ಆ್ಯಪ್ನಗರ

ಪ್ರವಾಹದಲ್ಲಿ 'CA' ಪುಸ್ತಕ ತೇಲಿ ಹೋಗಿವೆ: ಸಿಎಂ ಬಳಿ ಅಳಲು ತೋಡಿಕೊಂಡ ವಿದ್ಯಾರ್ಥಿನಿ

ಗಡಿನಾಡು ಬೆಳಗಾವಿಯಲ್ಲಿ ಭೀಕರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ

Vijaya Karnataka Web 8 Aug 2019, 3:06 pm
ಬೆಳಗಾವಿ: ಪ್ರವಾಹದಲ್ಲಿ ಚಾರ್ಟೆಡ್ ಅಕೌಂಟೆಂಟ್ (ಸಿಎ) ಪುಸ್ತಕಗಳು ತೇಲಿ ಹೋಗಿವೆ ಎಂದು ವಿದ್ಯಾರ್ಥಿನಿಯೊಬ್ಬಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಳಿ ಅಳಲು ತೋಡಿಕೊಂಡಿದ್ದಾಳೆ.
Vijaya Karnataka Web ca


ಭೀಕರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣ ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಸಂಕೇಶ್ವರದ ಗಂಜಿ ಕೇಂದ್ರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಸಂತ್ರಸ್ತರ ಗೋಳು ಕೇಳಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು, 'ಸಿಎಂ ಸಾಹೇಬ್ರ, ನಾನು ಸಿಎ ಕೋರ್ಸ್ ಓದುತ್ತಿದ್ದೇನೆ. ಮನೆಗೆ ನೀರು ನುಗ್ಗಿ ನನ್ನ ಪಠ್ಯಪುಸ್ತಕಗಳೆಲ್ಲ ನೀರು ಪಾಲಾಗಿವೆ. ನನಗೆ ಪಠ್ಯಪುಸ್ತಕ ಕೊಡಿಸಿ' ಎಂದು ಸೀಮಾ ಪ್ರಕಾಶ ಇಂಗಳಿ ಎಂಬ ವಿದ್ಯಾರ್ಥಿನಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ.

'ಪಟ್ಡಣದಲ್ಲಿ ತಳ್ಳುಗಾಡಿಯಿಂದ ಬರುವ ಆದಾಯದಲ್ಲಿ ಮಗಳಿಗೆ ಓದಸ್ತಾ ಇದ್ದೇನೆ. ಎಂಎ ಪದವಿಯಲ್ಲಿ ಮಗಳು ಗೋಲ್ಡ್ ಮೆಡಲ್ ಪಡೆದಿದ್ದಾಳೆ. ಈಗ ಇಂಥ ಪರಿಸ್ಥಿತಿ ಬಂದಿದೆ' ಎಂದು ತಂದೆ ಪ್ರಕಾಶ ಇಂಗಳಿ ಸಿಎಂ ಗಮನ ಸೆಳೆದರು.
ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ಒಂದೆರಡು ದಿನಗಳಲ್ಲಿ ಪುಸ್ತಕ ಒದಗಿಸುವುದಾಗಿ ಭರವಸೆ ನೀಡಿದರು.

ನೀವು ಆತಂಕಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಮಳೆ ನಿಂತ ಮೇಲೆ ಮನೆಗಳನ್ನು ನಿರ್ಮಿಸಿ ಎಲ್ಲ ಸೌಲಬ್ಯ ಕಲ್ಪಿಸುತ್ತವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಪ್ರಾಮಿಸ್ ಮಾಡಿ

ಸಿಎಂ ವಾಗ್ಧಾನಕ್ಕೆ ಸಿಡಿದೆದ್ದ ಯುವತಿ 'ಬರಿ ಭರವಸೆ ಬೇಡ, ಪ್ರಾಮಿಸ್ ಮಾಡಿ. ಯಾವಾಗ ಫಂಡ್ ರಿಲೀಸ್ ಮಾಡ್ತಿರಿ ಹೇಳಿ. ಯಾರೂ ನಮ್ಮ ಸಮಸ್ಯೆ ಕೇಳಲ್ಲ. ಎಷ್ಟು ದಿನಗಳೊಳಗೆ ಸಮಸ್ಯೆ ಪರಿಹರಿಸ್ತೀರಿ. ಪರಿಹಾರ ಯಾವಾಗ ಕೊಡ್ತೀರಿ' ಎಂದು ಯುವತಿಯೊಬ್ಬರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಪ್ರಸಂಗವೂ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ