ಆ್ಯಪ್ನಗರ

ಯಾವ ಸರಕಾರ ಬಂದರೂ ರಾಮ ಮಂದಿರದ ಬೇಡಿಕೆ ಅಚಲ

ಬೆಳಗಾವಿ: ''ರಾಮ ಮಂದಿರದ ನಮ್ಮ ಬೇಡಿಕೆ ಅಚಲ...

Vijaya Karnataka 15 Apr 2019, 5:00 am
ಬೆಳಗಾವಿ : ''ರಾಮ ಮಂದಿರದ ನಮ್ಮ ಬೇಡಿಕೆ ಅಚಲ. ಅದು ಅಯೋಧ್ಯೆಯಲ್ಲಿ ಈಗಿರುವ ಸ್ಥಳದಲ್ಲೇ ನಿರ್ಮಾಣವಾಗಬೇಕು. ಸಮೀಪದಲ್ಲಿ ಮಸೀದಿ ಕಟ್ಟಲು ಅಭ್ಯಂತರವಿಲ್ಲ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಈ ಕುರಿತು ನಮ್ಮ ಒತ್ತಾಯ ಇರುತ್ತದೆ'' ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web BLG-1404-2-52-14RAJU-1


ಹರಿದಾಸ ಹಬ್ಬ ಕಾರ್ಯಕ್ರಮಗಳ ನಿಮಿತ್ತ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಅವರು, ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

''ಮಂದಿರ ನಿರ್ಮಾಣದ ಸಂಗತಿಯಲ್ಲಿ ಸಂಸತ್‌ನಲ್ಲಿ ನಿರ್ಣಯ ಇಲ್ಲವೆ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಾಯ ಇತ್ತು. ಆದರೆ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದು, ಪ್ರತಿಪಕ್ಷಗಳ ಅಸಹಕಾರ ಹಾಗೂ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈಗಿನ ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಪ್ರಯಾಗರಾಜ್‌ದಲ್ಲಿ ಜರುಗಿದ ಸಂತರ ಸಮಾವೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಮ ಮಂದಿರದ ವಿಷಯ ಕೈಗೆತ್ತಿಕೊಳ್ಳುವುದು ಬೇಡವೆಂದು ನಿರ್ಣಯಿಸಿದ್ದು, ಹೀಗಾಗಿ ನಾಲ್ಕು ತಿಂಗಳ ಕಾಲ ಸುಮ್ಮನಿರುವುದಾಗಿ'' ತಿಳಿಸಿದರು.

''ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಮಾಯಾವತಿ ಅವರು ಮುಸ್ಲಿಂ ತುಷ್ಠೀಕರಣದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ಈಗ ಸ್ವಲ್ಪ ಹಿಂದೂಪರವಾಗಿದ್ದರೂ, ಅದು ರಾಮ ಮಂದಿರದ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಡಿಸಬೇಕು. ಮಂದಿರದ ನಿರ್ಮಾಣದ ಸಂಗತಿಯಲ್ಲಿ ನಾವೆಲ್ಲ ಸುಪ್ರೀಂಕೋರ್ಟ್‌ ತೀರ್ಪನ್ನು ಕಾಯುತ್ತಿದ್ದೇವೆ. ನಂತರ ಮುಂದಿನ ಹೆಜ್ಜೆ ಇಡುತ್ತೇವೆ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ