ಆ್ಯಪ್ನಗರ

ಮೂಗಿನ ಆಪರೇಷನ್‌ಗೆ ಹೋದ ಗೃಹಿಣಿ ಆಸ್ಪತ್ರೆಯಲ್ಲೇ ಸಾವು: ಬೈಲಹೊಂಗಲ ಸರಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ

ಮೂಗಿನಲ್ಲಿ ಬೆಳದ ಮಾಂಸದ ಆಪರೇಷನ್‌ಗೆಂದು ಹೋದ ಮಹಿಳೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಆಪರೇಷನ್‌ ವೇಳೆ ಅರವಳಿಕೆ ನೀಡುವಾಗ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಗೃಹಿಣಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Vijaya Karnataka Web 24 Sep 2019, 9:52 am
ಬೈಲಹೊಂಗಲ(ಬೆಳಗಾವಿ): ತಾಲ್ಲೂಕಿನ ತುರಮರಿ ಗ್ರಾಮದ ಗೃಹಿಣಿ ರಾಜಶ್ರೀ ಬಸವರಾಜ ಹದ್ದನ್ನವರ (26) ಮೂಗಿನಲ್ಲಿ ಮಾಂಸ ಬೆಳೆದಿದ್ದಕ್ಕೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯರು ಮೂಗಿನಲ್ಲಿ ಬೆಳೆದಿರುವ ಮಾಂಸ ತೆಗೆಯಲು ಆಪರೇಷನ್ ಮಾಡುವ ಸಲುವಾಗಿ ಚಿಕಿತ್ಸಾ ಘಟಕಕ್ಕೆ ಸೇರಿಸಿದ್ದರು. ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಗೃಹಿಣಿ ಸಾವಿಗೀಡಾಗಿದ್ದಾರೆ ಎಂದು ಮೃತ ಪತಿ, ತಂದೆ, ತಾಯಿ, ಕುಟುಂಬಸ್ಥರು ಆರೋಪಿಸಿದ್ದಾರೆ.
Vijaya Karnataka Web bylahongal



ವಿದ್ಯುತ್‌ ತಂತಿ ತಗುಲಿ ಗೃಹಿಣಿ ಸಾವು
ನಿರ್ಲಕ್ಷ್ಯ ತೋರಿದ ವೈದ್ಯರು ಆಸ್ಪತ್ರೆ ಆವರಣದಿಂದ ಪಾರಾಗಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತ ಗೃಹಿಣಿ ಕುಟುಂಬಸ್ಥರು ಆಕ್ರಂದಿಸುತ್ತಿದ್ದಾರೆ.. ಮೃತ ಗೃಹಿಣಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.

ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಿಂದ ಜಿಗಿದು ಗೃಹಿಣಿ ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ