ಆ್ಯಪ್ನಗರ

ಕ್ಯಾಂಡಲ್‌ ಬೆಳಗಿ ಬಾಲಕಿ ಲಕ್ಷ್ಮೀಗೆ ಶ್ರದ್ಧಾಂಜಲಿ ಅರ್ಪಣೆ

ಕುಡಚಿ: ಪರಮಾನಂದವಾಡಿಯ ಕಲ್ಮೇಶ್ವರ ನಗರದ ಬಾಲಕಿ ಲಕ್ಷ್ಮೀ ಅತ್ತಾಲಟ್ಟಿ ಬರ್ಬರ ಕೊಲೆ ...

Vijaya Karnataka 24 Oct 2019, 5:00 am
ಕುಡಚಿ: ಪರಮಾನಂದವಾಡಿಯ ಕಲ್ಮೇಶ್ವರ ನಗರದ ಬಾಲಕಿ ಲಕ್ಷಿತ್ರ್ಮೕ ಅತ್ತಾಲಟ್ಟಿ ಬರ್ಬರ ಕೊಲೆ ಘಟನೆ ಖಂಡಿಸಿ, ಸೋಮವಾರ ರಾತ್ರಿ ಕುಡಚಿ ಪಟ್ಟಣದ ಮರ್ಚಂಟ್‌ ಅಸೋಸಿಯೇಶನ್‌ನವರು ಹಾಗೂ ಗ್ರಾಮಸ್ಥರು ಕ್ಯಾಂಡಲ್‌ಗಳನ್ನು ಹಚ್ಚಿ ಮೆರವಣಿಗೆ ನಡೆಸಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಅರ್ಪಿಸಿದರು.
Vijaya Karnataka Web 23KUDACHI 1062833


ಪಟ್ಟಣದ ಕೂಬಾ ಮಶೀದಿಯಿಂದ ರೈಲು ನಿಲ್ದಾಣದವರೆಗೆ ಮೆರವಣೆಗೆ ನಡೆಸಿ ಬಾಲಕಿ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಆರಗೆ ಮಾತನಾಡಿ, ಲಕ್ಷ್ಮೇ ಕೊಲೆ ಮಾನವ ಕುಲ ತಲೆ ತಗ್ಗಿಸುವ ಅಮಾನವೀಯ ಘಟನೆಯಾಗಿದ್ದು ಇಂಥ ದುಷ್ಕರ್ಮಿಗಳಿಗೆ ಯಾವುದೇ ಅವಕಾಶ ನೀಡದೇ ನೇರವಾಗಿ ಗಲ್ಲುಶಿಕ್ಷೆ ನೀಡಬೇಕೆಂದರು.

ನಂತರ ಕುಡಚಿ ಮರ್ಚಂಟ್‌ ಅಸೋಶಿಯೇಶನ್‌ ಅಧ್ಯಕ್ಷರಾದ ಮುಷ್ತಾಕ್‌ ಬಾಗಶಿರಾಜ್‌ ಮಾತನಾಡಿ ಜನರಿಗೆ ಕಾನೂನಿನ ಬಗ್ಗೆ ಯಾವುದೇ ಅಂಜಿಕೆ ಆತಂಕ ಇಲ್ಲದಂತಾಗಿದೆ. ಹೀಗಾಗಿ ಇಂಥ ಘಟನೆಗಳು ಮತ್ತೆ ಮರುಕಳಿಸದಂತೆ ಅಪರಾಧಿಗೆ ನೇರವಾಗಿ ಗಲ್ಲುಶಿಕ್ಷೆ ನೀಡುವ ಕಾನೂನು ಜಾರಿಗೆ ತರಬೇಕು ಎಂದರು.

ಶ್ರೀಶೈಲ ದರೂರೆ, ಇಕ್ಬಾಲ್‌ ಕೋಲೆ, ಶ್ರೀಶೈಲ ತೇಲಿ, ತೌಫಿಕ್‌ ವಾಟೆ, ದಯಾನಂದ ಹಿರೇಮಠ, ವಿಠ್ಠಲ ಬೋಳೆ, ಶಿವಪ್ಪ ಗಸ್ತಿ, ಪ್ರಕಾಶ ದಾವಣೆ, ಸಂಜಯ ಸೂರ್ಯವಂಶಿ ಮುಂತಾದವರು ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ