ಆ್ಯಪ್ನಗರ

ಶಾಂತಿಯಿಂದ ಹೋಳಿ ಆಚರಿಸಿ

ಕೆಟ್ಟ ಆಲೋಚನೆಗಳನ್ನು ಸುಟ್ಟುಹಾಕಿ, ಒಳ್ಳೆಯದನ್ನು ಸ್ವೀಕರಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕೆಂಬುದೇ ಹೋಳಿ ಹಬ್ಬದ ಅರ್ಥ ಎಂದು ರಾಮದುರ್ಗ ಸಿಪಿಐ ಶ್ರೀನಿವಾಸ ಹಂಡಾ ...

Vijaya Karnataka 2 Mar 2018, 5:00 am

ಕಟಕೋಳ: ಕೆಟ್ಟ ಆಲೋಚನೆಗಳನ್ನು ಸುಟ್ಟುಹಾಕಿ, ಒಳ್ಳೆಯದನ್ನು ಸ್ವೀಕರಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕೆಂಬುದೇ ಹೋಳಿ ಹಬ್ಬದ ಅರ್ಥ ಎಂದು ರಾಮದುರ್ಗ ಸಿಪಿಐ ಶ್ರೀನಿವಾಸ ಹಂಡಾ ಹೇಳಿದರು.

Vijaya Karnataka Web news/belagavi/holi
ಶಾಂತಿಯಿಂದ ಹೋಳಿ ಆಚರಿಸಿ


ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ರಾಸಾಯನಿಕ ಬಣ್ಣಗಳನ್ನು ಬಳಸಬಾರದು, ಪ್ರಯಾಣಿಕರಿಗೆ ಬಣ್ಣ ಎರಚಬಾರದು ಎಂದರು. ಕೋಮು ಭಾವನೆ ಕೆರಳಿಸುವ ವ್ಯಕ್ತಿಗಳ ಮೇಲೆ, ಮದ್ಯ ಸೇವಿಸಿ ಬೈಕ್‌ ಸವಾರಿ ಮಾಡುವವರ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗುವುದು. ಎಲ್ಲರೂ ಶಾಂತಿಯಿಂದ ಹೋಳಿ ಹಬ್ಬ ಆಚರಿಸಿ ಪೊಲೀಸ್‌ ಇಲಾಖೆಗೆ ಸಹಕರಿಸಬೇಕೆಂದರು. ಕಟಕೋಳ ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿದರು.

ಎಸ್‌.ಎನ್‌. ಸಿಂಗರಗೊಪ್ಪ , ಶಿವಪ್ಪ ಮುನವಳ್ಳಿ, ಗ್ರಾಪಂ ಉಪಾಧ್ಯಕ್ಷ ಬಿ.ಎ. ದೇಸಾಯಿ, ಎಲ್‌.ಬಿ. ದೇಸಾಯಿ ಹಾಗೂ ಗ್ರಾಮದ ಪ್ರಮುಖರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ