ಆ್ಯಪ್ನಗರ

ರಾಡ್‌ನಿಂದ ಹೊಡೆದು ಪತಿಯ ಕೊಲೆ

ಬೆಳಗಾವಿ: ಕಬ್ಬಿಣದ ರಾಡ್‌ನಿಂದ ಹೊಡೆದು ಪತಿಯನ್ನೇ ಕೊಲೆ ಮಾಡಿರುವ ಘಟನೆ ಶುಕ್ರವಾರ ...

Vijaya Karnataka 5 Oct 2019, 5:00 am
ಬೆಳಗಾವಿ: ಕಬ್ಬಿಣದ ರಾಡ್‌ನಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಶುಕ್ರವಾರ ಲಕ್ಷ್ಮೀ ನಗರದಲ್ಲಿನಡೆದಿದೆ.
Vijaya Karnataka Web husband killed by wife assaulting by rod
ರಾಡ್‌ನಿಂದ ಹೊಡೆದು ಪತಿಯ ಕೊಲೆ


ಇಲ್ಲಿನ ಲಕ್ಷ್ಮೀ ನಗರದ ನಿವಾಸಿ ಕಿರಣ ಲೋಕರೆ (26) ಕೊಲೆಯಾದ ವ್ಯಕ್ತಿ. ಮಗನನ್ನು ನೋಡಲೆಂದು ಶುಕ್ರವಾರ ಪತ್ನಿಯ ತವರು ಮನೆಗೆ ಹೋದಾಗ ಪತ್ನಿ ಮತ್ತು ಆಕೆಯ ತಮ್ಮ ಕೂಡಿ ಹೊಡೆದು ಕೊಲೆ ಮಾಡಿದ್ದಾರೆ.

ಪತ್ನಿ ಸವಿತಾ, ಭಾಮೈದ ಜ್ಯೋತಿನಾಥ ಸೊಂಟಕ್ಕಿ ಕೊಲೆ ಮಾಡಿದ ಆರೋಪಿತರು.
ಐದು ವರ್ಷಗಳಿಂದ ಪ್ರೀತಿಸಿದ ಕಿರಣ ಸವಿತಾಳನ್ನು ಮದುವೆಯಾಗಿದ್ದ. ಒಂದು ವರ್ಷದ ಹಿಂದೆ ಅವರಲ್ಲಿಮನಸ್ತಾಪ ಉಂಟಾಗಿದ್ದರಿಂದ 2 ತಿಂಗಳ ಹಿಂದೆ ಪತಿ-ಪತ್ನಿ ದೂರಾಗಿದ್ದರು. ಶುಕ್ರವಾರ ತಮ್ಮ ಎರಡು ವರ್ಷದ ಮಗನನ್ನು ನೋಡಲೆಂದು ಕಿರಣ ಅದೇ ಕಾಲನಿಯಲ್ಲಿರುವ ಪತ್ನಿ ತವರು ಮನೆಗೆ ಹೋದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಅಲ್ಲಿಂದ ತಮ್ಮ ಮನೆಗೆ ಬರುವಾಗ ಹಿಂದಿನಿಂದ ಬಂದ ಪತ್ನಿ ಸವಿತಾ ಮತ್ತು ಭಾಮೈದ ಜ್ಯೋತಿನಾಥ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕಿರಣ ತಾಯಿ ಗೌರಮ್ಮ ಲೋಕರೆ ಶಹಾಪುರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಶಹಾಪುರ ಠಾಣೆ ಪಿಐ ಜಾವೇದ ಮುಶಾಪುರೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ