ಆ್ಯಪ್ನಗರ

ಮನೆ ಕಳವು; ಆರೋಪಿಗಳ ಬಂಧನ

ಬೆಳಗಾವಿ: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬುಧವಾರ ಶಹಾಪುರ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ...

Vijaya Karnataka 15 Nov 2018, 5:00 am
ಬೆಳಗಾವಿ : ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬುಧವಾರ ಶಹಾಪುರ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಹಾಪುರ ಭಾರತನಗರದ ಶಂಕರ ಚಂದ್ರಕಾಂತ ಜಂತಿನಕಟ್ಟಿ (21) ಮತ್ತು ಹಳೇ ಬೆಳಗಾವಿಯ ಗಣೇಶ ಪೇಟೆಯ ಮಂಜುನಾಥ ಬಸವರಾಜ ಕಳ್ಳಿಮನಿ(22) ಬಂಧಿತ ಆರೋಪಿಗಳು.
Vijaya Karnataka Web BLG-1411-2-52-14MAHESH4


ಆರೋಪಿಗಳು ಅ. 21ರಂದು ಶಹಾಪುರದ ಶ್ರಂಗಾರಿ ಕಾಲನಿಯ ಶಿವಲೀಲಾ ಸುಣದೋಳಿ ಅವರ ಮನೆಯ ಬಾಗಿಲ ಬೀಗ ಮುರಿದು ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಕಾರ್ಯಾಚರಣೆ ಕೈಗೊಂಡಿದ್ದ ಶಹಾಪುರ ಠಾಣೆ ಪೊಲೀಸರು ಬುಧವಾರ ಹಳೇ ಬೆಳಗಾವಿ ಪ್ರದೇಶದಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಶಹಾಪುರ ಠಾಣೆ ಇನ್‌ಸ್ಪೆಕ್ಟರ್‌ ಜಾವೀದ ಮುಶಾಪುರಿ, ಪಿಎಸ್‌ಐ ಬಿ.ಕೆ. ನದಾಫ್‌, ಸಿಬ್ಬಂದಿ ಉದಯ ಪಾಟೀಲ, ಕೆ.ಎಂ. ರಾಮಚಂದ್ರಪ್ಪ, ಎಸ್‌.ಎಲ್‌. ದೇಶನೂರ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ