ಆ್ಯಪ್ನಗರ

‘ಸಂತ್ರಸ್ತರಿಗೆ ಮನೆ ಕೊಡದಿದ್ದರೆ ಸರಕಾರ ಕೆಡವುತ್ತೇನೆ’ ಎಂದ ಶಾಸಕ!

ಗೋಕಾಕ: ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...

Vijaya Karnataka 14 Aug 2019, 5:00 am
ಗೋಕಾಕ: ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ''ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರಕಾರ ಕೆಡವಿ ಬಿಡುತ್ತೇನೆ'', ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್‌ ಆಗಿದೆ.
Vijaya Karnataka Web BEL-13GOK1


ಅರಬಾವಿ ಕ್ಷೇತ್ರದ ತಿಗಡಿ ಗ್ರಾಮದಲ್ಲಿ ಸೋಮವಾರ ಸಂಜೆ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ಹೇಳುವ ವೇಳೆ ಬಾಲಚಂದ್ರ ಈ ಮಾತು ಹೇಳಿದ್ದರು. ಮಂಗಳವಾರ ಅದರ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಶಾಸಕರ ಹೇಳಿಕೆ ಕುರಿತಂತೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಬಾಲಚಂದ್ರ ಜಾರಕಿಹೊಳಿ, ''ಬಾಯ್ತಪ್ಪಿನಿಂದ ಈ ಹೇಳಿಕೆ ಬಂದಿದೆ ವಿನಃ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ'', ಎಂದು ಸ್ಪಷ್ಟಪಡಿಸಿದ್ದಾರೆ. ''ತಿಗಡಿ ಗ್ರಾಮದಲ್ಲಿ ಸಂತ್ರಸ್ತರ ಕಷ್ಟ-ಕಾರ್ಪಣ್ಯಗಳನ್ನು ವಿಚಾರಿಸುತ್ತಿರುವಾಗ ಕೆಲವರು ನಮಗೆ ಮನೆ ಕಟ್ಟಿಸಿಕೊಡಿ, ಇಲ್ಲದಿದ್ದರೆ ಸರಕಾರ ಕೆಡವಿ ಎಂದು ಹೇಳಿದಾಗ, ಅವರನ್ನು ಸಮಾಧಾನಪಡಿಸಲು ಸರಕಾರ ನಿಮ್ಮ ಕೈಬಿಡುವುದಿಲ್ಲ ಎಂದು ಹೇಳುವ ಬದಲು ಬಾಯ್ತಪ್ಪಿನಿಂದ ಇಂತಹ ಹೇಳಿಕೆ ಬಂದಿದೆ. ಯಾರೂ ಅನ್ಯಥಾ ಭಾವಿಸಬೇಕಿಲ್ಲ'', ಎಂದು ಹೇಳಿದ್ದಾರೆ.

''ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಎಲ್ಲ ಕಡೆಗೂ ಭೇಟಿ ನೀಡಿ ನೆರೆ ಪೀಡಿತರಿಗೆ ಧೈರ್ಯ ತುಂಬುತ್ತಿದ್ದಾರೆ. ಪರಿಹಾರ ಕೂಡ ಘೋಷಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ಸಂತ್ರಸ್ತರಿಗೆ ಗರಿಷ್ಠ ಮಟ್ಟದ ಪರಿಹಾರ ಧನ ನೀಡಲಾಗುತ್ತಿದೆ. ನಾನೊಬ್ಬ ಪಕ್ಷ ದ ಶಿಸ್ತಿನ ಸಿಪಾಯಿ. ಪಕ್ಷ ನನಗೆ ಎಲ್ಲವನ್ನೂ ನೀಡಿರುವಾಗ ನಾನೇಕೆ ಸರಕಾರದ ವಿರುದ್ಧ ಮಾತನಾಡಲಿ'', ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ