ಆ್ಯಪ್ನಗರ

ಬೈಲಹೊಂಗಲ ಸುತ್ತಮುತ್ತ ವರುಣನ ಆರ್ಭಟ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ...

Vijaya Karnataka 20 May 2020, 5:00 am
ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿಮಂಗಳವಾರ ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು.
Vijaya Karnataka Web 19HTP3_53
ಬೈಲಹೊಂಗಲದಲ್ಲಿಮಂಗಳವಾರ ಸುರಿದ ಮಳೆಗೆ ಧರೆಗುರುಳಿದ ಮರ, ಮರದ ಕೆಳಗೆ ದ್ವಿಚಕ್ರ ವಾಹನ ಸಿಲುಕಿರುವುದು.


ಮಳೆಯೊಂದಿಗೆ ಆಲಿಕಲ್ಲುಗಳು ಬಿದ್ದವು. ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಪಟ್ಟಣದ ಬಜಾರ ರಸ್ತೆಯಲ್ಲಿಹೂವು, ಹಣ್ಣು, ತರಕಾರಿಗಳು ಕೊಚ್ಚಿ ಹೋದವು. ಬೃಹತ್‌ ಮರದ ಕೊಂಬೆ ನೆಲಕಪ್ಪಳಿಸಿತು. ಇದರಿಂದ ಚನಬಸಪ್ಪ ಬಸರಿಕಟ್ಟಿ ಅವರಿಗೆ ಸೇರಿದ ದ್ವಿಚಕ್ರ ವಾಹನ ನಜ್ಜುಗುಜ್ಜಾಯಿತು.

ಮಳೆಯಿಂದಾಗಿ ವಿದ್ಯುತ್‌ ಕಂಬಗಳು, ತಂತಿಗಳು ವಾಲಿದವು. ಇದರಿಂದ ವಿದ್ಯುತ್‌ ಸಂಪರ್ಕಕ್ಕೆ ವ್ಯತ್ಯಯ ಉಂಟಾಯಿತು. ನೀರಿನಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಆಯಿತು. ಬಸ್‌ ನಿಲ್ದಾಣದ ತಗ್ಗು ಪ್ರದೇಶ, ಬಜಾರ ರಸ್ತೆ ತಗ್ಗುಗಳಲ್ಲಿನೀರು ನಿಂತು ವಾಹನ, ನಾಗರಿಕರ ಓಡಾಟಕ್ಕೆ ಅಡಚಣೆ ಉಂಟಾಯಿತು. ಎಲ್ಲಗಟಾರಗಳು, ಹಳ್ಳಗಳು ತುಂಬಿ ಹರಿದವು. ಜಮೀನುಗಳಲ್ಲಿಮಳೆ ನೀರು ಸಂಗ್ರಹವಾಗಿತ್ತು.

200 ಕ್ವಿಂಟಲ್‌ ಗೋವಿನಜೋಳ ನೀರುಪಾಲು:

ಸಮೀಪದ ವಕ್ಕುಂದ ಗ್ರಾಮದಲ್ಲಿರೈತರು ಒಣಗಿಹಾಕಿದ್ದ 200 ಕ್ವಿಂಟಲ್‌ ಗೋವಿನಜೋಳ ಮಳೆ ನೀರಿಗೆ ತೇಲಿ ಹೋದವು. ಎಂಟು ಲಕ್ಷ ರೂ. ಮೌಲ್ಯದ ಜೋಳ ನೀರು ಪಾಲಾಯಿತು. ರೈತರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕಿತು.

ಬಹುತೇಕ ತಾಲೂಕಿನಾದ್ಯಂತ ಮಳೆ:

ಹೊಸೂರು, ಮಲ್ಲಮ್ಮನ ಬೆಳವಡಿ, ಸಿದ್ದಸಮುದ್ರ, ಬುಡರಕಟ್ಟಿ, ದೊಡವಾಡ, ಉಡಿಕೇರಿ, ಅಮಟೂರ, ಬೇವಿನಕೊಪ್ಪ, ದೇವಲಾಪುರ, ನಯಾನಗರ, ಆನಿಗೋಳ, ನೇಗಿನಹಾಳ, ಯರಡಾಲ, ಬೈಲವಾಡ ಗ್ರಾಮ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿಮಳೆ ಆಯಿತು.

ಅಂಗಡಿಗಳು ಬಂದ್‌ ಆಗಿದ್ದವು. ರಸ್ತೆಯಲ್ಲಿಬಿದ್ದಿದ್ದ ವಿದ್ಯುತ್‌ ಕಂಬ, ವಾಲಿದ ವಿದ್ಯುತ್‌ ತಂತಿಗಳ ತೆರವಿಗೆ ಹೆಸ್ಕಾಂ ಸಿಬ್ಬಂದಿ ಶ್ರಮಿಸಿದರು. ಗಿಡಮರ ಬೀಳುವ ಸಂಭವ ಬಗ್ಗೆ ಮೊದಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದರೂ ಪಟ್ಟಣದ ರಾಯಣ್ಣ ವೃತ್ತ, ಇನ್ನೂ ಹಲವೆಡೆ ಮರಗಳ ತೆರವಿಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು, ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ