ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿಹುತಾತ್ಮರಾಗಿದ್ದ ವೀರಯೋಧ ರಾಹುಲ್ ಸುಳಗೇಕರ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ತಾಲೂಕಿನ ಉಚಗಾವಿಯಲ್ಲಿಶನಿವಾರ ಸಂಜೆ ಸಕಲ ಸರಕಾರಿ ಮತ್ತು ಸೇನಾ ಗೌರವಗಳೊಂದಿಗೆ ನೆರವೇರಿತು.
ಅಂತ್ಯಕ್ರಿಯೆಯಲ್ಲಿಗಣ್ಯಮಾನ್ಯರೂ ಸೇರಿದಂತೆ 25 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ನೆರೆಯ ಮಹಾರಾಷ್ಟ್ರದ ಗಡಿ ಭಾಗದ ತಾಲೂಕಿನವರೂ ಆಗಮಿಸಿದ್ದರು. ಜನ ಕಿಕ್ಕಿರಿದು ಸೇರಿದ್ದರಿಂದ ರಾಹುಲ್ ಮುಖದರ್ಶನ ಎಲ್ಲರಿಗೂ ಆಗಲಿಲ್ಲ. ಇದು ನೂಕುನುಗ್ಗಾಟದ ಸ್ಥಿತಿ ನಿರ್ಮಿಸಿತ್ತು. ಆದರೂ ಜನ ಬೇಸರಿಸಿಕೊಳ್ಳದೆ ಕೊನೆವರೆಗೂ ನಿಂತು ರಾಹುಲ್ ಪರ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಅಭಿಮಾನ ಮೆರೆದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮತ್ತು ಇತರೆ ಪ್ರಮುಖರು ಈ ಸಂದರ್ಭದಲ್ಲಿಮಾತನಾಡಿ, ಹುತಾತ್ಮ ಯೋಧನ ಶೌರ್ಯದ ಗುಣಗಾನ ಮಾಡಿದರು. ಶಾಸಕರಾದ ಅನಿಲ ಬೆನಕೆ, ಲಕ್ಷ್ಮೇ ಹೆಬ್ಬಾಳಕರ್, ಮಾಜಿ ಶಾಸಕ ಸಂಜಯ ಪಾಟೀಲ, ಚಂದಗಡ ಶಾಸಕ ರಾಜೇಶ ಪಾಟೀಲ, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಡಿಸಿಪಿ ಸೀಮಾ ಲಾಟ್ಕರ್, ಉಪವಿಭಾಗಾಧಿಕಾರಿ, ಮಿಲಿಟರಿ, ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಪ್ರಮುಖರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.
ಮರಾಠಾ ಲಘು ಪದಾತಿದಳದ ಯೋಧರು ಗಾಳಿಯಲ್ಲಿ8 ಸುತ್ತು ಕುಶಾಲ ತೋಪು ಹಾರಿಸಿ ಹುತಾತ್ಮ ರಾಹುಲ್ ಸುಳಗೇಕರ್ಗೆ ಗೌರವ ಸಲ್ಲಿಸಿದ ನಂತರ ತಂದೆ ಭೈರು ಸುಳಗೇಕರ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿ ಪುತ್ರನಿಗೆ ವಿದಾಯ ಹೇಳಿದರು. ಈ ಸಂದರ್ಭದಲ್ಲಿಕುಟುಂಬದವರ ಆಕ್ರಂದನ ಹಾಗೂ ನೆರೆದವರ ಅಮರ್ ರಹೇ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಮದುವೆ ಶಾಸ್ತ್ರ: ಅವಿವಾಹಿತನಾಗಿದ್ದ ಯೋಧನಿಗೆ ಮನೆಯಲ್ಲಿಮದುವೆ ಶಾಸ್ತ್ರ ನೆರವೇರಿಸಲಾಯಿತು. ವಿಧಿವಿಧಾನಗಳು ಮುಗಿದ ನಂತರ ಗ್ರಾಮದಲ್ಲಿದೊಡ್ಡ ಮೆರವಣಿಗೆ ನಡೆಸಿ ಸಂಜೆ 4ಕ್ಕೆ ಸ್ಮಶಾನ ತಲುಪಲಾಯಿತು. ಇಲ್ಲಿಸಂತಾಪ ಸಭೆ ಮತ್ತು ಇತರೆ ಕ್ರಿಯೆಗಳು ಮುಗಿದ ನಂತರ ಸಂಜೆ 5.45ಕ್ಕೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಎಲ್ಲರೂ ವೀರೋಚಿತ ವಿದಾಯ ಹೇಳಿದರು.
ಅದ್ಧೂರಿ ಮೆರವಣಿಗೆ:
ಯೋಧ ರಾಹುಲ್ ಶುಕ್ರವಾರ ಬೆಳಗಿನ ಜಾವ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ನಲ್ಲಿದೇಶದ ಗಡಿ ಕಾವಲು ನಡೆಸಿದ್ದಾಗ ಪಾಕಿಸ್ತಾನಿ ಸೈನಿಕರು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದರು. ಇವರಿಗೆ ಪ್ರತಿದಾಳಿ ನಡೆಸುತ್ತಿದ್ದಾಗ ರಾಹುಲ್ ವೀರಮರಣವನ್ನಪ್ಪಿದ್ದ. ಇವರ ಪಾರ್ಥಿವ ಶರೀರ ಜಮ್ಮುವಿನಿಂದ ವಿಶೇಷ ವಿಮಾನದಲ್ಲಿಬೆಂಗಳೂರಿಗೆ ಆಗಮಿಸಿತ್ತು. ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ನಲ್ಲಿನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ 1ಕ್ಕೆ ತರಲಾಯಿತು. ಸರಕಾರದ ಪರವಾಗಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಪುಷ್ಪ ಸಮರ್ಪಿಸಿದರು. ಶಾಸಕ ಅನಿಲ ಬೆನಕೆ, ಎಂಎಲ್ಐಆರ್ಸಿ ಬ್ರಿಗೇಡಿಯರ್ ಗೋವಿಂದ ಕಾಲವಾಡ, ಪೊಲೀಸ್ ಆಯುಕ್ತ ಲೋಕೇಶಕುಮಾರ್, ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಸೇನಾ ಯೋಧರು ಗೌರವ ಸಲ್ಲಿಸಿದರು.
ಇಲ್ಲಿಂದ ಪಾರ್ಥಿವ ಶರೀರವನ್ನು ಮಿಲಿಟರಿ ವಾಹನದಲ್ಲಿಎಂಎಲ್ಐಆರ್ಸಿಗೆ ಒಯ್ಯಲಾಯಿತು. ಮಾರ್ಗ ಮಧ್ಯದಲ್ಲಿರಾಣಿ ಚನ್ನಮ್ಮ ವೃತ್ತ ಸೇರಿದಂತೆ ಇತರೆ ಕಡೆಗೆ ಜನ, ಸಂಘ-ಸಂಸ್ಥೆಯವರು ಪುಷ್ಪವೃಷ್ಟಿ ಮಾಡಿ ನಮನ ಸಲ್ಲಿಸಿದರು. ಎಂಎಲ್ಐಆರ್ಸಿಯಲ್ಲಿಮಿಲಿಟರಿ ಗೌರವ ಸಲ್ಲಿಸಿದ ನಂತರ ಅದೇ ವಾಹನದಲ್ಲಿಪಾರ್ಥಿವ ಶರೀರವನ್ನು ಯೋಧನ ಸ್ವಗ್ರಾಮ ಉಚಗಾವಿಗೆ 1.45ಕ್ಕೆ ಒಯ್ಯಲಾಯಿತು. ಉಚಗಾವಿ ಕ್ರಾಸ್ನಿಂದ ಗ್ರಾಮದವರೆಗೂ ನಾನಾ ರೀತಿಯಲ್ಲಿಶೃಂಗಾರ ಮಾಡಿ ದೊಡ್ಡ ಸಂಖ್ಯೆಯಲ್ಲಿನೆರೆದಿದ್ದ ಜನ ಅದ್ಧೂರಿ ಮೆರವಣಿಗೆಯೊಂದಿಗೆ ಮನೆಗೆ ಕರೆದೊಯ್ದರು.
ಅಂತ್ಯಕ್ರಿಯೆಯಲ್ಲಿಗಣ್ಯಮಾನ್ಯರೂ ಸೇರಿದಂತೆ 25 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ನೆರೆಯ ಮಹಾರಾಷ್ಟ್ರದ ಗಡಿ ಭಾಗದ ತಾಲೂಕಿನವರೂ ಆಗಮಿಸಿದ್ದರು. ಜನ ಕಿಕ್ಕಿರಿದು ಸೇರಿದ್ದರಿಂದ ರಾಹುಲ್ ಮುಖದರ್ಶನ ಎಲ್ಲರಿಗೂ ಆಗಲಿಲ್ಲ. ಇದು ನೂಕುನುಗ್ಗಾಟದ ಸ್ಥಿತಿ ನಿರ್ಮಿಸಿತ್ತು. ಆದರೂ ಜನ ಬೇಸರಿಸಿಕೊಳ್ಳದೆ ಕೊನೆವರೆಗೂ ನಿಂತು ರಾಹುಲ್ ಪರ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಅಭಿಮಾನ ಮೆರೆದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮತ್ತು ಇತರೆ ಪ್ರಮುಖರು ಈ ಸಂದರ್ಭದಲ್ಲಿಮಾತನಾಡಿ, ಹುತಾತ್ಮ ಯೋಧನ ಶೌರ್ಯದ ಗುಣಗಾನ ಮಾಡಿದರು. ಶಾಸಕರಾದ ಅನಿಲ ಬೆನಕೆ, ಲಕ್ಷ್ಮೇ ಹೆಬ್ಬಾಳಕರ್, ಮಾಜಿ ಶಾಸಕ ಸಂಜಯ ಪಾಟೀಲ, ಚಂದಗಡ ಶಾಸಕ ರಾಜೇಶ ಪಾಟೀಲ, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಡಿಸಿಪಿ ಸೀಮಾ ಲಾಟ್ಕರ್, ಉಪವಿಭಾಗಾಧಿಕಾರಿ, ಮಿಲಿಟರಿ, ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಪ್ರಮುಖರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.
ಮರಾಠಾ ಲಘು ಪದಾತಿದಳದ ಯೋಧರು ಗಾಳಿಯಲ್ಲಿ8 ಸುತ್ತು ಕುಶಾಲ ತೋಪು ಹಾರಿಸಿ ಹುತಾತ್ಮ ರಾಹುಲ್ ಸುಳಗೇಕರ್ಗೆ ಗೌರವ ಸಲ್ಲಿಸಿದ ನಂತರ ತಂದೆ ಭೈರು ಸುಳಗೇಕರ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿ ಪುತ್ರನಿಗೆ ವಿದಾಯ ಹೇಳಿದರು. ಈ ಸಂದರ್ಭದಲ್ಲಿಕುಟುಂಬದವರ ಆಕ್ರಂದನ ಹಾಗೂ ನೆರೆದವರ ಅಮರ್ ರಹೇ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಮದುವೆ ಶಾಸ್ತ್ರ: ಅವಿವಾಹಿತನಾಗಿದ್ದ ಯೋಧನಿಗೆ ಮನೆಯಲ್ಲಿಮದುವೆ ಶಾಸ್ತ್ರ ನೆರವೇರಿಸಲಾಯಿತು. ವಿಧಿವಿಧಾನಗಳು ಮುಗಿದ ನಂತರ ಗ್ರಾಮದಲ್ಲಿದೊಡ್ಡ ಮೆರವಣಿಗೆ ನಡೆಸಿ ಸಂಜೆ 4ಕ್ಕೆ ಸ್ಮಶಾನ ತಲುಪಲಾಯಿತು. ಇಲ್ಲಿಸಂತಾಪ ಸಭೆ ಮತ್ತು ಇತರೆ ಕ್ರಿಯೆಗಳು ಮುಗಿದ ನಂತರ ಸಂಜೆ 5.45ಕ್ಕೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಎಲ್ಲರೂ ವೀರೋಚಿತ ವಿದಾಯ ಹೇಳಿದರು.
ಅದ್ಧೂರಿ ಮೆರವಣಿಗೆ:
ಯೋಧ ರಾಹುಲ್ ಶುಕ್ರವಾರ ಬೆಳಗಿನ ಜಾವ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ನಲ್ಲಿದೇಶದ ಗಡಿ ಕಾವಲು ನಡೆಸಿದ್ದಾಗ ಪಾಕಿಸ್ತಾನಿ ಸೈನಿಕರು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದರು. ಇವರಿಗೆ ಪ್ರತಿದಾಳಿ ನಡೆಸುತ್ತಿದ್ದಾಗ ರಾಹುಲ್ ವೀರಮರಣವನ್ನಪ್ಪಿದ್ದ. ಇವರ ಪಾರ್ಥಿವ ಶರೀರ ಜಮ್ಮುವಿನಿಂದ ವಿಶೇಷ ವಿಮಾನದಲ್ಲಿಬೆಂಗಳೂರಿಗೆ ಆಗಮಿಸಿತ್ತು. ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ನಲ್ಲಿನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ 1ಕ್ಕೆ ತರಲಾಯಿತು. ಸರಕಾರದ ಪರವಾಗಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಪುಷ್ಪ ಸಮರ್ಪಿಸಿದರು. ಶಾಸಕ ಅನಿಲ ಬೆನಕೆ, ಎಂಎಲ್ಐಆರ್ಸಿ ಬ್ರಿಗೇಡಿಯರ್ ಗೋವಿಂದ ಕಾಲವಾಡ, ಪೊಲೀಸ್ ಆಯುಕ್ತ ಲೋಕೇಶಕುಮಾರ್, ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಸೇನಾ ಯೋಧರು ಗೌರವ ಸಲ್ಲಿಸಿದರು.
ಇಲ್ಲಿಂದ ಪಾರ್ಥಿವ ಶರೀರವನ್ನು ಮಿಲಿಟರಿ ವಾಹನದಲ್ಲಿಎಂಎಲ್ಐಆರ್ಸಿಗೆ ಒಯ್ಯಲಾಯಿತು. ಮಾರ್ಗ ಮಧ್ಯದಲ್ಲಿರಾಣಿ ಚನ್ನಮ್ಮ ವೃತ್ತ ಸೇರಿದಂತೆ ಇತರೆ ಕಡೆಗೆ ಜನ, ಸಂಘ-ಸಂಸ್ಥೆಯವರು ಪುಷ್ಪವೃಷ್ಟಿ ಮಾಡಿ ನಮನ ಸಲ್ಲಿಸಿದರು. ಎಂಎಲ್ಐಆರ್ಸಿಯಲ್ಲಿಮಿಲಿಟರಿ ಗೌರವ ಸಲ್ಲಿಸಿದ ನಂತರ ಅದೇ ವಾಹನದಲ್ಲಿಪಾರ್ಥಿವ ಶರೀರವನ್ನು ಯೋಧನ ಸ್ವಗ್ರಾಮ ಉಚಗಾವಿಗೆ 1.45ಕ್ಕೆ ಒಯ್ಯಲಾಯಿತು. ಉಚಗಾವಿ ಕ್ರಾಸ್ನಿಂದ ಗ್ರಾಮದವರೆಗೂ ನಾನಾ ರೀತಿಯಲ್ಲಿಶೃಂಗಾರ ಮಾಡಿ ದೊಡ್ಡ ಸಂಖ್ಯೆಯಲ್ಲಿನೆರೆದಿದ್ದ ಜನ ಅದ್ಧೂರಿ ಮೆರವಣಿಗೆಯೊಂದಿಗೆ ಮನೆಗೆ ಕರೆದೊಯ್ದರು.