ಆ್ಯಪ್ನಗರ

ನಾಳೆ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಹೆದ್ದಾರಿ ಬಂದ್‌

ಯರಗಟ್ಟಿ: ಯರಗಟ್ಟಿ ತಾಲೂಕು ಕೇಂದ್ರ ಘೋಷಣೆಗೆ ಆಗ್ರಹಿಸಿ ಡಿ...

Vijaya Karnataka 6 Dec 2018, 5:00 am
ಯರಗಟ್ಟಿ : ಯರಗಟ್ಟಿ ತಾಲೂಕು ಕೇಂದ್ರ ಘೋಷಣೆಗೆ ಆಗ್ರಹಿಸಿ ಡಿ.7ರಂದು ಸ್ಥಳೀಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೋಕಾಕ-ಧಾರವಾಡ ಹಾಗೂ ಬೆಳಗಾವಿ-ಬಾಗಲಕೋಟ ರಾಜ್ಯ ಹೆದ್ದಾರಿಗಳನ್ನು ಬಂದ್‌ ಮಾಡಿ ಪ್ರತಿಭಟಿಸುವ ನಿರ್ಧಾರವನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.
Vijaya Karnataka Web BEL-5YGTPHOTO2


ಕರವೇ, ರಾಜ್ಯ ರೈತ ಸೇನೆ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಅಟೋ ಚಾಲಕರ ಸಂಘ, ಜನಕಲ್ಯಾಣ ಸಂಘ ಸೇರಿದಂತೆ ಗ್ರಾಮ ಹಾಗೂ ಸುತ್ತಮುತ್ತಲಿನ ನಾನಾ ಗ್ರಾಮಗಳ ವಿವಿಧ ಸಂಘಟನೆಗಳ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಯರಗಟ್ಟಿಯು ತಾಲೂಕು ಕೇಂದ್ರವಾಗಲು ಯೋಗ್ಯ ಸ್ಥಳವಾಗಿದೆ ಎಂದು ವಾಸುದೇವನ್‌, ಹುಂಡೇಕಾರ, ಗದ್ದಿಗೌಡರ ಸಮಿತಿಗಳು ವರದಿ ನೀಡಿದರೂ ಸರಕಾರ ಹಿಂದೇಟು ಹಾಕುವುದು ಸರಿಯಲ್ಲ ಎಂದು ಸಭೆಯಲ್ಲಿ ಅನೇಕರು ಅಭಿಪ್ರಾಯಪಟ್ಟರು. ಎಚ್‌.ಎಸ್‌.ಗಂಗರಡ್ಡಿ, ಸೋಮು ರೈನಾಪೂರ, ರಫೀಕ್‌ ಡಿ.ಕೆ., ಫಕೀರಪ್ಪ ಚನ್ನಮೇತ್ರಿ, ವಿಲ್ಸನ್‌ ಸೊಪ್ಪಡ್ಲ, ಪಿರೋಜ ಖಾದ್ರಿ, ಸಂಜು ಚನ್ನಮೇತ್ರಿ, ಶಮೀರ ಜಮಾದಾರ, ಕೆ.ಎಫ್‌. ನದಾಫ, ರಜಾಕ ದಿಲಾವರನಾಯ್ಕ, ದಿಲಾವರ ದೊಡಮನಿ, ಹಸನ್‌ ಹುಸೇನಾಯ್ಕರ, ಅಮೀರ ದೇವಡಿ, ಮಕ್ತುಮ್‌ ಜಮಾದಾರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ