ಆ್ಯಪ್ನಗರ

ಗಣ ರಾಜ್ಯೋತ್ಸವ: ಧ್ವಜಾರೋಹಣ ಮಾಡಿದ ಐಸ್‌ ಕ್ರೀಮ್‌ ಮಾರುವವ

ಧ್ವಜಾರೋಹಣ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬಾಬು ಶೇಖ್, ಗಣ ರಾಜ್ಯೋತ್ಸವದ ದ್ವಜಾರೋಹಣ ಮಾಡಿದ್ದು ನನ್ನ ಜೀವನದ ಮಹತ್ವದ ಕಾರ್ಯ. ಐದು ದಶಕಗಳ ಅವಧಿಯಲ್ಲಿ ಕಾಣದ ಸಂತೋಷ ಧ್ವಜಾರೋಹಣ ಮಾಡಿದಾಗ ಸಿಕ್ಕಿದೆ.

Vijaya Karnataka Web 26 Jan 2022, 6:23 pm
ಗೋಕಾಕ (ಬೆಳಗಾವಿ): ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಹಳೇ ಪಟ್ಟಣ ಪಂಚಾಯಿತಿ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಐಸ್ ಕ್ರೀಮ್‌ ಮಾರುವ ವ್ಯಕ್ತಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಗಮನ ಸೆಳೆದಿದ್ದಾರೆ.
Vijaya Karnataka Web ಬೆಳಗಾವಿ
ಬೆಳಗಾವಿ


ಬುಧವಾರ ಆಯೊಜಿಸಿದ್ದ 73ನೇ ಗಣರಾಜ್ಯೋತ್ಸವ ದಿನದಂದು ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ಐವತ್ತು ವರ್ಷಗಳಿಂದ ಐಸ್ ಕ್ರೀಮ್ ಮಾರಿ ಜೀವನ ನಿರ್ವಹಣೆ ಮಾಡುತ್ತ ಬರುತ್ತಿರುವ ಬಾಬು ಶೇಖ್ ಅವರ ಕೈಯಿಂದ ಧ್ವಜಾರೊಹಣ ಮಾಡಿಸಲು ನಿರ್ಧರಿಸಿದ್ದರು. ಅದೇ ಪ್ರಕಾರ ಬುಧವಾರ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಬಾಬು ಶೇಖ 73ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದ್ದಾರೆ.

ವಿಸ್ತಾರ, ವಿನ್ಯಾಸದಲ್ಲಿ ಚಾರಿತ್ರ್ಯಿಕವಾಗಿ ಇತಿಹಾಸ ಹೊಂದಿರುವ ಜಿಲ್ಲೆ ಬೆಳಗಾವಿ : ಸಚಿವ ಗೋವಿಂದ ಕಾರಜೋಳ

ಧ್ವಜಾರೋಹಣ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬಾಬು ಶೇಖ್, ಗಣ ರಾಜ್ಯೋತ್ಸವದ ದ್ವಜಾರೋಹಣ ಮಾಡಿದ್ದು ನನ್ನ ಜೀವನದ ಮಹತ್ವದ ಕಾರ್ಯ. ಐದು ದಶಕಗಳ ಅವಧಿಯಲ್ಲಿ ಕಾಣದ ಸಂತೋಷ ಧ್ವಜಾರೋಹಣ ಮಾಡಿದಾಗ ಸಿಕ್ಕಿದೆ. ಇದಕ್ಕಿಂತ ಶ್ರೇಷ್ಠ ಕೆಲಸ ಮತ್ತು ಸಂತೋಷ ಮತ್ತೊಂದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

75 ವರ್ಷ ವಯಸ್ಸಿನ ಬಾಬು ಶೇಖ ಅವರು ನಿಸ್ವಾರ್ಥದಿಂದ ತಮ್ಮ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹಿನ್ನಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಂದಿರುವ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ವಾವರ ಕೈಯಿಂದ ಮಾಡಿಸಲು ನಿರ್ಧರಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ ಫೆಬ್ರವರಿಯಿಂದ ಹುಲಿ ಸಫಾರಿ..!

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ವಿನೋದ ಕರನಿಂಗ್, ಪ್ರಕಾಶ ಕರನಿಂಗ್, ಅಯೂಬ ಫಿರಜಾದೆ, ಮನೋಹರ ಮೇಗೆರೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಗ್ರಾಮ ವಾಸಿಗಳು ಪಾಲ್ಗೊಂಡಿದ್ದರು.

ಬೆಳಗಾವಿ-ತಾಳಗುಪ್ಪ ಹೆದ್ದಾರಿ ದುರಸ್ತಿಗೆ ಆಗ್ರಹ

ಕಕ್ಕೇರಿ ಖಾನಾಪುರ ತಾಲೂಕಿನ ಮುಖಾಂತರ ಹಾದು ಹೋಗುವ ಬೆಳಗಾವಿ- ತಾಳಗುಪ್ಪ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಖಾನಾಪುರದಿಂದ ನಂದಗಡ, ಬೇಕವಾಡ, ಬೀಡಿ, ಗೋಲಿಹಳ್ಳಿ, ರಾಮಾಪುರ, ಕಕ್ಕೇರಿ, ಲಿಂಗನಮಠ, ಮುಖಾಂತರ ಹಾದು ಹೋಗುವ ಈ ರಸ್ತೆ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಜತೆಗೆ ಹೆದ್ದಾರಿ ತುಂಬಾ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಅಪಘಾತದ ಭಯದಲ್ಲೇ ಸಂಚರಿಸುವಂತಾಗಿದೆ. ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಖಾನಾಪುರ, ಬೆಳಗಾವಿಗೆ ಈ ಹೆದ್ದಾರಿ ಮುಖಾಂತರ ಪ್ರಯಾಣಿಸುತ್ತಾರೆ. ರೈತರು ಫಸಲುಗಳನ್ನು ಈ ಹೆದ್ದಾರಿ ಮುಖಾಂತರ ಬೇರೆ ಪ್ರದೇಶದ ಮಾರುಕಟ್ಟೆಗೆ ಸಾಗಿಸುತ್ತಾರೆ. ರಸ್ತೆ ಹದಗೆಟ್ಟು ಹಲವಾರು ವರ್ಷಗಳಾದರೂ ದುರಸ್ತಿ ಕಾರ್ಯ ನಡೆದಿಲ್ಲ. ಸಂಬಂಧಿಸಿದ ಅಧಿಕಾರಿ

ಗಳು ಇನ್ನಾದರೂ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಕಕ್ಕೇರಿ ಗ್ರಾಪಂ ಅಧ್ಯಕ್ಷ ಭೀಮಪ್ಪ ಅಂಬೋಜಿ, ತಾಲೂಕು ರೈತ ಸಂಘಟನೆ ಅಧ್ಯಕ್ಷ ರುದ್ರಗೌಡ ಪಾಟೀಲ್‌ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ