ಬೆಳಗಾವಿ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಯುವಕ, 25 ಸೇತುವೆ ಮುಳುಗಡೆ
ಪಕ್ಕದ ಜಿಲ್ಲೆಗಳಿಂದ ತುರ್ತು ನಿರ್ವಹಣಾ ಪಡೆ, ಈಜು ತಜ್ಞರು, ದೋಣಿಗಳು ಸೇರಿದಂತೆ ರಕ್ಷಣಾ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಲಾಗುತ್ತಿದೆ ಎಂದು ಬೆಳಗಾವಿ ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ಧಾರೆ.
Vijaya Karnataka Web 3 Aug 2019, 4:55 pm
ಬೆಳಗಾವಿ: ಜಿಲ್ಲೆಯಲ್ಲಿ ಮುಂದುವರೆದ ಮಳೆಗೆ ಯುವಕನೋರ್ವ ಕೊಚ್ಚಿ ಹೋಗಿದ್ದು, ಚಿಕ್ಕೋಡಿ ಮತ್ತು ಅಥಣಿ ತಾಲೂಕಿನಲ್ಲಿ ಪ್ರವಾಹದ ಆತಂಕ ಶನಿವಾರವೂ ಮುಂದುವರಿದಿದೆ.
ಜಿಲ್ಲೆಯ ಸಪ್ತನದಿಗಳಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚಿರುವುದರಿಂದ ಒಟ್ಟು 25 ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಗೊಂಡಿವೆ.
ಗೋಕಾಕ್ ತಾಲೂಕಿನ ಅಂಕಲಿಗಿ ಗ್ರಾಮದಲ್ಲಿ ಬಳ್ಳಾರಿ ನಾಲಾ ನೀರಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಸೈಕಲ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಅಂಕಲಗಿ ಗ್ರಾಮದ ಶಿವಾನಂದ ನಾಯಕ್(25) ನಾಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ತಾಲೂಕಾ ಆಡಳಿತಾಕಾರಿಗಳು ಮತ್ತು ಪೊಲೀಸರು ಕೊಚ್ಚಿ ಹೋದ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಳೆ ಕಾರಣದಿಂದ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಪ್ರಾಣ ಹಾನಿ ಇದಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿ ಮೂಲಕ ಹರಿದು ಬರುತ್ತಿರುವ ಭಾರಿ ನೀರಿನ ಕಾರಣದಿಂದ ಚಿಕ್ಕೋಡಿ ಮತ್ತು ಅಥಣಿ ತಾಲೂಕಿನಲ್ಲಿ ತಗ್ಗು ಪ್ರದೇಶದ ಗ್ರಾಮಗಳು ಜಲಾವೃತಗೊಳ್ಳುತ್ತಿವೆ.
ಈಗಾಗಲೇ 620 ಕುಟುಂಬಗಳ 150 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದ್ದು, ತೋಟದಪಟ್ಟಿ ಕುಟುಂಬಗಳ ಸ್ಥಳಾಂತರ ಶನಿವಾರವೂ ಮುಂದುವರಿದಿದೆ.
ಮಹರಾಷ್ಟ್ರದ ನೀರು ಚಿಕ್ಕೋಡಿ ವಿಭಾಗದಲ್ಲಿ ಆತಂಕ ಸೃಷ್ಟಿಸಿದ್ದರೆ ಬೆಳಗಾವಿ ತಾಲೂಕಿನಲ್ಲೂ ಮಾರ್ಕಂಡೇಯ ನದಿ ನೀರು ಹಲವು ಗ್ರಾಮಗಳನ್ನು ನಡುಗಡ್ಡೆಯಾಗಿಸುತ್ತಿದೆ.
ಗೋಜಗಾ, ಮಣ್ಣೂರ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು ಸಾರ್ವಜನಿಕರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಬೆಳಗಾವಿ ನಗರದ ಹೊರವಲಯದ ಕಾಲನಿಗಳಲ್ಲೂ ಬಳ್ಳಾರಿ ನಾಲಾ ನೀರು ಮನೆಗಳಿಗೆ ನುಗ್ಗಲಾರಂಭಿಸಿದ್ದು ಮನೆಗಳು ಶೀತಿಲಗೊಂಡು ಕುಸಿತಗೊಳ್ಳುವ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಜಲಾಶಗಳು ಭರ್ತಿ ಹಂತ ತಲುಪಿರುವುದರಿಂದ ಭಾರಿ ಪ್ರಮಾಣದ ನೀರು ಹರಿ ಬಿಡುತ್ತಿರುವುದು ಬೆಳಗಾವಿ ಸೇರಿದಂತೆ ಬೀದರ, ರಾಯಚೂರುವರೆಗೂ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರದ ನಾನಾ ಜಲಾಶಯಗಳಿಂದ ಕೃಷ್ಣೆ ಹಾಗೂ ಉಪನದಿಗಳ ಮೂಲಕ 1.96 ಲಕ್ಷ ಕ್ಯುಸೆಕ್ ನೀರು ಹರಿ ಬಿಡಲಾಗಿದ್ದು, ಹರಿವಿನ ಪ್ರಮಾಣ 2 ಲಕ್ಷ ಕ್ಯುಸೆಕ್ ಮೀರಿದೆ.
ಮಹಾರಾಷ್ಟ್ರದ ಜಲಾಶಯಗಳಿಂದ ಹರಿದು ಬರುವ ನೀರಿನ ಪ್ರಮಾಣ 3 ಲಕ್ಷ ಕ್ಯುಸೆಕ್ ಮೀರಿದರೆ ಚಿಕ್ಕೋಡಿ ವಿಭಾಗದ ಬಹಳಷ್ಟು ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ತೀವ್ರ ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಗ್ಗು ಪ್ರದೇಶ ಮತ್ತು ತೋಟದಪಟ್ಟಿ ನಿವಾಸಿಗಳನ್ನು ಸ್ಥಳಾಂತರ ಕೆಲಸ ಆರಂಭಿಸಿದೆ.
ಜಿಲ್ಲೆಯ ಸಪ್ತನದಿಗಳಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚಿರುವುದರಿಂದ ಒಟ್ಟು 25 ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಗೊಂಡಿವೆ.
ಗೋಕಾಕ್ ತಾಲೂಕಿನ ಅಂಕಲಿಗಿ ಗ್ರಾಮದಲ್ಲಿ ಬಳ್ಳಾರಿ ನಾಲಾ ನೀರಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಸೈಕಲ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಅಂಕಲಗಿ ಗ್ರಾಮದ ಶಿವಾನಂದ ನಾಯಕ್(25) ನಾಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ತಾಲೂಕಾ ಆಡಳಿತಾಕಾರಿಗಳು ಮತ್ತು ಪೊಲೀಸರು ಕೊಚ್ಚಿ ಹೋದ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಳೆ ಕಾರಣದಿಂದ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಪ್ರಾಣ ಹಾನಿ ಇದಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿ ಮೂಲಕ ಹರಿದು ಬರುತ್ತಿರುವ ಭಾರಿ ನೀರಿನ ಕಾರಣದಿಂದ ಚಿಕ್ಕೋಡಿ ಮತ್ತು ಅಥಣಿ ತಾಲೂಕಿನಲ್ಲಿ ತಗ್ಗು ಪ್ರದೇಶದ ಗ್ರಾಮಗಳು ಜಲಾವೃತಗೊಳ್ಳುತ್ತಿವೆ.
ಈಗಾಗಲೇ 620 ಕುಟುಂಬಗಳ 150 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದ್ದು, ತೋಟದಪಟ್ಟಿ ಕುಟುಂಬಗಳ ಸ್ಥಳಾಂತರ ಶನಿವಾರವೂ ಮುಂದುವರಿದಿದೆ.
ಮಹರಾಷ್ಟ್ರದ ನೀರು ಚಿಕ್ಕೋಡಿ ವಿಭಾಗದಲ್ಲಿ ಆತಂಕ ಸೃಷ್ಟಿಸಿದ್ದರೆ ಬೆಳಗಾವಿ ತಾಲೂಕಿನಲ್ಲೂ ಮಾರ್ಕಂಡೇಯ ನದಿ ನೀರು ಹಲವು ಗ್ರಾಮಗಳನ್ನು ನಡುಗಡ್ಡೆಯಾಗಿಸುತ್ತಿದೆ.
ಗೋಜಗಾ, ಮಣ್ಣೂರ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು ಸಾರ್ವಜನಿಕರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಬೆಳಗಾವಿ ನಗರದ ಹೊರವಲಯದ ಕಾಲನಿಗಳಲ್ಲೂ ಬಳ್ಳಾರಿ ನಾಲಾ ನೀರು ಮನೆಗಳಿಗೆ ನುಗ್ಗಲಾರಂಭಿಸಿದ್ದು ಮನೆಗಳು ಶೀತಿಲಗೊಂಡು ಕುಸಿತಗೊಳ್ಳುವ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಜಲಾಶಗಳು ಭರ್ತಿ ಹಂತ ತಲುಪಿರುವುದರಿಂದ ಭಾರಿ ಪ್ರಮಾಣದ ನೀರು ಹರಿ ಬಿಡುತ್ತಿರುವುದು ಬೆಳಗಾವಿ ಸೇರಿದಂತೆ ಬೀದರ, ರಾಯಚೂರುವರೆಗೂ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರದ ನಾನಾ ಜಲಾಶಯಗಳಿಂದ ಕೃಷ್ಣೆ ಹಾಗೂ ಉಪನದಿಗಳ ಮೂಲಕ 1.96 ಲಕ್ಷ ಕ್ಯುಸೆಕ್ ನೀರು ಹರಿ ಬಿಡಲಾಗಿದ್ದು, ಹರಿವಿನ ಪ್ರಮಾಣ 2 ಲಕ್ಷ ಕ್ಯುಸೆಕ್ ಮೀರಿದೆ.
ಮಹಾರಾಷ್ಟ್ರದ ಜಲಾಶಯಗಳಿಂದ ಹರಿದು ಬರುವ ನೀರಿನ ಪ್ರಮಾಣ 3 ಲಕ್ಷ ಕ್ಯುಸೆಕ್ ಮೀರಿದರೆ ಚಿಕ್ಕೋಡಿ ವಿಭಾಗದ ಬಹಳಷ್ಟು ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ತೀವ್ರ ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಗ್ಗು ಪ್ರದೇಶ ಮತ್ತು ತೋಟದಪಟ್ಟಿ ನಿವಾಸಿಗಳನ್ನು ಸ್ಥಳಾಂತರ ಕೆಲಸ ಆರಂಭಿಸಿದೆ.