯ ಬೆಳಗಾವಿ- ಪಣಗುತ್ತಿ ಬಸ್ ರಸ್ತೆ ಬಿರುಕಿನಲ್ಲಿ ಸಿಲುಕಿಕೊಂಡಿದೆ. ಬಸ್ ಮೇಲೆತ್ತಲು ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ರಸ್ತೆ ಸಂಪರ್ಕ ಕಡಿತ:
ಮಳೆಯಿಂದ ಬೆಳಗಾವಿ- ರಾಮದುರ್ಗ ನಡುವಿನ ವಿವಿಧ ರಸ್ತೆಗಳಲ್ಲಿ ಸಂಚಾರವೂ ಸ್ಥಗಿತಗೊಂಡಿದೆ.
ರಾಮದುರ್ಗದಿಂದ ಕೊಣ್ಣೂರ, ರಾಮದುರ್ಗ- ಕಟಕೋಳ, ರಾಮದುರ್ಗ- ಮೂಲಂಗಿ, ಸುರೇಬಾನ- ಕುಲಗೇರಿ ರಸ್ತೆ ಸಂಪರ್ಕ ಕಡಿತಗೊಂಡಿವೆ ಎಂದು ಕೆ.ಎಸ್.ಆರ್.ಟಿ.ಸಿ‌ ಬೆಳಗಾವಿ ವಿಭಾಗದ ವ್ಯವಸ್ಥಾಪಕ ಮಹಾದೇವಪ್ಪ ಮುಂಜಿ ತಿಳಿಸಿದ್ದಾರೆ.



ರಾಮದುರ್ಗದಲ್ಲಿ ಗ್ರಾಮಗಳು ಜಲಾವೃತ
ಭಾನುವಾರ ರಭಸದ ಮಳೆಗೆ ಮಲಪ್ರಭಾ ನದಿ ಉಕ್ಕಿ ಹರಿದು ರಾಮದುರ್ಗದ ಕೆಲ ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಗೆಲ್ಲ ನೀರು ನುಗ್ಗಿದ್ದು, ಜನರು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ