ಆ್ಯಪ್ನಗರ

ಅವಕಾಶಗಳ ಅರಿವಿದ್ದರೆ ಹಿಂಜರಿಕೆ ಮಾಯ

ಮಹಿಳೆಯರು ಧೈರ್ಯವಾಗಿ ಮನೆಯಿಂದ ಹೊರಗೆ ಬಂದು ತಮ್ಮ ಪ್ರತಿಭೆ ಪ್ರದರ್ಶಿಸುವುದರ ಜತೆಗೆ ಎಲ್ಲ ಕ್ಷೇತ್ರಗಳಲ್ಲೂ ಸಬಲರಾಗುವಂತೆ ಮಾಡುವುದೇ ನಿಯತಿ ಫೌಂಡೇಶನ್‌ನ ಗುರಿಯಾಗಿದೆ ಎಂದು ಫೌಂಡೇಶನ್‌ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್‌ ಹೇಳಿದರು.

Vijaya Karnataka 1 Dec 2018, 5:00 am
ಬೆಳಗಾವಿ: ಮಹಿಳೆಯರು ಧೈರ್ಯವಾಗಿ ಮನೆಯಿಂದ ಹೊರಗೆ ಬಂದು ತಮ್ಮ ಪ್ರತಿಭೆ ಪ್ರದರ್ಶಿಸುವುದರ ಜತೆಗೆ ಎಲ್ಲ ಕ್ಷೇತ್ರಗಳಲ್ಲೂ ಸಬಲರಾಗುವಂತೆ ಮಾಡುವುದೇ ನಿಯತಿ ಫೌಂಡೇಶನ್‌ನ ಗುರಿಯಾಗಿದೆ ಎಂದು ಫೌಂಡೇಶನ್‌ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್‌ ಹೇಳಿದರು.
Vijaya Karnataka Web BLG-3011-2-52-30RAJU-4


ಇಲ್ಲಿನ ಭಾಗ್ಯನಗರದಲ್ಲಿ ಟೈಮ… ಕಿಡ್ಸ್‌ ಆಯೋಜಿಸಿದ್ದ ಹೋಮ್‌ ಮಿನಿಸ್ಟರ್‌ ಸೀಸನ್‌-2 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಜಗತ್ತು ಎಷ್ಟೇ ಮುಂದುವರಿದರೂ ಮಹಿಳೆಯರು ಮನೆಯಿಂದ ಹೊರಗೆ ಬರಲು ಯೋಚಿಸುತ್ತಾರೆ. ಮನೆಯೊಳಗಿನ ಜವಾಬ್ದಾರಿ ಒಂದು ಕಾರಣವಾದರೆ, ಸಮಾಜ ಏನು ತಿಳಿಯುತ್ತದೆಯೋ ಎನ್ನುವ ಹಿಂಜರಿಕೆ ಮತ್ತೊಂದು ಕಾರಣ. ಇದಕ್ಕೆಲ್ಲ ಕೊನೆ ಹಾಡಿ ಧೈರ್ಯವಾಗಿ ಮನೆಯಿಂದ ಹೊರಗೆ ಬಂದು ಸಮಾಜದ ಎಲ್ಲ ಆಗುಹೋಗುಗಳಲ್ಲಿ ಭಾಗಿಯಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಮಹಿಳೆಯರು ಕಾನೂನು ತಿಳಿವಳಿಕೆ, ಸರಕಾರದ ಯೋಜನೆಗಳ ತಿಳಿವಳಿಕೆ, ತಮಗಿರುವ ಅವಕಾಶಗಳನ್ನು ಅರಿತಾಗ ಯಾವುದೇ ಹಿಂಜರಿಕೆ ಇರುವುದಿಲ್ಲ. ಇಂದು ಪುರುಷರೂ ಕೂಡ ಮಹಿಳೆಯರಿಗೆ ಸಾಮಾಜಿಕ ಕೆಲಸದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಸಮಾಜ ಬದಲಾಗುತ್ತಿರುವುದರ ಪ್ರಯೋಜನ ಪಡೆದು ನಿಮ್ಮ ಕಾಲ ಮೇಲೆ ನೀವು ನಿಲ್ಲುವಂತೆ ಮುಂದೆ ಬನ್ನಿ ಎಂದು ಡಾ.ಸರ್ನೋಬತ್‌ ಕರೆ ನೀಡಿದರು.

ನೂರಾರು ಮಹಿಳೆಯರು ಹೋಮ್ ಮಿನಿಸ್ಟರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಿಂಜಲ್‌ ಅಮಟೆ ಹೋಮ… ಮಿನಿಸ್ಟರ್‌ ಆಗಿ ಆಯ್ಕೆಯಾದರು. ಪುಷ್ಪಾ ಹೈಬತ್ತಿ ಬೆಸ್ಟ್‌ ಡ್ರೆಸ್‌ ಅವಾರ್ಡ್‌, ನಿಖಿತಾ ಹೆರೇಕರ್‌ ಬೆಸ್ಟ್‌ ಹೇರ್‌ಸ್ಟೈಲ್‌ ಅವಾರ್ಡ್‌ ಪಡೆದರು.

ಡಾ.ಸಮೀರ್‌ ಸರ್ನೋಬತ್‌, ದೀಪಾ ಪ್ರಭು ದೇಸಾಯಿ, ಭಾಸ್ಕರ ಪಾಟೀಲ, ಕಿಶೋರ ಕಾಕಡೆ, ರಾಜಶ್ರೀ ಜಾಧವ, ಮೋನಾಲಿ ಶಹಾ, ಸೀಮಾ ಸೊಲ್ಲಾಪುರೆ, ತುಳಸಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ