ಆ್ಯಪ್ನಗರ

ರೈತ, ಯೋಧರ ಬಗ್ಗೆ ಗೌರವವಿರಲಿ: ಚಕ್ರವರ್ತಿ ಸೂಲಿಬೆಲೆ

ರಾಮದುರ್ಗ: ಜೀವದ ಹಂಗು ತೊರೆದು ದೇಶರಕ್ಷ ಣೆ ಮಾಡುತ್ತಿರುವ ಸೈನಿಕರ ತ್ಯಾಗ ಅವಿಸ್ಮರಣಿಯ...

Vijaya Karnataka 6 Feb 2019, 5:00 am
ರಾಮದುರ್ಗ: ಜೀವದ ಹಂಗು ತೊರೆದು ದೇಶರಕ್ಷ ಣೆ ಮಾಡುತ್ತಿರುವ ಸೈನಿಕರ ತ್ಯಾಗ ಅವಿಸ್ಮರಣಿಯ. ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶ ರಕ್ಷ ಣೆ ಮಾಡುವ ಸೈನಿಕರ ಬಗ್ಗೆ ಗೌರವ ಇಟ್ಟುಕೊಳ್ಳಬೇಕೆಂದು ಯುವಾ ಬ್ರಿಗೇಡ್‌ ಪ್ರಮುಖ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Vijaya Karnataka Web BEL-05RD2


ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ 'ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸುಭದ್ರವಾಗಿರಲು ಮೋದಿ ಅವರ ಕಾರ್ಯ ಶ್ಲಾಘನೀಯ. 1.80 ಲಕ್ಷ ಗುಂಡು ನಿರೋಧಕ ಜಾಕೇಟ್‌ಗಳನ್ನು ಅವರು ಸೈನಿಕರಿಗೆ ನೀಡಿದ್ದಾರೆಂದು ಹೇಳಿದರು.

ಮೋದಿಯವರು ದೇಶದಲ್ಲಿ ಅನೇಕ ಕಾನೂನಾತ್ಮಕ ಬದಲಾವಣೆಯನ್ನು ತಂದು ದೇಶ ಬಲಿಷ್ಠವಾಗಲು ಶ್ರಮಿಸಿದ್ದಾರೆ. ಹಾಗಾಗಿ ಇಂದು ಬಲಿಷ್ಠ ರಾಷ್ಟ್ರಗಳು ದೇಶದೊಂದಿಗೆ ಹೊಂದಾಣಿಕ ಮಂತ್ರ ಜಪಿಸುತ್ತಿವೆ. ಯುವಕರ ದಂಡು ಮೋದಿ ಅವರನ್ನು ಬೆಂಬಲಿಸುತ್ತಿದೆಂದರು.

ಚಿಪ್ಪಲಕಟ್ಟಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾವಿತ್ರಿ ಕೋಲ್ಕಾರ ಮಾತಮಾಡಿದರು. ಡಾ.ಕೆ.ವಿ.ಪಾಟೀಲ, ಮಲ್ಲಣ್ಣ ಯಾದವಾಡ, ಈರನಗೌಡ ಹೊಸಗೌಡ್ರ, ಮಾರುತಿ ಕೊಪ್ಪದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ನಿರಂಜನ ಸಾಲಿಮಠ ಸ್ವಾಗತಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ