ಆ್ಯಪ್ನಗರ

ಭಂಡಾರದ ಮಜ್ಜನದಲ್ಲಿ ಮೇಳೈಸಿದ ಭಕ್ತಿ ಪರಾಕಾಷ್ಠೆ

ಯಮಕನಮರಡಿ: ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಲಕ್ಷ್ಮೀದೇವಿ ನೂತನ ಶಿಖರದ ಕಳಸಾರೋಹಣದ ಮೆರವಣಿಗೆ ...

Vijaya Karnataka 10 May 2019, 5:00 am
ಯಮಕನಮರಡಿ : ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಲಕ್ಷ್ಮೀದೇವಿ ನೂತನ ಶಿಖರದ ಕಳಸಾರೋಹಣದ ಮೆರವಣಿಗೆ ಗುರುವಾರ ಮಧ್ಯಾಹ್ನ ನಡೆಯಿತು.
Vijaya Karnataka Web BEL-9YMD6


ಹೆಬ್ಬಾಳ ಗ್ರಾಮದ ಕೊಟೆವಾಲೆ ತೋಟದ ಬಾವಿಯಿಂದ ಗ್ರಾಮದ ಸುಮಂಗಲೆಯರಿಂದ ಆರತಿ ಮತ್ತು ಕುಂಭೋತ್ಸವದೊಂದಿಗೆ ಪ್ರಾರಂಭಗೊಂಡ ಮೆರವಣಿಗೆ ಶ್ರೀ ವಿಠ್ಠಲ ಬೀರದೇವರ ಪಲ್ಲಕ್ಕಿ, ಶ್ರೀಗುಪ್ತಾದೇವಿ ಪಲ್ಲಕ್ಕಿ, ಶ್ರೀಲಕ್ಷ್ಮೀ ದೇವಿ ಪಲ್ಲಕ್ಕಿ, ಶ್ರೀ ಬಸವಣ್ಣ ದೇವರ ಪಲ್ಲಕ್ಕಿಗಳೊಂದಿಗೆ ನಡೆಯಿತು.

ನಂದಿಕೋಲು, ಡೊಳ್ಳು ಕುಣಿತ, ಚೌಡಕಿ ಪದ, ಕರಡಿ ಮಜಲು, ವಾಲಗ, ಶಹನಾಯಿ ವಾದನ, ಕಾಳಿಂಗ ವಾದ್ಯ ಹಾಗೂ ಹಲಗೆ ಮತ್ತು ತಮಟೆ ವಾದ್ಯ ಮೇಳಗಳು ಮೆರವಣಿಗೆಗೆ ಮೆರುಗು ತಂದವು.

ಜೈನ ಬಸದಿ ಮಾರ್ಗವಾಗಿ ಕೋಟೆವಾಲೆ ಬೀದಿಯಿಂದ ಹೊರಟು ಶ್ರೀ ಬಸವೇಶ್ವರ ದೇವಸ್ಥಾನದ ಮಾರ್ಗವಾಗಿ ನಡೆದ ಮೆರವಣಿಗೆಯಲ್ಲಿ ಭಕ್ತಾದಿಗಳು ಕುಣಿದು-ಕುಪ್ಪಳಿಸಿದರಲ್ಲದೆ ಶ್ರೀ ಲಕ್ಷ್ಮೀದೇವತೆಯ ನೂತನ ಗೋಪುರದ ನೂತನ ಕಳಸಗಳ ಮೆರವಣಿಗೆ ಗ್ರಾಮೀಣ ವಲಯದ ವಿಧಿ-ವಿಧಾನಗಳಂತೆ ನಡೆಯಿತು. ಇದೆಲ್ಲದರ ಮಧ್ಯೆ ಶ್ರೀಲಕ್ಷ್ಮೀ ದೇವಿಯ ಬೆಳ್ಳಿ ಮೂರ್ತಿಯ ಮೆರವಣಿಗೆಗೆ ಮತ್ತಷ್ಟು ವಿಶಿಷ್ಠತೆಯನ್ನು ಕಲ್ಪಿಸಿತ್ತು. ಮೆರವಣಿಗೆಯಲ್ಲಿ ಭಕ್ತಾದಿಗಳು ಭಂಡಾರದಲ್ಲಿ ಮಿಂದೆದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ