ಆ್ಯಪ್ನಗರ

ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಬಾವನಸೌಂದತ್ತಿ: ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕರು ಮರಳಿಸಿ ಪ್ರಾಮಾಣಿಕತೆ ...

Vijaya Karnataka 31 May 2019, 5:00 am
ಬಾವನಸೌಂದತ್ತಿ : ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
Vijaya Karnataka Web BEL-30 BSDT 01


ಮಂಗಳವಾರ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ನಿವಾಸಿಯಾದ ಅಕ್ಕಾತಾಯಿ ಅನಗೋಳ ಅವರು ಬೆಳಗಾವಿ ವಿಭಾಗದ ಬೆಳಗಾವಿ-ವಿಜಯಪುರ ಬಸ್‌ನಲ್ಲಿ ಅಂಕಲಿ ಮಾರ್ಗವಾಗಿ ಯಡೂರ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.

ಚಿಕ್ಕೋಡಿ ನಿಲ್ದಾಣದಲ್ಲಿ ಬಸ್‌ ನಿಂತಾಗ ಬ್ಯಾಗ್‌ನ್ನು ಬಸ್‌ನಲ್ಲಿ ಬಿಟ್ಟು ಕೆಳಗೆ ಇಳಿದಿದ್ದರಿಂದ, ಬಸ್‌ ಅವರನ್ನು ಬಿಟ್ಟು ಮುಂದೆ ತೆರಳಿದೆ. ಬಸ್‌ನಲ್ಲಿದ್ದ ವಾರಸುದಾರರು ಇಲ್ಲದ ಬ್ಯಾಗ್‌ ಕಂಡ ನಿರ್ವಾಹಕ ಅದನ್ನು ಅಂಕಲಿ ನಿಲ್ದಾಣದ ಕಂಟ್ರೊಲರ್‌ ಬಳಿ ನೀಡಿ, ಅದರ ವಾರಸುದಾರರಿಗೆ ಮರಳಿಸುವಂತೆ ತಿಳಿಸಿ ಹೋಗಿದ್ದಾರೆ.

ಅಂಕಲಿ ಬಸ್‌ ನಿಲ್ದಾಣದ ಕಂಟ್ರೊಲರ್‌ ಎಂ.ಪಿ. ಚವ್ಹಾಣ ಪ್ರಯಾಣಿಕರಿಗೆ ಬ್ಯಾಗನ್ನು ಮರಳಿಸಿದ್ದಾರೆ. ಬ್ಯಾಗನಲ್ಲಿ7500 ರೂ. ಹಣ ಮತ್ತು ಬಟ್ಟೆ, ಒಡವೆ ಇದ್ದುದಾಗಿ ಅಕ್ಕಾತಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ