ಆ್ಯಪ್ನಗರ

ನೆರೆ ಪರಿಹಾರ ವಿಳಂಬ ಖಂಡಿಸಿ ಹುಲಗಬಾಳಿ ಗ್ರಾಮಸ್ಥರ ಪ್ರತಿಭಟನೆ

ಹುಲಗಬಾಳಿ: ಕಳೆದ ಆಗಸ್ಟ್‌ ತಿಂಗಳಲ್ಲಿಸುರಿದ ಧಾರಾಕಾರ ...

Vijaya Karnataka 2 Feb 2020, 5:00 am
ಹುಲಗಬಾಳಿ: ಕಳೆದ ಆಗಸ್ಟ್‌ ತಿಂಗಳಲ್ಲಿಸುರಿದ ಧಾರಾಕಾರ ಮಳೆಯಿಂದ ಹುಲಗಬಾಳಿ ಗ್ರಾಮ ಸಂಪೂರ್ಣ ಹಾನಿಗೊಳಗಾಗಿ ಜನರು ತತ್ತರಿಸಿ ಹೋಗಿದ್ದರೂ ಈವರೆಗೆ ಅನೇಕ ಜನರಿಗೆ ಪರಿಹಾರ ದೊರಕದಿರುವುದನ್ನು ಖಂಡಿಸಿ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದರು.
Vijaya Karnataka Web 1HULAGBALI 1060236
ನೆರೆ ಪರಿಹಾರ ವಿಳಂಬ ಖಂಡಿಸಿ ಹುಲಗಬಾಳಿ ಗ್ರಾಮಸ್ಥರು ಪ್ರತಿಭಟಿಸಿದರು.


ಗ್ರಾಮದಲ್ಲಿನೆರೆ ಹಾನಿಗೊಳಗಾದ ಒಟ್ಟು 1200ಕ್ಕೂ ಹೆಚ್ಚು ಮನೆಗಳ ಸರ್ವೆ ಸರಿಯಾಗಿದ್ದು ಎ ಕಟಗರಿ ಯಲ್ಲಿರುವ 55 ಜನರಿಗೆ ಮಾತ್ರ ಹಣ ಜಮೆಯಾಗಿದೆ. ಉಳಿದ ಬಿ ಹಾಗೂ ಸಿ ಕೆಟಗರಿ ಯಲ್ಲಿರುವ ಜನರಿಗೆ ಒಂದು ಪೈಸೆ ಕೂಡ ಜಮಾ ಆಗಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಡಿಸೆಂಬರ್‌ ತಿಂಗಳಿನಲ್ಲಿನಡೆದ ಉಪಚುನಾವಣೆಯನ್ನು ಇದೇ ಕಾರಣಕ್ಕೆ ಬಹಿಷ್ಕರಿಸಲಾಗಿತ್ತು. ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆಯಲ್ಲಿಬಹಿಷ್ಕಾರ ಹಿಂಪಡೆದು ಮತದಾನ ಪ್ರಕ್ರಿಯೆಯಲ್ಲಿಗ್ರಾಮಸ್ಥರು ಪಾಲ್ಗೊಂಡಿದ್ದರು. ಆಗ ಸರಕಾರದ ಬಳಿ ಹಣದ ಕೊರತೆಯಿಲ್ಲಎಂದು ಹೇಳಿ ಭರವಸೆ ನೀಡಿದ್ದ ಜಿಲ್ಲಾಧಿಕಾರಿ ಸಹಿತ ಎಲ್ಲಜನಪ್ರತಿನಿಧಿಗಳು ಈಗ ತಮ್ಮದೇ ಕಾರ್ಯಗಳಲ್ಲಿಮಗ್ನರಾಗಿ ಇಲ್ಲಿನ ಜನಹಿತ ಕಡೆಗಣಿಸಿದ್ದಾರೆಂದು ಗ್ರಾಮಸ್ಥರು ದೂರಿದರು.

ಗ್ರಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಡೋಯಿಪಡೆ, ಸಂಜು ಹಾದಿಮನಿ, ಶಂಕರಗೌಡ ಪಾಟೀಲ…, ಸಖಾರಾಮ್‌ ಪವಾರ, ರಾಜು ಗಡೇಕರ, ಗಣೇಶ ಯಾದವ್‌, ನಾನಾ ಶಿಂಧೆ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ