ಸವದತ್ತಿ: ತಾಲೂಕಿನ ಬಡ್ಲಿತಾಂಡಾದಲ್ಲಿಸಂಗ್ರಹಿಸಿಟ್ಟಿದ್ದ ಕಳ್ಳಬಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಡ್ಲಿತಾಂಡಾದ ರಾಮಪ್ಪ ದುರಗಪ್ಪ ಪೂಜಾರಿ ಬಳಿ ಕಳ್ಳಬಟ್ಟಿ ಸಾರಾಯಿ ಮಾರಲು 4 ಲೀ. ಸಾಮರ್ಥ್ಯದ ಬಾಟಲಿಯಲ್ಲಿ2 ಲೀ. ಹಾಗೂ ಪಾರ್ವತಿ ರಮೇಶ ಲಮಾನಿ ಎಂಬ ಮಹಿಳೆಯ ಬಳಿ 4 ಲೀ. ಕ್ಯಾನ್ನಲ್ಲಿಸಂಗ್ರಹಿಸಿಟ್ಟಿದ್ದ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ. ರಾಮದುರ್ಗ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿಸವದತ್ತಿಯ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಪ್ರಿಯಾಂಕ ಗಲಬಿ, ಎಸ್.ಜಿ.ತಳವಾರ, ಕಿರಣ ತೇರದಾಳ, ಎಸ್.ಡಿ.ಕಮಲಾಪೂರ ದಾಳಿ ನಡೆಸಿದ್ದು, ಅಬಕಾರಿ ನಿರೀಕ್ಷಕ ರವಿ ಮರಿಗೌಡ್ರ ಉಪನಿರೀಕ್ಷಕ ಆರ್.ಜೆ. ಆರೆನ್ನವರ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಡ್ಲಿತಾಂಡಾದ ರಾಮಪ್ಪ ದುರಗಪ್ಪ ಪೂಜಾರಿ ಬಳಿ ಕಳ್ಳಬಟ್ಟಿ ಸಾರಾಯಿ ಮಾರಲು 4 ಲೀ. ಸಾಮರ್ಥ್ಯದ ಬಾಟಲಿಯಲ್ಲಿ2 ಲೀ. ಹಾಗೂ ಪಾರ್ವತಿ ರಮೇಶ ಲಮಾನಿ ಎಂಬ ಮಹಿಳೆಯ ಬಳಿ 4 ಲೀ. ಕ್ಯಾನ್ನಲ್ಲಿಸಂಗ್ರಹಿಸಿಟ್ಟಿದ್ದ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ. ರಾಮದುರ್ಗ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿಸವದತ್ತಿಯ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಪ್ರಿಯಾಂಕ ಗಲಬಿ, ಎಸ್.ಜಿ.ತಳವಾರ, ಕಿರಣ ತೇರದಾಳ, ಎಸ್.ಡಿ.ಕಮಲಾಪೂರ ದಾಳಿ ನಡೆಸಿದ್ದು, ಅಬಕಾರಿ ನಿರೀಕ್ಷಕ ರವಿ ಮರಿಗೌಡ್ರ ಉಪನಿರೀಕ್ಷಕ ಆರ್.ಜೆ. ಆರೆನ್ನವರ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.