ಬಸವರಾಜ ಕೊಂಡಿ ಹುಕ್ಕೇರಿ
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣದಲ್ಲಿ ಕೈಗೊಂಡ 4 ಕೋಟಿ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಮುಕ್ತಾಯವಾಗಿ ಹಲವಾರು ತಿಂಗಳುಗಳು ಗತಿಸಿದರೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಉತ್ಸಾಹದ ಕೊರತೆಯಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ.
ಪಟ್ಟಣದ ಹೊರವಲದಲ್ಲಿ 1ಕಿಮೀ ದೂರದಲ್ಲಿ ತಾತ್ಕಾಲಿಕವಾಗಿ ಬಸ್ ನಿಲ್ಲಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಜನರಿಗೆ ಮಳೆಗಾಲದಲ್ಲಿ ನಿಂತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇಲ್ಲಿ ಮೂತ್ರಿಖಾನೆ ವ್ಯವಸ್ಥೆ ಕೂಡ ಇಲ್ಲ.
ಖಾಸಗಿ ವಾಹನಗಳ ಕಾಟ:
ಬಸ್ ನಿಲ್ಲುವ ಸ್ಥಳದಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿವೆ. ಇಂಥ ಖಾಸಗಿ ವಾಹನದವರು ತಮ್ಮ ವಾಹನದಲ್ಲಿ ಪ್ರಯಾಣ ಮಾಡುವಂತೆ ಜನರಿಗೆ ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಹೀಗಾಗಿಯೇ ಕೆಎಸ್ಆರ್ಟಿಸಿ ಬಸ್ ಚಾಲಕರ ಹಾಗೂ ಖಾಸಗಿ ವಾಹನದವರ ನಡುವೆ ಆಗಾಗ ತಂಟೆ ತಕರಾರುಗಳು ಇಲ್ಲಿ ಸಾಮಾನ್ಯವೆಂಬಂತಾಗಿದೆ.
ಶಾಸಕರ ಆದೇಶಕ್ಕೂ ಬೆಲೆಯಿಲ್ಲ:
ಇದೇ ಮಾರ್ಚ್ ತಿಂಗಳ ಎರಡು ಮೂರನೇ ವಾರದಲ್ಲಿ ಈ ನೂತನ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆಮಾಡಲು ಅನೂಕೂಲ ಮಾಡಿಕೊಡಬೇಕೆಂದು ಶಾಸಕ ಉಮೇಶ ಕತ್ತಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದಾದ ನಂತರ ಮತ್ತೆ ಎರಡು ಬಾರಿ ಬಸ್ ನಿಲ್ದಾಣಕ್ಕೆ ಭೆæೕಟಿ ನೀಡಿ ಮಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ''ಮೊದಲು ಬಸ್ ನಿಲ್ದಾಣ ಪ್ರಾರಂಭಿಸಿ ನಂತರ ಸಮಯ ಸಿಕ್ಕಾಗ ಉದ್ಘಾಟನೆ ಮಾಡೋಣ'' ಎಂದು ಹೇಳಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಇದರಿಂದ ಕೋಟಿ ಕೋಟಿ ಖರ್ಚು ಮಾಡಿದರೂ ಕೂಡ ಸಾರ್ವಜನಿಕರಿ ಉಪಯೋಗ ಬಾರದ ಬಸ್ನಿಲ್ದಾಣ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಜನರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಬೈಪಾಸ್ನಲ್ಲಿ ತಾತ್ಕಾಲಿಕವಾಗಿ ಬಸ್ ನಿಲುಗಡೆ ಮಾಡಿದ್ದಾರೆ. ಆದರೆ ಮಳೆಗಾಲದಲ್ಲಿ ಜನರಿಗೆ ನಿಂತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ, ಮಹಿಳೆಯರು, ಮಕ್ಕಳು, ವೃದ್ಧರಿಗೆ ಮಳೆಯಲ್ಲಿ ನಿಂತುಕೊಳ್ಳವುದು ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಬಸ್ ನಿಲ್ದಾಣ ಪ್ರಾರಂಭಿಸಬೇಕು.
- ಮುರಗೇಶ ಅಥಣಿ, ಸ್ಥಳೀಯ ನಿವಾಸಿ.
ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ಬಸ್ಸಿಗಾಗಿ ಮಳೆಯಲ್ಲಿ ಒದ್ದೆಯಾಗುತ್ತ ನಿಲ್ಲುವುದು ಅನಿವಾರ್ಯವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು.
- ಪ್ರಮೋದ ಪಾಟೀಲ, ನಿವಾಸಿ.
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣದಲ್ಲಿ ಕೈಗೊಂಡ 4 ಕೋಟಿ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಮುಕ್ತಾಯವಾಗಿ ಹಲವಾರು ತಿಂಗಳುಗಳು ಗತಿಸಿದರೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಉತ್ಸಾಹದ ಕೊರತೆಯಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ.
ಪಟ್ಟಣದ ಹೊರವಲದಲ್ಲಿ 1ಕಿಮೀ ದೂರದಲ್ಲಿ ತಾತ್ಕಾಲಿಕವಾಗಿ ಬಸ್ ನಿಲ್ಲಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಜನರಿಗೆ ಮಳೆಗಾಲದಲ್ಲಿ ನಿಂತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇಲ್ಲಿ ಮೂತ್ರಿಖಾನೆ ವ್ಯವಸ್ಥೆ ಕೂಡ ಇಲ್ಲ.
ಖಾಸಗಿ ವಾಹನಗಳ ಕಾಟ:
ಬಸ್ ನಿಲ್ಲುವ ಸ್ಥಳದಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿವೆ. ಇಂಥ ಖಾಸಗಿ ವಾಹನದವರು ತಮ್ಮ ವಾಹನದಲ್ಲಿ ಪ್ರಯಾಣ ಮಾಡುವಂತೆ ಜನರಿಗೆ ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಹೀಗಾಗಿಯೇ ಕೆಎಸ್ಆರ್ಟಿಸಿ ಬಸ್ ಚಾಲಕರ ಹಾಗೂ ಖಾಸಗಿ ವಾಹನದವರ ನಡುವೆ ಆಗಾಗ ತಂಟೆ ತಕರಾರುಗಳು ಇಲ್ಲಿ ಸಾಮಾನ್ಯವೆಂಬಂತಾಗಿದೆ.
ಶಾಸಕರ ಆದೇಶಕ್ಕೂ ಬೆಲೆಯಿಲ್ಲ:
ಇದೇ ಮಾರ್ಚ್ ತಿಂಗಳ ಎರಡು ಮೂರನೇ ವಾರದಲ್ಲಿ ಈ ನೂತನ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆಮಾಡಲು ಅನೂಕೂಲ ಮಾಡಿಕೊಡಬೇಕೆಂದು ಶಾಸಕ ಉಮೇಶ ಕತ್ತಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದಾದ ನಂತರ ಮತ್ತೆ ಎರಡು ಬಾರಿ ಬಸ್ ನಿಲ್ದಾಣಕ್ಕೆ ಭೆæೕಟಿ ನೀಡಿ ಮಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ''ಮೊದಲು ಬಸ್ ನಿಲ್ದಾಣ ಪ್ರಾರಂಭಿಸಿ ನಂತರ ಸಮಯ ಸಿಕ್ಕಾಗ ಉದ್ಘಾಟನೆ ಮಾಡೋಣ'' ಎಂದು ಹೇಳಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಇದರಿಂದ ಕೋಟಿ ಕೋಟಿ ಖರ್ಚು ಮಾಡಿದರೂ ಕೂಡ ಸಾರ್ವಜನಿಕರಿ ಉಪಯೋಗ ಬಾರದ ಬಸ್ನಿಲ್ದಾಣ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಜನರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಬೈಪಾಸ್ನಲ್ಲಿ ತಾತ್ಕಾಲಿಕವಾಗಿ ಬಸ್ ನಿಲುಗಡೆ ಮಾಡಿದ್ದಾರೆ. ಆದರೆ ಮಳೆಗಾಲದಲ್ಲಿ ಜನರಿಗೆ ನಿಂತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ, ಮಹಿಳೆಯರು, ಮಕ್ಕಳು, ವೃದ್ಧರಿಗೆ ಮಳೆಯಲ್ಲಿ ನಿಂತುಕೊಳ್ಳವುದು ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಬಸ್ ನಿಲ್ದಾಣ ಪ್ರಾರಂಭಿಸಬೇಕು.
- ಮುರಗೇಶ ಅಥಣಿ, ಸ್ಥಳೀಯ ನಿವಾಸಿ.
ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ಬಸ್ಸಿಗಾಗಿ ಮಳೆಯಲ್ಲಿ ಒದ್ದೆಯಾಗುತ್ತ ನಿಲ್ಲುವುದು ಅನಿವಾರ್ಯವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು.
- ಪ್ರಮೋದ ಪಾಟೀಲ, ನಿವಾಸಿ.