ಆ್ಯಪ್ನಗರ

ಸಂಕ್ರಮಣದ ನಿಮಿತ್ತ ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ

ಹಲ್ಯಾಳ: ಗ್ರಾಮದಲ್ಲಿರುವ ಕೃಷ್ಣಾ ನದಿಗೆ ಅಥಣಿಯ ಸಿದ್ಧೇಶ್ವರ ದೇವಸ್ಥಾನ ಪಲ್ಲಕ್ಕಿ, ದೇವರ ಕುದುರೆ ಹಾಗೂ ಸಂಕೋನಟ್ಟಿಯ ಪರಮಾನಂದ ದೇವರ ಪಲ್ಲಕ್ಕಿ, ಚಿಕ್ಕಟ್ಟಿಯ ...

Vijaya Karnataka 16 Jan 2019, 5:00 am
ಹಲ್ಯಾಳ : ಗ್ರಾಮದಲ್ಲಿರುವ ಕೃಷ್ಣಾ ನದಿಗೆ ಅಥಣಿಯ ಸಿದ್ಧೇಶ್ವರ ದೇವಸ್ಥಾನ ಪಲ್ಲಕ್ಕಿ, ದೇವರ ಕುದುರೆ ಹಾಗೂ ಸಂಕೋನಟ್ಟಿಯ ಪರಮಾನಂದ ದೇವರ ಪಲ್ಲಕ್ಕಿ, ಚಿಕ್ಕಟ್ಟಿಯ ಲಕ್ಷ್ಮೀ ದೇವಿಯ ಪಲ್ಲಕ್ಕಿ , ಕರ್ಲಟ್ಟಿಯ ಬಸವೇಶ್ವರ ಪಲ್ಲಕ್ಕಿ ಸೇರಿದಂತೆ ಅನೇಕ ಗ್ರಾಮಗಳ ದೇವರ ಪಲ್ಲಕ್ಕಿಗಳನ್ನು ನದಿಗೆ ತಂದು ಪವಿತ್ರ ಕೃಷ್ಣಾ ನದಿ ಸ್ನಾನ ಮಾಡಿಸಲಾಯಿತು.
Vijaya Karnataka Web BEL-15 HALYAL 1


ನದಿ ದಡದಲ್ಲಿ ಎಲ್ಲ ಗ್ರಾಮಗಳ ಪಲ್ಲಕ್ಕಿ ಮತ್ತು ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರು ಸಜ್ಜಿ ರೊಟ್ಟಿ, ಎಳ್ಳು ಬೆಲ್ಲ, ಹೋಳಿಗೆ, ಸೇರಿದಂತೆ ಅನೇಕ ರೀತಿಯ ಪದಾರ್ಥಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ತಾವು ಸ್ವಿಕರಿಸಿ ಮಕರ ಸಂಕ್ರಾತಿ ಹಬ್ಬವನ್ನು ಆಚರಿಸಿದರು.

ಪೂಜೆ ಮುಗಿದ ನಂತರ ಆಯಾ ಪಲ್ಲಕ್ಕಿಗಳು ಸಾಲಾಗಿ ಸ್ವಗ್ರಾಮಗಳಿಗೆ ತೆರಳಿದವು. ಸಿದ್ದೇಶ್ವರ ದೇವರ ಪಲ್ಲಕ್ಕಿಗೆ ಮತ್ತು ಕುದುರೆಗೆ ದಾರಿಯಲ್ಲಿ ಭಕ್ತರು ನೀರು ಹಾಕಿ ತೆಂಗು ಒಡೆದು ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು.

ಮುದಕಣ್ಣಾ ಶೇಗುಣಸಿ, ಕುಮಾರ ಪತ್ತಾರ, ರಮೇಶ ಬಾದವಾಡಗಿ, ಅಣ್ಣಸಾಬ ತೇಲಸಂಗ, ಶಿವುಕುಮಾರ ಅಪರಾಜ, ಚಿದಾನಂದ ಶೇಗುಣಸಿ, ಮಹಾದೇವ ಮುಳವಾಡ, ಸಂಗಮೇಶ ಇಂಗಳಿ, ರಾವಸಾಬ ಬಿರಾದಾರ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ