ಆ್ಯಪ್ನಗರ

ಆರೋಗ್ಯ ಜಾಗೃತಿಗಾಗಿ ಬೃಹತ್‌ ಹಾಫ್‌ ಮ್ಯಾರಥಾನ್‌

ಬೆಳಗಾವಿ: ಜನರಲ್ಲಿಆರೋಗ್ಯ ಜಾಗೃತಿ ಮೂಡಿಸಲು ನಗರದಲ್ಲಿಭಾನುವಾರ ಬೃಹತ್‌ ...

Vijaya Karnataka 30 Sep 2019, 5:00 am
Vijaya Karnataka Web 29RAJU-13103219
ಬೆಳಗಾವಿ: ಜನರಲ್ಲಿಆರೋಗ್ಯ ಜಾಗೃತಿ ಮೂಡಿಸಲು ನಗರದಲ್ಲಿಭಾನುವಾರ ಬೃಹತ್‌ ಹಾಫ್‌ ಮ್ಯಾರಥಾನ್‌ ನಡೆಯಿತು.

ಎಲ್ಲವಯೋಮಾನದವರಿಗೂ ಅನುಕೂಲವಾಗುವಂತೆ ಮ್ಯಾರಥಾನ್‌ನಲ್ಲಿ21, 10, 5 ಕಿ.ಮೀ. ಮತ್ತು ಫನ್‌ರನ್‌ ಓಟದ ವಿಭಾಗ ಮಾಡಲಾಗಿತ್ತು. 5 ಕಿ.ಮೀ. ದೂರದ ಓಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮಾಜಿ ಕ್ರೀಡಾಪಟುಗಳಾದ ವೆಂಕಟೇಶ ಪ್ರಸಾದ ಮತ್ತು ಸುನೀಲ ಜೋಶಿ, 21 ಕಿ.ಮಿ. ಓಟಕ್ಕೆ ಮೇಜರ್‌ ಜನರಲ್‌ ಅಲೋಕ್‌ ಕಕ್ಕರ್‌ ಕ್ಲಬ್‌ ರಸ್ತೆಯ ಸಿಪಿಇಡಿ ಮೈದಾನದಲ್ಲಿಧ್ವಜ ಬೀಸುವ ಮೂಲಕ ಚಾಲನೆ ನೀಡಿದರು. ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ಕುಮಾರ, ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ, ಹೆಚ್ಚುವರಿ ಎಸ್ಪಿ ರಾಮಲಕ್ಷ್ಮಣ ಅರಸಿದ್ದಿ, ರೋಟರಿ ಮಾಜಿ ಗವರ್ನರ್‌, ಅವಿನಾಶ್‌ ಪೋತದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಕಡೆಯಿಂದ 3500ಕ್ಕೂ ಹೆಚ್ಚು ಜನ ಓಟದಲ್ಲಿಪಾಲ್ಗೊಂಡು ಉತ್ಸಾಹ ತೋರಿದರು.

ಜುಂಬಾ ಡಾನ್ಸ್‌ ಮೂಲಕ ವಾರ್ಮಅಪ್‌ ಮಾಡಿ ಓಟ ಆರಂಭಿಸಲಾಯಿತು. ಇದು ಹನುಮಾನನಗರ, ಹಿಂಡಲಗಾ ಗಣೇಶ ಗುಡಿ, ಕಂಟೋನ್ಮೆಂಟ್‌, ಶರ್ಕತ್‌ ಪಾರ್ಕ್, ಕಮಾಂಡೋ ಟ್ರೇನಿಂಗ್‌ ಪ್ರದೇಶ ಸೇರಿದಂತೆ ಇತರೆ ಕಡೆಗೆ ಸುತ್ತಿ ಮರಳಿ ಸಿಪಿಇಡಿ ಮೈದಾನಕ್ಕೆ ಬಂದು ಮುಕ್ತಾಯ ಕಂಡಿತು.

ನಗರದ ಲೇಕ್‌ವ್ಯೂ ಫೌಂಡೇಶನ್‌, ರೋಟರಿ ಕ್ಲಬ್‌ ಆಫ್‌ ವೇಣುಗ್ರಾಮ ಸಂಯುಕ್ತವಾಗಿ ಇದನ್ನು ಸಂಘಟಿಸಿದ್ದವು. ಬೆಳಗಾವಿ ರೇಜೆಂತಾ ರೇಸಾರ್ಟ್‌, ಕೆನರಾ ಬ್ಯಾಂಕ್‌, ಬಿಪಿಸಿಎಲ್‌, ತುಮಕೂರು ತಟ್ಟೆಇಡ್ಲಿ, ಬೆಳಗಾವಿ ಬ್ಲಡ್‌ಬ್ಯಾಂಕ್‌, ಸ್ನೇಹಮ್‌ ಇಂಟರ್‌ನ್ಯಾಶನಲ್‌, ಎನ್‌ಕೆಜಿಎಸ್‌ಬಿ ಬ್ಯಾಂಕ್‌, ಏಕಸ್‌, ಕೆಎಂಎಫ್‌, ಅದಿತ್ಯ ಮಿಲ್‌್ಕ ಇದಕ್ಕೆ ಸಹಯೋಗ ನೀಡಿದ್ದವು.

ಸಂಘಟಕ ಡಾ. ಶಶಿಕಾಂತ ಕುಲಗೋಡ, ಲೇಕವ್ಯೂ ಫೌಂಡೇಶನ್‌ ಅಧ್ಯಕ್ಷ ಡಾ. ಸಂಜಯ… ಹೊಸಳ್ಳಿ, ಡಾ. ಗಿರೀಶ್‌ ಸೋನವಾಲಕರ, ರೋಟರಿ ಕ್ಲಬ… ಆಫ್‌ ವೇಣುಗ್ರಾಮ ಅಧ್ಯಕ್ಷ ಡಾ. ರಾಜೇಶ್‌ಕುಮಾರ ತೇಲಗಾಂವ್‌, ಉಮೇಶ್‌ ರಾಮಗುರವಾಡಿ, ವಿನಯ…ಕುಮಾರ ಬಾಳಿಕಾಯಿ, ಕುಲದೀಪ್‌ ಹಂಗರಗೇಕರ, ಡಿ.ಬಿ. ಪಾಟೀಲ ಮ್ಯಾರಥಾನ್‌ಗೆ ಅತ್ಯುತ್ತಮ ಸ್ಪಂದನೆ ಸಿಕ್ಕಿರುವುದನ್ನು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ